ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ : ಇಲ್ಲಿನ ತಹಶೀಲ್ದಾರ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಸಿಬ್ಬಂದಿ ಓರ್ವರಿಗೆ ಗಿರೀಶ್ ನಾಯ್ಕ ಎಂಬಾತ ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿರುವ ಬಗ್ಗೆ ಕರ್ನಾಟಕ ರಾಜ್ಯ ಸರಕಾರಿ ಸಂಘ(ರಿ) ಬೆಂಗಳೂರು ಇದರ ಕುಮಟಾ ಶಾಖೆಯ ಸರಕಾರಿ ನೌಕರರ ಸಂಘ ತೀವ್ರವಾಗಿ ಖಂಡಿಸಿದ್ದು,ಆತನ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ತಹಶೀಲ್ದಾರ ಮೂಲಕ ಮನವಿ ಸಲ್ಲಿಸಲಾಯಿತು..
ಜ.24 ರಂದು 12.15ರ ಸುಮಾರಿಗೆ ಕಚೇರಿಗೆ ಬಂದ ಗಿರೀಶ್ ನಾಯ್ಕ ಎಂಬಾತ ತಹಶೀಲ್ದಾರ್ ಕಚೇರಿಯ ಆರ್ ಆರ್ ಟಿ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ, ಮಧುರಾ ಎಮ್. ನಾಯ್ಕ ಅವರು ಕಾರವಾರ ತಾಲೂಕಿನ ನಂದನಗದ್ದಾ ನಿವಾಸಿ ಗಿರೀಶ ಕೃಷ್ಣ ನಾಯ್ಕ ಎಂಬಾತ ಅವಾಚ್ಯ ಶಬ್ಧಗಳಿಂದ ಬೈದು ನಿಂದಿಸಿದ್ದಾರೆ. ಇವರು ಈ ಹಿಂದೆ ಮಾಹಿತಿ ಹಕ್ಕಿನಡಿಲ್ಲಿ ಕೇಳಿದ್ದ ಮಾಹಿತಿಯನ್ನ ಪೋಸ್ಟ್ ಮೂಲಕ ಕಳುಹಿಸಲಾಗಿತ್ತು. ಆದರೆ ವಿಳಾಸ ಸರಿ ಇಲ್ಲದ ಕಾರಣ ಅದು ವಾಪಸ್ ಆಗಿತ್ತು. ಈ ಬಗ್ಗೆ ಮಧುರಾ ನಾಯ್ಕ ಅವರು ಗಿರೀಶ್ ಅವರಿಗೆ ಮನವರಿಕೆ ಮಾಡಿ, ಅವರು ಕೇಳಿದ ಮಾಹಿತಿಯನ್ನ ತಕ್ಷಣ ಸ್ಥಳದಲ್ಲಿಯೇ ನೀಡಿದ್ದಾರೆ. ಇನ್ನೂಳಿದ ಪ್ರಶ್ನೆಗಳ ವಿಚಾರಣೆ ಹಂತದಲ್ಲಿರುವುದಾಗಿ ಮಹಿಳಾ ಸಿಬ್ಬಂದಿ ಮಧುರಾ ನಾಯ್ಕ ಅವರು ತಿಳಿಸಿದ್ದಾರೆ.
ಅದಕ್ಕೆ ಸಿಟ್ಟಾದ ಗಿರೀಶ ಕೃಷ್ಣ ನಾಯ್ಕ ಇವರು ನಿನಗೆ ಅರ್ಜಿ ಓದಲು ಬರುವುದಿಲ್ಲ, ಓದದೇ ಹಿಂಬರಹ ನೀಡಿದ್ದೀಯಾ, ದುಡ್ಡು ಕೊಟ್ಟು ಕೆಲಸಕ್ಕೆ ಬಂದಿದ್ದೀಯಾ, ನಾಯಿ ನೀನು, ನಿನಗೆ ಯಾರು ಇಲ್ಲಿ ಕೆಲಸ ಕೊಟ್ಟವರು, ನೀನು ನಾಯಿ, ನಾಯಿ, ನಾಯಿ ಅಂತಾ ಗಲಾಟೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ.ಅಲ್ಲೆ ಇದ್ದ ಸಾರ್ವಜನಿಕರು ಈತನ ವರ್ತನೆಯನ್ನು ಕಂಡು ನೀವು ಈ ವಿಷಯದ ಬಗ್ಗೆ ಮೇಲಾಧಿಕಾರಿಗಳಲ್ಲಿ ವಿಚಾರಿಸಬಹುದಾಗಿತ್ತು ಎಂದು ಹೇಳಿದಾಗ ಅವರೊಂದಿಗೂ ಅನುಚಿತವಾಗಿ ವರ್ತಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇವರು ಓರ್ವ ವಕೀಲರಾಗಿ ನಾಗರಿಕರಿಗೆ ಸಮಾಜ ತಲೆತಗ್ಗಿಸುವಂತಹ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದು ಅಕ್ಷಮ್ಯ ಅಪರಾಧವಾಗಿದೆ.
ಗಿರೀಶ ಕೃಷ್ಣ ನಾಯ್ಕ ಇಬರು ಒಬ್ಬ ವಕೀಲರಾಗಿ ತಮ್ಮ ಘನತೆಗೆ ತಕ್ಕಂತೆ ವರ್ತಿಸದೇ ನಮ್ಮ ಕಚೇರಿಯ ಮಹಿಳಾ ಸಿಬ್ಬಂದಿಯಾದ ಮಧುರಾ ಎಮ್. ನಾಯ್ಕ ಇವರಿಗೆ ಅವಾಚ್ಯ ಶಬ್ದಗಳಿಂದ ಬಹಿರಂಗವಾಗಿ ನಿಂದಿಸಿ ಹಾಗೂ ` ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು.ಮಹಿಳಾ ಸಿಬ್ಬಂದಿಯವರಿಗೆ ಬಹಿರಂಗವಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಅವರ ತೇಜೋವಧೆ ಮಾಡಿ ಮಾನಸಿಕ ಹಿಂಸೆ ನೀಡಿರುತ್ತಾರೆ. ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತಾಲೂಕು ಶಾಖೆ ಕುಮಟಾ ಇವರು ಒತ್ತಾಯಿಸಿದ್ದಾರೆ.
ಇದನ್ನು ಓದಿ