ಸುದ್ದಿಬಿಂದು ಬ್ಯೂರೋ‌ ವರದಿ
Sirsi:ಶಿರಸಿ :ನಗರದ ಶೃದ್ದಾನಂದ ಗಲ್ಲಿಯಲ್ಲಿ ರಸ್ತೆ ಬದಿಯಲ್ಲಿ ನಿಲ್ಲಿಸಿಟ್ಟ ಕಾರಿಗೆ ಆಕಸ್ಮಿಕ‌ ಬೆಂಕಿ ತಗುಲಿ ಕಾರು ಸಂಪೂರ್ಣವಾಗಿ ಸುಟ್ಟುಕರಕಲಾಗಿರುವ ಘಟನೆ ನಡೆದೆ
.

ಮಂಜುನಾಥ ಭಟ್ ಎಂಬುವವರಿಗೆ ಸೇರಿದ್ದ ಕಾರು ಇದಾಗಿದೆ. ನಗರದ ಶೃದ್ಧಾನಂದನ ಗಲ್ಲಿಯಲ್ಲಿ ನಿಲ್ಲಿಸಿಡಲಾಗಿದ್ದ ಕಾರಿಗೆ ಆಸ್ಮಿಕವಾಗಿ ಬೆಂಕಿ ತಗುಲಿ ಕಾರು ಹೊತ್ತಿ ಉರಿದಿದೆ. ಕಾರಿನಲ್ಲಿ ಬೆಂಕಿ‌ ಕಾಣಿಸಿಕೊಳ್ಳುತ್ತಿದ್ದಂತೆ ಅಕ್ಕ-ಪಕ್ಕದಲ್ಲಿ ನಿಲ್ಲಿಸಲಾಗಿದ್ದ‌ ಇನ್ನೂಳಿದ ಕಾರುಗಳನ್ನ ತಕ್ಷಣ ಸ್ಥಳಾಂತರ ಮಾಡಲಾಗಿದೆ.

ಕಾರಿಗೆ ಬಿದ್ದ‌ ಬೆಂಕಿಯನ್ನ ಸ್ಥಳೀಯರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿಯನ್ನ ನಂದಿಸಿದ್ದಾರೆ. ಘಟನೆಯಿಂದಾಗಿ ಯಾವುದೇ ಪ್ರಾಣ ಹಾನಿ ಉಂಟಾಗಿಲ್ಲ.

ಇದನ್ನೂ ಓದಿ