ಸುದ್ದಿಬಿಂದು ಬ್ಯೂರೋ ವರದಿ
ಅಂಕೋಲಾ:”ನನ್ನ ಸ್ಥಿತಿ ಯಾರಿಗೂ ಆಗಬಾರದು, ಕ್ಷಮಿಸಿ ಅಮ್ಮಾ, ನನ್ನಿಂದ ಯಾರಿಗೂ ಯಾರಿಗೂ ಸಮಸ್ಯೆ ಆಗೋದು ಬೇಡ”ಎಂದು ಯುವಕ‌ನೋರ್ವ ಪತ್ರ ಬರೆದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಂಕೋಲಾ ತಾಲ್ಲೂಕಿನ ಬೆಳಸೆಯಲ್ಲಿ ನಡೆದಿದೆ.

ಹೌದು..ನಾನು 8 ವರ್ಷಗಳಿಂದ ಇಂದ್ರಿಕಾ (ಹೆಸರು ಬದಲಾಯಿಸಲಾಗಿದೆ)ಅವರನ್ನು ಪ್ರೀತಿಸುತ್ತಿದ್ದೆ, ಆದರೆ ಈಗ ಅವಳು ನನ್ನನ್ನು ಬಿಟ್ಟಿಹೋದಳು.”ಅಮ್ಮಾ ಕ್ಷಮಿಸು” ಎಂದು ಪತ್ರ ಬರೆದು ವಾಸರಕುದ್ರಿಗೆ ಮೇಲಿ‌ನಗುಳಿ ಯುವಕ, ಸಂತೋಷ್ ರೂಪಗೌಡ (31) ಎಂಬ ಯುವಕ ಮಾವಿನ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

“ನಾನು ಕಳೆದ 8 ವರ್ಷಗಳಿಂದ ನಿರಂತರವಾಗಿ ಪ್ರೀತಿಸುತ್ತಿದ್ದ ಹುಡುಗಿ ಕಳೆದ 20 ದಿನಗಳಿಂದ ನನ್ನನ್ನು ದೂರ ಇಡುತ್ತಿದ್ದಾಳೆ, ನಾನು ಬದುಕಲು ಸಾಧ್ಯವಾಗುತ್ತಿಲ್ಲ, ಕ್ಷಮಿಸು ಅಮ್ಮಾ.. ಕ್ಷಮಿಸಿ.. ನನಗೆ ಊಟವೂ ಸೇರುತ್ತಿಲ್ಲ, ನಿದ್ರೆಯೂ ಬರತ್ತಿಲ್ಲ. ನನಗೆ ಏನು ಬೇಡವಾಗಿದೆ.ನಮ್ಮಿಬ್ಬರ ಪ್ರೀತಿಯ ಬಗ್ಗೆ ಊರಿನ ಜನರೆಲ್ಲರಿಗೂ ಗೊತ್ತಿದೆ” ಎಂದು ಪತ್ರದಲ್ಲಿ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಇದನ್ನೂ ಓದಿ