ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ/ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 8ನೇ ಬಾರಿ ಬಜೆಟ್ ಮಂಡಿಸಿದ್ದಾರೆ. ವಿರೋಧ ಪಕ್ಷದ ಆಕ್ರೋಶದ ನಡುವೆಯೂ 2025-26ನೇ ಸಾಲಿನ ಬಜೆಟ್ ಮಂಡನೆ ಮಾಡಿದ್ದಾರೆ. ಮಧ್ಯಮ ವರ್ಗಕ್ಕೆ ಭರ್ಜರಿ ಕೊಡುಗೆ ನೀಡಲಾಗಿದೆ. 12ಲಕ್ಷದವರೆಗೆ ಆದಾಯ ತೆರಿಗೆ ಇಲ್ಲ ಎಂದು ಘೋಷಿಸಲಾಗಿದೆ.

ಈ ಬಜೆಟ್‌ನ ಪ್ರಮುಖ ಅಂಶವೆಂದರೆ ತೆರಿಗೆ ವಿನಾಯಿತಿಯ ಜೊತೆಗೆ ಪ್ರವಾಸೋದ್ಯಮ ಉತ್ತೇಜನ, ರೈತರಿಗಾಗಿ ಅನೇಕ ಯೋಜನೆಗಳ ಜಾರಿಗೆ ಘೋಷಿಸಲಾಗಿದೆ.

ಬಜೆಟ್‌ನ ಪ್ರಮುಖ ಅಂಶಗಳು:

ರಾಜ್ಯಗಳ ಸಹಭಾಗಿತ್ವದಲ್ಲಿ ಧಾನ್ಯ ಕೃಷಿ ಯೋಜನೆ ಘೋಷಣೆ

ಪಂಚಾಯತ್ ಮಟ್ಟದಲ್ಲಿ ರೈತರ ಧಾನ್ಯ ಪ್ರಕ್ರಿಯೆಗೊಳಿಸುವ ಯೋಜನೆ

100 ಜಿಲ್ಲೆಗಳ ಕಡಿಮೆ ಉತ್ಪಾದನಾ ಶಕ್ತಿ ಹೊಂದಿದ ರೈತರಿಗೆ ಸಬಲೀಕರಣ ಯೋಜನೆ

ಸಜಾತೀಯ ಧಾನ್ಯ ಉತ್ಪಾದನೆಯಲ್ಲಿ ಸ್ವಾವಲಂಬನೆಯ ಗುರಿ ಸಾಧನೆ

ಈಗಾಗಲೇ ಆರಂಭಿಸಿರುವ ಯೋಜನೆಗಳಿಂದ ಬೆಳೆ ಉತ್ಪಾದನೆಯ 50% ಹೆಚ್ಚಳ

ರೈತರ ಉತ್ಪಾದನಾ ಸಹಕಾರ ಸಂಘಗಳ ಸ್ಥಾಪನೆ

ಸೂರ್ಯಕಾಂತಿ ಬೀಜ ಬೆಳೆ ಉತ್ತೇಜನೆ

ಮೀನುಗಾರಿಕಾ ಕ್ಷೇತ್ರಕ್ಕಾಗಿ ₹60,000 ಕೋಟಿ ಮೀಸಲು

ಲಕ್ಷದ್ವೀಪ, ಅಂಡಮಾನ್-ನಿಕೋಬಾರ್ ಪ್ರದೇಶಗಳಲ್ಲಿ ಮೀನುಗಾರಿಕೆ ಉತ್ತೇಜನೆ

1.7 ಕೋಟಿ ರೈತರಿಗೆ ಲಾಭವಾಗುವಂತೆ ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಸಾಲದ ಪ್ರಮಾಣ ಹೆಚ್ಚಳ

ಕ್ರೆಡಿಟ್ ಕಾರ್ಡ್ ಮಿತಿಯನ್ನು ₹3 ಲಕ್ಷದಿಂದ ₹5 ಲಕ್ಷಕ್ಕೆ ಹೆಚ್ಚಿಸಲಾಗಿದೆ

1.5 ಲಕ್ಷ ಭಾರತೀಯ ಅಂಚೆ ಬ್ಯಾಂಕುಗಳ ಪುನಾರಚನೆ

ಅಂಚೆ ಕಚೇರಿಗಳನ್ನು ಸರಕು ವಿತರಣಾ ಕೇಂದ್ರಗಳಾಗಿ ಪರಿವರ್ತನೆ

ಶಿಲ್ಪಕಲಾ ವಸ್ತುಗಳ ರಫ್ತು ಹೆಚ್ಚಳ

ಸಣ್ಣ ಉದ್ಯಮಗಳಿಗೆ ₹1.5 ಕೋಟಿ ಸಾಲ

ರಫ್ತು ಪ್ರಮಾಣದಲ್ಲಿ 45% ಏರಿಕೆ

ಉದ್ಯಮ ಮತ್ತು ಸಾಲ ಸಂಬಂಧಿತ ಘೋಷಣೆಗಳು:

₹10 ಕೋಟಿವರೆಗೆ ಸುಲಭ ಸಾಲ ವ್ಯವಸ್ಥೆ

ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಉದ್ಯಮಿಗಳಿಗೆ ₹2 ಕೋಟಿವರೆಗೆ ಸಾಲ ಸಹಾಯ

ಸಣ್ಣ ಕೈಗಾರಿಕೆಗಳ 5 ಲಕ್ಷ ಮಹಿಳಾ ಉದ್ಯಮಿಗಳಿಗೆ ಹೊಸ ಯೋಜನೆ

ಸಣ್ಣ ಉದ್ಯಮಿಗಳಿಗೆ ಪ್ರತ್ಯೇಕ ಕ್ರೆಡಿಟ್ ಕಾರ್ಡ್

ಕ್ರೆಡಿಟ್ ಕಾರ್ಡ್ ಮೂಲಕ ₹5 ಲಕ್ಷದವರೆಗೆ ತ್ವರಿತ ಸಾಲ ವ್ಯವಸ್ಥೆ

ಸಾಮಾಜಿಕ ಮತ್ತು ಆರೋಗ್ಯ ಕ್ಷೇತ್ರ:

ಸಾಕ್ಷಂ ಅಂಗನವಾಡಿ 2.0 ಯೋಜನೆ ಘೋಷಣೆ

ಅಂಗನವಾಡಿ ಮಕ್ಕಳಿಗೆ, ಗರ್ಭಿಣಿ ತಾಯಿಗಳಿಗೆ ಪೌಷ್ಟಿಕ ಆಹಾರ ಪೂರೈಕೆ

ಸರ್ಕಾರಿ ಪ್ರೌಢಶಾಲೆಗಳಿಗೆ ಇಂಟರ್‌ನೆಟ್ ಸೌಲಭ್ಯ

50 ಕೋಟಿ ಸರ್ಕಾರಿ ಶಾಲೆಗಳಲ್ಲಿ ಅಟಲ್ ಲ್ಯಾಬ್ ಸ್ಥಾಪನೆ

ವೈದ್ಯಕೀಯ ಆಸನಗಳನ್ನು 10,000ಕ್ಕೆ ಹೆಚ್ಚಳ

ಜಿಲ್ಲಾಸ್ಪತ್ರೆಗಳಲ್ಲಿ ಕ್ಯಾನ್ಸರ್ ಕೇಂದ್ರ ಸ್ಥಾಪನೆ

ಪರಿವಹನ ಮತ್ತು ಮೂಲಸೌಕರ್ಯ:

ಬಿಹಾರದಲ್ಲಿ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣ, ಪಾಟ್ನಾ ವಿಮಾನ ನಿಲ್ದಾಣ ಅಭಿವೃದ್ಧಿ

ಮಿಥಿಲಾಂಚಲ್‌ನಲ್ಲಿ ಕೋಶಿ ಕಾಲುವೆ ನಿರ್ಮಾಣ ಯೋಜನೆ ಘೋಷಣೆ

ಪರ್ವತ ಪ್ರದೇಶಗಳಲ್ಲಿ ಹೆಲಿಪ್ಯಾಡ್ ನಿರ್ಮಾಣ

ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ 50,000 ಪ್ರವಾಸಿ ತಾಣಗಳ ಅಭಿವೃದ್ಧಿ

ಮುದ್ರಾ ಯೋಜನೆಯಡಿ ಹೋಮ್ ಸ್ಟೇಗಳಿಗೆ ಸಾಲ ಸೌಲಭ್ಯ

ಖಾಸಗಿ ಸಹಭಾಗಿತ್ವದಲ್ಲಿ ಮೆಡಿಕಲ್ ಟೂರಿಸಂ ಉತ್ತೇಜನೆ

ಶಿಕ್ಷಣ ಮತ್ತು ಸಂಶೋಧನೆ:

ತಾಂತ್ರಿಕ ಸಂಶೋಧನೆಯಲ್ಲಿ ತೊಡಗಿರುವ ವಿದ್ಯಾರ್ಥಿಗಳಿಗೆ 10,000 ಶಿಷ್ಯವೃತ್ತಿ

ಸಂಶೋಧನೆ ಮತ್ತು ಅಭಿವೃದ್ಧಿಗೆ ₹20,000 ಕೋಟಿ ಮೀಸಲು

ಅರ್ಧ ನಿರ್ಮಿತ ಖಾಸಗಿ ಅಪಾರ್ಟ್‌ಮೆಂಟ್‌ಗಳಿಗೆ ಸಹಾಯಧನ

40,000 ಫ್ಲಾಟ್ಸ್‌ಗಳ ನಿರ್ಮಾಣ ಪೂರೈಸುವ ಗುರಿ

ಆರ್ಥಿಕ ನೀತಿ ಮತ್ತು ತೆರಿಗೆ:

ವಿಮಾ ಕ್ಷೇತ್ರದಲ್ಲಿ 100% ವಿದೇಶಿ ನೇರ ಹೂಡಿಕೆ ಅನುಮತಿ

ಹೊಸ ಆದಾಯ ತೆರಿಗೆ ಮಸೂದೆ ಮುಂದಿನ ವಾರ ಮಂಡನೆ

ತೆರಿಗೆ ನೀತಿ ಸರಳೀಕರಣ ಮಸೂದೆ ಪೋಷಣೆ

ಆಮದು ಸುಂಕ ಸರಳೀಕರಣ ಕೇಂದ್ರ

ಕಚ್ಚಾ ತೈಲ ಆಮದು ಸುಂಕ ಕಡಿತ

ಕ್ಯಾನ್ಸರ್ ಸೇರಿ 36 ರೋಗಗಳಿಗೆ ಔಷಧಿ ಸುಂಕ ರದ್ದು

ಲಿಥಿಯಂ ಆಯಾನ್ ಬ್ಯಾಟರಿ ಕಚ್ಚಾ ಪದಾರ್ಥಗಳ ಆಮದು ಸುಂಕ ಕಡಿತ

ಮೊಬೈಲ್ ಫೋನ್ ಮತ್ತು LED ಟಿವಿಗಳ ಬೆಲೆ ಕಡಿತ

ಎಲೆಕ್ಟ್ರಾನಿಕ್ಸ್ ಮತ್ತು ವಾಹನಗಳ ಬೆಲೆಯಲ್ಲಿ ಇಳಿಕೆ

ಇಲೆಕ್ಟ್ರಿಕ್ ಬೈಕ್ ಮತ್ತು ಕಾರುಗಳ ಬೆಲೆ ಕಡಿತ

ಚರ್ಮ ಸಂಸ್ಕರಣೆ ಕಚ್ಚಾ ವಸ್ತುಗಳ ಆಮದು ಸುಂಕ ರದ್ದು

TDS ಮಿತಿ ₹7 ಲಕ್ಷದಿಂದ ₹10 ಲಕ್ಷಕ್ಕೆ ಹೆಚ್ಚಳ

ಹಿರಿಯ ನಾಗರಿಕರಿಗೆ ₹1 ಲಕ್ಷದವರೆಗೆ TDS ವಿನಾಯಿತಿ

ಬಾಡಿಗೆ ತೆರಿಗೆ ವಿನಾಯಿತಿ ₹2.4 ಲಕ್ಷದಿಂದ ₹6 ಲಕ್ಷಕ್ಕೆ ಹೆಚ್ಚಳ

ಮಧ್ಯಮ ವರ್ಗಕ್ಕೆ ಭರ್ಜರಿ ಕೊಡುಗೆ:

₹12 ಲಕ್ಷದವರೆಗೆ ಆದಾಯ ತೆರಿಗೆ ಇಲ್ಲ

ಈ ಬಜೆಟ್ ಮಧ್ಯಮ ವರ್ಗದ ಜನತೆಗೆ ಭಾರೀ ಲಾಭವನ್ನು ಒದಗಿಸಿದೆ.

ಇದನ್ನೂ ಓದಿ