ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ: ಮಹಾಶಿವರಾತ್ರಿ ಅಂಗವಾಗಿ ಉತ್ತರಕನ್ನಡ ಜಿಲ್ಲೆಯ ಬರ್ಗಿಯ ಮಹಾಲಿಂಗೇಶ್ವರ ದೇವಾಲಯದ ರಥಬಿದಿಯಲ್ಲಿ ಊರಿನ ಸಮಾನಮಸ್ಕರ ಯುವಕರ ಸಹಬಾಗಿತ್ವದಲ್ಲಿ, ಸಂಭ್ರಮದಿಂದ ದೀಪೋತ್ಸವ ನಡೆಯಿತು.
ಮಹಾಲಿಂಗೇಶ್ವರ ದೇವಸ್ಥಾನದ ಮುಖ್ಯಧ್ವಾರದಿಂದ ದೇಗುಲದ ವರಗೆ ಸಾವಿರಾರು ಸಂಖ್ಯೆಯಲ್ಲಿ ದೀಪಗಳ ವಿಶೇಷ ಅಲಂಕಾರ ಮಾಡಲಾಗಿತ್ತು.ಈ ದೀಪೋತ್ಸವದಲ್ಲಿ ಗ್ರಾಮದ ಮಹಿಳೆಯರು,ಪುರುಷರು, ಮಕ್ಕಳು ಸೇರಿದಂತೆ ನೂರಾರು ಮಂದಿ ಭಾಗಿಯಾಗಿ ಮಹಾಶಿವರಾತ್ರಿಯ ದೀಪೋತ್ಸವದಲ್ಲಿ ದೀಪಗಳ ಹಚ್ಚುವ ಮೂಲಕ ಕೆಲ ಸಮಯ ಶಿವನ ಆರಾಧನೆ ಮಾಡಿದ್ದರು.ನಾಲ್ಕು ಸಾವಿರಕ್ಕೂ ಅಧಿಕ ದೀಪಗಳನ್ನ ಹಚ್ಚಿದ್ದು ನೋಡುಗರ ಗಮಸೆಯುವಂತೆ ಮಾಡಿತ್ತು. ಇನ್ನೂ ಸ್ಥಳೀಯ ಭಜನಾ ಮಂಡಳಿಯಿಂದ ಮಹಾಲಿಂಗೇಶ್ವರ ದೇಗುಲದಲ್ಲಿ ಭಜನಾ ಕಾರ್ಯಕ್ರಮ ಕೂಡ ನಡೆಸಲಾಯಿತು.
ಮುಂದಿನ ದಿನದಲ್ಲಿಯೂ ಸಹ ಬರ್ಗಿಯಲ್ಲಿ ನಡೆಯುವ ಇಂತಹ ಧಾರ್ಮಿಕ ಕಾರ್ಯಕ್ರಮಳನ್ನ ಹಮ್ಮಿಕೊಳ್ಳುವಂತಾಗಬೇಕೆಂದು. ಒಳ್ಳೆಯ ಕಾರ್ಯಕ್ಕೆ ತಾವುಗಳು ಎಂದು ಸಹಕಾರ ನೀಡುವುದಾಗಿ ದೀಪೋತ್ಸವದಲ್ಲಿ ಪಾಲ್ಗೊಂಡಿದ್ದ ಅನೇಕರು ತಮ್ಮ ಅಭಿಪ್ರಾಯ ಹಚ್ಚಿಕೊಂಡರು..ಇನ್ನೂ ಯುವಕರ ಕಾರ್ಯಕ್ಕೆ ಎಲ್ಲರಿಂದಲ್ಲೂ ಮೆಚ್ಚುಗೆ ವ್ಯಕ್ತವಾಗಿದೆ.
ಇದನ್ನೂ ಓದಿ