ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ:karwar : ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ನೈರುತ್ಯ ರೈಲ್ವೆ ವಿಶೇಷ ರೈಲು ಸೇವೆ ನಡೆಸಲು ತೀರ್ಮಾನಿಸಿದೆ. ಇದು ಜನವರಿ 10, ಶುಕ್ರವಾರ ಬೆಂಗಳೂರಿನಿಂದ ಕಾರವಾರಕ್ಕೆ ಹೊರಡಲಿದೆ.

ಈ ಬಗ್ಗೆ ನೈರುತ್ಯ ರೈಲ್ವೆ ಮಾಹಿತಿ ನೀಡಿದ್ದು, “ಎಸ್‌ಎಂವಿಟಿ ಬೆಂಗಳೂರು ಮತ್ತು ಕಾರವಾರ ನಡುವೆ ಹೆಚ್ಚಿನ ದಟ್ಟಣೆಯನ್ನು ನಿವಾರಿಸಲು ವಿಶೇಷ ರೈಲು ಸೇವೆ ನಡೆಸಲಾಗುತ್ತದೆ” ಎಂದು ತಿಳಿಸಿದೆ.
ಎಸ್‌ಎಂವಿಟಿ ಬೆಂಗಳೂರಿನಿಂದ ಎಕ್ಸ್‌ಪ್ರೆಸ್ ರೈಲು ಜನವರಿ 10, ಶುಕ್ರವಾರ ಮಧ್ಯಾಹ್ನ 1 ಗಂಟೆಗೆ ಹೊರಡಲಿದ್ದು, ಮರುದಿನ ಬೆಳಿಗ್ಗೆ 6:10ಕ್ಕೆ ಕಾರವಾರ ತಲುಪಲಿದೆ. ರೈಲು ಸಂಖ್ಯೆ 06598 ಕಾರವಾರ – ಎಸ್.ಎಂ.ವಿ.ಟಿ ಬೆಂಗಳೂರು ವಿಶೇಷ ಎಕ್ಸ್‌ಪ್ರೆಸ್ ರೈಲು ಜನವರಿ 11, ಶನಿವಾರ ಮಧ್ಯಾಹ್ನ 12:00ಕ್ಕೆ ಕಾರವಾರದಿಂದ ಹೊರಡಲಿದ್ದು, ಮರುದಿನ ಬೆಳಿಗ್ಗೆ 4:00ಕ್ಕೆ ಎಸ್‌ಎಂವಿಟಿ ಬೆಂಗಳೂರು ತಲುಪಲಿದೆ.

ನಿಲ್ಲುಗಡೆ ಎಲ್ಲೆಲ್ಲಿ..?
ಕುಣಿಗಲ್ ,ಚನ್ನರಾಯಪಟ್ಟಣ,ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್,ಕಬಕ ಪುತ್ತೂರು, ಬಂಟವಾಳ, ಸುರತ್ಕಲ್, ಮೂಲ್ಕಿ, ಉಡುಪಿ, ಬಾರ್ಕೂರು,‌ಕುಂದಾಪುರ, ಬೈಂದೂರು ಮೂಕಾಂಬಿಕಾ ರಸ್ತೆ,ಭಟ್ಕಳ,ಮುರ್ಡೇಶ್ವರ,ಹೊನ್ನಾವರ, ಕುಮಟಾ, ಗೋಕರ್ಣ ರೋಡ್,ಅಂಕೋಲಾ

ಒಟ್ಟು ಎಷ್ಟು ಬೋಗಿಗಳಿವೆ..?
ಈ ವಿಶೇಷ ರೈಲುಗಳಲ್ಲಿ 07 ಸ್ಲೀಪರ್ ಕೋಚ್‌ಗಳು,13 ತ್ರೀಟಯರ್ ಎಸಿ ಕೋಚ್‌ಗಳು ಮತ್ತು 2 ಲಗೇಜ್ ಕಮ್ ಬ್ರೇಕ್ ವ್ಯಾನ್ ಕೋಚ್‌ಗಳು ಒಳಗೊಂಡಿರುತ್ತವೆ.

ಗಮನಿಸಿ