ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ : ಉತ್ತರ ಕನ್ನಡ ಜಿಲ್ಲೆಯ ರಾಜಕೀಯ ಇತಿಹಾಸದಲ್ಲಿ ಹಲವು ನಾಯಕರು ಮೂರು-ನಾಲ್ಕು ದಶಕಗಳ ಕಾಲ ಅಧಿಕಾರ ನಡೆಸಿದ್ದಾರೆ. ಶಾಸಕರಾಗಿ, ಸಚಿವರಾಗಿ, ಸಂಸದರಾಗಿಯೂ ಸೇವೆ ಸಲ್ಲಿಸಿದ್ದಾರೆ. ಆದರೆ, ಅಧಿಕಾರದ ಅವಧಿಗಿಂತ ಜನರ ಮನಸ್ಸಿನಲ್ಲಿ ಉಳಿಯುವ ಕೆಲಸಗಳು ಮುಖ್ಯ ಎಂಬ ಮಾತು ಇದೀಗ ಚರ್ಚೆಗೆ ಬಂದಿದೆ. ಇದರಲ್ಲಿ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ರಾಜ್ಯದ ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವರಾಗಿದ್ದ ಮಂಕಾಳ್ ವೈದ್ಯ ಅವರು ಜನರ ಮೆಚ್ಚಿಗೆ ಪಡೆದುಕೊಂಡಿದ್ದಾರೆ..

ಸಚಿವರಾಗಿ ಅಧಿಕಾರ ಸ್ವೀಕರಿಸಿದ ಕೆಲವೇ ವರ್ಷಗಳಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಮಂಕಾಳ್ ವೈದ್ಯ ಅವರು ಸಾರ್ವಜನಿಕರ ಗಮನ ಸೆಳೆಐವಂತಹ ಕೆಲಸ ಮಾಡಿದ್ದಾರೆ. ವಿಶೇಷವಾಗಿ ಮೀನುಗಾರ ಸಮುದಾಯದ ಪರವಾಗಿ ಕೈಗೊಂಡಿರುವ ಕೆಲವು ನಿರ್ಧಾರಗಳು ಕರಾವಳಿ ಜನರ ಪ್ರಶಂಸೆಗೆ ಪಾತ್ರವಾಗಿವೆ.

ಮೀನುಗಾರರ ಪರ ಐತಿಹಾಸಿಕ ನಿರ್ಧಾರ
ಸಮುದ್ರದಲ್ಲಿ ಮೀನುಗಾರಿಕೆ ನಡೆಸುವ ವೇಳೆ ದುರಂತ ಸಂಭವಿಸಿ ಮೀನುಗಾರ ಮೃತಪಟ್ಟರೆ ಅಥವಾ ಗಂಭೀರ ಅನಾಹುತಕ್ಕೊಳಗಾದರೆ ಕುಟುಂಬ ಸಂಕಷ್ಟಕ್ಕೆ ಸಿಲುಕಿದ. ಸಂದರ್ಭಗಳಲ್ಲಿ ಮೊದಲ ಬಾರಿಗೆ ಮೀನುಗಾರಿಕೆ ಇಲಾಖೆಯ ವತಿಯಿಂದ ಮೃತ ಕುಟುಂಬಕ್ಕೆ 10ಲಕ್ಷ ಪರಿಹಾರ ಘೋಷಣೆ ಮಾಡಿರುವುದು ಮಂಕಾಳ್ ವೈದ್ಯ ಅವರ ಜನಪರ ನಿರ್ಧಾರಗಳಲ್ಲಿ ಒಂದಾಗಿದೆ ಎಂದು ಕರಾವಳಿ ಭಾಗದ ಮೀನುಗಾರರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ವರ್ಷಗಳ ಕಾಲ ಮೀನುಗಾರರ ಸಮಸ್ಯೆಗಳ ಬಗ್ಗೆ ಚರ್ಚೆಗಳು ನಡೆದಿದ್ದರೂ, ಇಂತಹ ಆರ್ಥಿಕ ನೆರವು ವ್ಯವಸ್ಥೆ ಜಾರಿಗೆ ಬಂದಿರಲಿಲ್ಲ ಎಂಬುದು ಮೀನುಗಾರ ಸಮುದಾಯದ ಅಭಿಪ್ರಾಯವಾಗಿದೆ.

ಎಲ್ಲ ವಲಯಗಳಲ್ಲೂ ಒಂದೇ ಮಾನದಂಡ ಬೇಕು..?
ಮೀನುಗಾರರ ಕುಟುಂಬಗಳಿಗೆ ಹೆಚ್ಚಿನ ಪರಿಹಾರ ನೀಡಿರುವ ನಿರ್ಧಾರವನ್ನು ಜನರು ಸ್ವಾಗತಿಸಿದ್ದಾರೆ, ಆದರೆ ಇದೆ ವೇಳೆ ಕೃಷಿ ಕ್ಷೇತ್ರದ ಕುಟುಂಬಗಳ ಪ್ರಶ್ನೆಯೂ ಮುನ್ನೆಲೆಗೆ ಬಂದಿದೆ.
ಕೃಷಿ ಚಟುವಟಿಕೆ ವೇಳೆ ರೈತರು ಅಥವಾ ಕೃಷಿ ಕಾರ್ಮಿಕರು ಮೃತಪಟ್ಟರೆ ಸರ್ಕಾರದಿಂದ ದೊರೆಯುವ ಪರಿಹಾರ ಮೊತ್ತ ಸೀಮಿತವಾಗಿದೆ. ಅನೇಕ ಯೋಜನೆಗಳಿದ್ದರೂ, ದುರಂತಕ್ಕೊಳಗಾದ ಕುಟುಂಬಗಳಿಗೆ ಸಿಗುವ ನೆರವು ಮೀನುಗಾರಿಕೆ ಇಲಾಖೆಯ ಮಾದರಿಯಷ್ಟು ಪರಿಣಾಮಕಾರಿ ಇಲ್ಲ ಎಂಬ ಅಭಿಪ್ರಾಯವಿದೆ.

“ಮೀನುಗಾರರ ಜೀವಕ್ಕೂ ಬೆಲೆ ಇದೆ, ರೈತರ ಜೀವಕ್ಕೂ ಬೆಲೆ ಇದೆ. ಸರ್ಕಾರ ಎಲ್ಲ ವಲಯಗಳಿಗೂ ಸಮಾನ ನ್ಯಾಯ ಒದಗಿಸಬೇಕು” ಎಂಬ ಆಗ್ರಹ ಶಿರಾಲಿಯಲ್ಲಿ ಕಪ್ಪೆಚಿಪ್ಪು ತೆಗೆಯಲು ಹೋಗಿ 11ಜನ ಸಾವನ್ನಪ್ಪಿದಾಗ ಸಚಿವ ಮಂಕಾಳ ವೈದ್ಯ ಅವರು ಸರಕಾರದ ಐದು ಲಕ್ಷದ ಪರಿಹಾರ ಹಣದ ಜೊತೆ ತಮ್ಮ ಇಲಾಖೆಯಿಂದ ಮೃತ ಕುಟುಂಬಕ್ಕೆ ತಲಾ ಹತ್ತು ಲಕ್ಷ ಪರಿಹಾರಿ ಘೊಷಣೆ ಮಾಡಿ ಅದನ್ನ ವಿತರಣೆ ಸಹ ಮಾಡಿದ್ದಾರೆ. ಆದರೆ ಇಂತಹ ವ್ಯವಸ್ಥೆ ಕೃಷಿ ಇಲಾಖೆಯಲ್ಲಿ ಯಾಕೆ ಸಮರ್ಪಕವಾಗಿ ಜಾರಿಯಾಗಿಲ್ಲ ಎನ್ನುವ ಮಾತುಗಳು ಕೇಳಿ ಬರಲಾರಂಭಿಸಿದೆ.

ಅಧಿಕಾರದ ಅವಧಿಗಿಂತ ಜನಪರ ಸ್ಪಂದನೆ ಮುಖ್ಯ
ಉತ್ತರ ಕನ್ನಡ ಜಿಲ್ಲೆಯಲ್ಲಿ ಹಲವು ನಾಯಕರು ದೀರ್ಘಕಾಲ ರಾಜಕೀಯದಲ್ಲಿ ಇದ್ದರೂ, ಸಾಮಾನ್ಯ ಜನರ ಸಂಕಷ್ಟದ ಸಮಯದಲ್ಲಿ ತಕ್ಷಣ ಸ್ಪಂದಿಸುವ ನಾಯಕತ್ವ ಜನರ ಮನಸ್ಸು ಗೆಲ್ಲುತ್ತದೆ ಎನ್ನುವುದು ಹಲವರ ಅಭಿಪ್ರಾಯ. ಜಾತಿ, ಮತ, ಧರ್ಮ ಎನ್ನುವ ಭೇದವಿಲ್ಲದೆ ನೆರವಿಗೆ ಧಾವಿಸುವ ಗುಣ, ಅಪಘಾತ ಅಥವಾ ಅನಾಹುತದ ಸಂದರ್ಭಗಳಲ್ಲಿ ಸಂತ್ರಸ್ತರ ಮನೆಗಳಿಗೆ ಭೇಟಿ ನೀಡಿ ಧೈರ್ಯ ತುಂಬುವ ನಡೆ, ಅಧಿಕಾರಿಗಳ ಮೂಲಕ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಲ್ಪಿಸಲು ಮಾಡುವ ಪ್ರಯತ್ನಗಳು ಮಂಕಾಳ್ ವೈದ್ಯ ಅವರ ಬಗ್ಗೆ ಜನ ಉತ್ತಮ ಅಭಿಪ್ರಾಯ ಮೂಡಿಸಿರುವ ಅಂಶಗಳಾಗಿವೆ.

ಉಳಿದ ಕ್ಷೇತ್ರದಲ್ಲಿ ಅನಾಹುತಕ್ಕೆ ಒಳಗಾಗಿದ್ದವರಿಗೂ
ಮೀನುಗಾರಿಕೆ ಕ್ಷೇತ್ರದಲ್ಲಿ ಜಾರಿಗೊಂಡಿರುವ ಪರಿಹಾರ ಮಾದರಿಯನ್ನೇ ಕೃಷಿ, ಕಾರ್ಮಿಕ ಹಾಗೂ ಇತರೆ ದುಡಿಯುವ ವರ್ಗಗಳಿಗೂ ವಿಸ್ತರಿಸಬೇಕು ಎಂಬ ಆಗ್ರಹ ಕೇಳಿಬರುತ್ತಿದೆ. ಕೇವಲ ನಾಲು ಮೂರು-ನಾಲ್ಕು ದಶಕದಿಂದ ಜಿಲ್ಲೆ ಆಳಿದ್ದೇನೆ ಎಂದು ಹೇಳಿಕೊಂಡರೆ ಜನರ ಸಂಕಷ್ಟ ಪರಿಹಾರ ಆಗುವುದಿಲ್ಲ. ಅದಕ್ಕೆ ಜನರ ಸಂಕಷ್ಟಕ್ಕೆ ಸ್ಪಂಧಿಸುವ ಮಂಕಾಳ ವೈದ್ಯರಂತಹ ನಾಯಕತ್ವ ಪ್ರಸ್ತುತ ರಾಜಕೀಯಕ್ಕೆ ಹಾಗೂ ಜನತೆಗೆ ಬೇಕಾಗಿದೆ.

ಮಾನವೀಯತೆಯ ಮತ್ತೊಂದು ಹೆಸರು ಮಂಕಾಳ್ ವೈದ್ಯ
ರಾಜಕೀಯದಲ್ಲಿ ಅಧಿಕಾರ, ಹುದ್ದೆ ಮತ್ತು ಪ್ರಭಾವ ಸಾಮಾನ್ಯ ಸಂಗತಿಗಳಾಗಿದ್ದರೂ, ಮಾನವೀಯತೆ ಮತ್ತು ಜನರ ನೋವಿಗೆ ಸ್ಪಂದಿಸುವ ಗುಣ ಎಲ್ಲರಲ್ಲೂ ಕಂಡುಬರುವುದಿಲ್ಲ. ಉತ್ತರ ಕನ್ನಡ ಜಿಲ್ಲೆಯ ಜನರ ಪಾಲಿಗೆ ಸಚಿವ ಮಂಕಾಳ್ ವೈದ್ಯ ಅಂತಹ ಅಪರೂಪದ ನಾಯಕರಲ್ಲಿ ಒಬ್ಬರೆಂದು ಗುರುತಿಸಿಕೊಂಡಿದ್ದಾರೆ.
ಶಿಕ್ಷಣವೇ ಸಮಾಜದ ಬದಲಾವಣೆಯ ಮೂಲಮಂತ್ರ ಎಂಬ ನಂಬಿಕೆಯೊಂದಿಗೆ ಆರ್ಥಿಕವಾಗಿ ಹಿಂದುಳಿದ ಅನೇಕ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗುತ್ತಿರುವ ಮಂಕಾಳ್ ವೈದ್ಯ, ಹಲವಾರು ಬಡ ಕುಟುಂಬಗಳ ಮಕ್ಕಳಿಗೆ ಉನ್ನತ ಶಿಕ್ಷಣದ ಕನಸು ನನಸಾಗಿಸಲು ಸಹಕಾರಿಯಾಗಿದ್ದಾರೆ. ಶಿಕ್ಷಣಕ್ಕಾಗಿ ನೆರವು ಕೇಳಿಕೊಂಡು ಬಂದ ವಿದ್ಯಾರ್ಥಿಗಳಿಗೆ ಜಾತಿ, ಮತ, ಪಕ್ಷ ಎಂಬ ಬೇಧವಿಲ್ಲದೆ ಸಹಾಯ ಹಸ್ತ ಚಾಚಿರುವ ಉದಾಹರಣೆಗಳು ಸಾಕಷ್ಟಿವೆ.

ತಮ್ಮ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗದೆ, ಜಿಲ್ಲೆಯ ಯಾವುದೇ ಭಾಗದಲ್ಲಿ ಸಂಕಷ್ಟದ ಸುದ್ದಿ ಕೇಳಿಬಂದರೂ ಮೊದಲು ಸ್ಪಂದಿಸುವ ನಾಯಕರಾಗಿ ಅವರು ಗುರುತಿಸಿಕೊಂಡಿದ್ದಾರೆ. ಅಪಘಾತ, ಅನಾರೋಗ್ಯ, ಪ್ರಕೃತಿ ವಿಕೋಪ ಅಥವಾ ಕುಟುಂಬದ ದುಃಖದ ಸಂದರ್ಭಗಳಲ್ಲಿಯೂ ಸಂತ್ರಸ್ತರ ಮನೆ ಬಾಗಿಲಿಗೆ ತೆರಳಿ ಧೈರ್ಯ ತುಂಬುವ ಗುಣ ಅವರಿಗೆ ವಿಶೇಷ ಸ್ಥಾನಮಾನ ನೀಡಿದೆ.
“ಯಾರು ಬಂದರು ಎನ್ನುವುದಕ್ಕಿಂತ ಏನು ಸಮಸ್ಯೆ ತಂದಿದ್ದಾರೆ ಎನ್ನುವುದು ಮುಖ್ಯ” ಎಂಬ ಮನೋಭಾವದೊಂದಿಗೆ ಜನರ ಕಷ್ಟಗಳಿಗೆ ಸ್ಪಂದಿಸುತ್ತಿರುವ ಮಂಕಾಳ್ ವೈದ್ಯ, ರಾಜಕಾರಣಿಗಿಂತ ಹೆಚ್ಚಾಗಿ ಮಾನವೀಯ ನಾಯಕನಾಗಿ ಜನರ ಮನಸ್ಸಿನಲ್ಲಿ ಸ್ಥಾನ ಪಡೆದಿದ್ದಾರೆ.

ಅಧಿಕಾರವು ಕೇವಲ ಆಡಳಿತ ನಡೆಸಲು ಅಲ್ಲ, ಸಂಕಷ್ಟದಲ್ಲಿರುವವರ ಕಣ್ಣೀರು ಒರೆಸಲು ಎಂಬುದನ್ನು ತಮ್ಮ ಕಾರ್ಯಗಳ ಮೂಲಕ ತೋರಿಸುತ್ತಿರುವ ಮಂಕಾಳ್ ವೈದ್ಯ ಅವರ ಮಾನವೀಯ ಗುಣವೇ ಇಂದು ಜನಮೆಚ್ಚುಗೆಗೆ ಪ್ರಮುಖ ಕಾರಣವಾಗಿದೆ.

ಇದನ್ನೂ ಓದಿ/ಮೊರಬಾದಲ್ಲಿ ಭಾರೀ ಗಾಳಿಗೆ ತೆಂಗಿನ ಮರ ಬಿದ್ದು ಮನೆ ಜಖಂ: ಪ್ರಾಣಾಪಾಯದಿಂದ ಪಾರು