ಸುದ್ದಿಬಿಂದು ಬ್ಯೂರೋ ವರದಿ(Suddibindu digital news)
ಬೆಂಗಳೂರು : ಎರಡು ವರ್ಷದ ಹಿಂದಷ್ಟೆ ವಿವಾಹವಾಗಿದ್ದ ಪತ್ನಿಯ ಶೀಲ‌ ಶಂಕಿಸಿ ಪತಿಯೇ ಪೆಟ್ರೋಲ್ ಸುರಿದು ಪತ್ನಿಗೆ ಬೆಂಕಿ ಹಚ್ಚಿ ಕೊಲೆ‌ ಮಾಡಿರುವ ಘಟನೆ ಬೆಂಗಳೂರಿನ ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಪ್ರಿಯಾಂಕಾ ಎಂಬಾಕೆ ಕೊಲೆಯಾದ ಮಹಿಳೆಯಾಗಿದ್ದಾಳೆ,ಕೊಲೆಯಾದ ಪ್ರಿಯಾಂಕ ಹಾಗೂ‌ ಪ್ರಭು ಕಳೆದ ಎರಡು ವರ್ಷದ ಹಿಂದಷ್ಟೆ ವಿವಾಹವಾಗಿದ್ದಾರು.ಪತ್ನಿಯ ಮೇಲೆ ಅನುಮಾನಗೊಂಡಿದ್ದ ಪತಿ ಪ್ರಭು ನಿತ್ಯವೂ ರಾತ್ರಿ ಕುಡಿದು ಬಂದು ಆಕೆಗೆ ಹಿಂಸೆ ನೀಡುತ್ತಿದ್ದ ಎನ್ನಲಾಗಿದೆ.

ಎಂದಿನಂತೆ ನಶೆಯಲ್ಲಿ ಬಂದ ಪತಿ ಪ್ರಭು ಬರುವಾಗಲೇ ಕೈಯಲ್ಲಿ ಪೆಟ್ರೋಲ್ ತುಂಬಿದ ಬಾಟಲ್ ಹಿಡಿದುಕೊಂಡು ಬಂದಿದ್ದು, ಮನೆಗೆ ಬಂದವನೆ ಪತ್ನಿಯ ಜೊತೆ ಜಗಳ ತೆಗೆದು ಆಕೆಯ‌ ಮೈ ಮೇಲೆ ಪೆಟ್ರೋಲ್  ಸುರಿದು ಕೊಲೆ ಮಾಡಿದ್ದಾನೆ. ಬಳಿಕ ಅದೆ‌ ಪೆಟ್ರೋಲ್ ತನ್ನ ಮೇಲೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.   ಘಟನೆ‌ ಕುರಿತಾಗಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಮನಿಸಿ