ಸುದ್ದಿಬಿಂದು ಬ್ಯೂರೋ ವರದಿ
ಅಂಕೋಲಾ: ಅಂಕೋಲೆಯಲ್ಲಿ ಜರುಗಿದ 6ನೇ ವರ್ಷದ ಕರ್ನಾಟಕದ ಬಾರ್ಡೋಲಿ ‘ಅಂಕೋಲಾ ಉತ್ಸವ’-2025 ಈ ವರ್ಷದ ಪುರಸ್ಕಾರವನ್ನು ಗೋದಾವರಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾದ ರಾಘವೇಂದ್ರ ಡಿ. ನಾಯಕ ಅವರಿಗೆ ನೀಡಿ ಗೌರವಿಸಲಾಯಿತು.
ರಾಘವೇಂದ್ರ ಡಿ. ನಾಯಕ ಅವರು ಸಹಕಾರಿ ಕ್ಷೇತ್ರ ಮತ್ತು ಉದ್ಯಮದ ಮೂಲಕ ಸಾವಿರಾರು ಜನರಿಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ, ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಒದಗಿಸಿದವರು. ಸಹಕಾರಿ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ ಇವರು ಅತಿ ಕಡಿಮೆ ಅವಧಿಯಲ್ಲಿ ಸಹಕಾರಿಯನ್ನು ನೀರಿಕ್ಷಿಗೂ ಮೀರಿ ಬೆಳೆಸಿದ್ದಾರೆ. ಈ ಕಾರಣಕ್ಕಾಗಿ ಕರ್ನಾಟಕ ರಾಜ್ಯ ಸಂಯುಕ್ತ ಸಹಕಾರಿಯು ಇವರಿಗೆ 2023-24 ರಂದು ರಾಜ್ಯ ಶ್ರೇಷ್ಠ ಸೌಹಾರ್ದ ಸಹಕಾರಿ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಸಹಕಾರಿ ಕ್ಷೇತ್ರದ ಅಗ್ರಗಣ್ಯ ಸೇವೆ ಸಲ್ಲಿಸುತ್ತಿರುವ ಇವರು ಜಿಲ್ಲೆಯ ಮಿರ್ಜಾನ, ಗೋಕರ್ಣ, ಕಾರವಾರ, ಕುಮಟಾ, ಅಂಕೋಲಾ, ಮಾದನಗೇರಿ, ಯಲ್ಲಾಪುರ ವಿವಿಧ ಭಾಗಗಳಲ್ಲಿ ಶಾಖೆಗಳನ್ನು ಸ್ಥಾಪಿಸಿದ್ದಾರೆ. ಉದ್ಯಮ ಕ್ಷೇತ್ರವನ್ನು ಹುಬ್ಬಳ್ಳಿಯಲ್ಲಿ ಗೋದಾವರಿ ಇಂಡಸ್ಟ್ರೀಜ್ ಹಾಗೂ ಗೋದಾವರಿ ಇನ್ನಾ ಪ್ರೈವೇಟ್ ಲಿಮಿಟೆಡ್ ಪ್ರಾರಂಭಿಸಿ ಈ ಕ್ಷೇತ್ರದಲ್ಲಿಯೂ ಸಹ ಯಶಸ್ವಿಯಾಗಿದ್ದಾರೆ.ಹಾಗೂ ಪ್ರವಾಸೋದ್ಯಮಕ್ಕಾಗಿ ಹೊಟೇಲ್ ದಿ ಗೋದಾವರಿ ಶ್ರೀ ಕ್ಷೇತ್ರ ಗೋಕರ್ಣದಲ್ಲಿ ನಿರ್ಮಿಸಿ ಗೋಕರ್ಣದ ಪ್ರವಾಸೋದ್ಯಮಕ್ಕೆ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದ್ದಾರೆ.
ಈ ಎಲ್ಲ ಕಾರಣಕ್ಕಾಗಿ ‘ಅಂಕೋಲಾ ಉತ್ಸವ’ ಸಮಿತಿಯು ಮಾದರಿ ವ್ಯಕ್ತಿತ್ವದ ಯುವ ಉದ್ಯಮಿ ರಾಘವೇಂದ್ರ ಡಿ. ನಾಯಕ ದೇವರಬಾವಿ ಅವರನ್ನು ಈ ವರ್ಷದ ‘ಅಂಕೋಲಾ ಉತ್ಸವ’-2025 ಪುರಸ್ಕಾರ ನೀಡಿ ಗೌರವಿಸಿದೆ.ಈ ಪುರಸ್ಕಾರವನ್ನು ಅಂಕೋಲಾ ಉತ್ಸವದ ಸಮಾರೋಪ ಸಮಾರಂಭದಲ್ಲಿ ವಿಧಾನ ಪರಿಷತ್ ಶಾಸಕರಾದ ಗಣಪತಿ ಡಿ. ಉಲ್ಲೇಕರ ಹಾಗೂ ಭಾಗವಹಿಸಿದ ಇನ್ನಿತರ ಗಣ್ಯರು ರಾಘವೇಂದ್ರ ನಾಯಕ ಅವರಿಗೆ ಪ್ರದಾನ ಮಾಡಿದರು. ಇವರು ಸಹಕಾರಿ ಮತ್ತು ಉದ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡುತ್ತ ಬಡ ವಿದ್ಯಾರ್ಥಿಗಳಿಗೆ, ಕಲೆ, ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರಕ್ಕೆ ಹಾಗೂ ಅಸಹಾಯಕರು ಮತ್ತು ಬಡವರಿಗೆ ಸದಾನೆರವು ನೀಡುತ್ತಾ ಬಂದಿದ್ದಾರೆ. ಈ ಸಾಮಾಜಿಕ ಸೇವಾ ಕಾರ್ಯ ಹಾಗೂ ವಿವಿಧ ಕ್ಷೇತ್ರಕ್ಕೆ ಮತ್ತು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತನ್ನಿಂದ ಶಕ್ತಾನುಸಾರ ಆಸರೆಯಾಗಿ ನಿಂತಿದ್ದಾರೆ. ಇಂತಹ ಮಾನವೀಯ ವ್ಯಕ್ತಿತ್ವ ಹೊಂದಿದ್ದ ರಾಘವೇಂದ್ರ ನಾಯಕ ಅತ್ಯಂತ ಕಷ್ಟಕರ ಮತ್ತು ಶ್ರಮದ ಮೂಲಕ ಸಾಧನೆ ಮಾಡುತ್ತಿದ್ದಾರೆ. ಅವರನ್ನು ವಿವಿಧ ಕ್ಷೇತ್ರದ ಅನೇಕ ಸಂಘ-ಸಂಸ್ಥೆ ಹಾಗೂ ಸರಕಾರ ಪ್ರೋತ್ಸಾಹಿಸಿ ಗೌರವ ಸಲ್ಲಿಸುತ್ತಾ ಬಂದಿದೆ. ಅವರ ಸಾಧನೆ ಮತ್ತು ಸೇವೆ ಇನ್ನಷ್ಟು ವಿಸ್ತಾರಗೊಳ್ಳಲಿ ಎಂದು ಹಾರೈಸಿದರು.
ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ನಿಕಟಪೂರ್ವ ಶಾಸಕಿ ರೂಪಾಲಿ ಸಂತೋಷ ನಾಯ್ಕ ಅವರ ಗೌರವಾಧ್ಯಕ್ಷತೆಯಲ್ಲಿ ಜಿಲ್ಲೆಯ ಪ್ರತಿಷ್ಠಿತ ಸಾಂಸ್ಕೃತಿಕ ಉತ್ಸವವೆಂದೇ ಪ್ರಸಿದ್ದಿಯಾದ ‘ಅಂಕೋಲಾ ಉತ್ಸವ 7 ದಿನಗಳ ಕಾಲ ಅಂಕೋಲೆಯ ಜೈಹಿಂದ್ ಮೈದಾನದಲ್ಲಿ ಆಯೋಜಿಸಲಾಗಿತ್ತು. ‘ಆಂಕೋಲಾ ಉತ್ಸವ’ ಸಮಿತಿಯು ಈ ಗೌರವ ಸಲ್ಲಿಸಿದೆ.
ಇದನ್ನೂ ಓದಿ