ಸುದ್ದಿಬಿಂದು ಬ್ಯೂರೋ ವರದಿ
ಮುರುಡೇಶ್ವರ: ರಾಜ್ಯದ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ(DKC)ಅವರು ಇಂದು ಮುರುಡೇಶ್ವರ ನೇತ್ರಾಣಿ ದ್ವೀಪಕ್ಕೆ( Nethrani Island) ತೆರಳಿ ಸ್ಕೂಬಾ ಡೈವಿಂಗ್ ಸ್ಥಳದಲ್ಲಿ ಕೆಲ ಸಮಯ ಕಾಲಕಳೆದರು.
- ಕುಮಟಾ ತಾಲೂಕಾ ಪಂಚಾಯತ್ ಕಾಮಗಾರಿ ಟೆಂಡರ್ನಲ್ಲಿ ಅವ್ಯವಹಾರ ಆರೋಪ
- ಡಿಸೆಂಬರ್ 6ಕ್ಕೆ ಉತ್ತರ ಕನ್ನಡಕ್ಕೆ ಕೇಂದ್ರ ಸಚಿವ ಕುಮಾರಸ್ವಾಮಿ ಭೇಟಿ
- ಕಾಂಗ್ರೇಸ್ ವಿರುದ್ಧ ಕಾರವಾರದಲ್ಲಿ ಬಿಜೆಪಿ ಪ್ರತಿಭಟನೆ
- ಆಸ್ಪತ್ರೆಗೆ ಉಪಕರಣ ಕೊಡಿ, ನಂತರ ಉದ್ಘಾಟನೆಗೆ ಬನ್ನಿ: ಕಾಂಗ್ರೇಸ್ ಸರಕಾರಕ್ಕೆ ರೂಪಾಲಿ ನಾಯ್ಕ ಖಡಕ್ ಎಚ್ಚರಿಕೆ”
ಮುರುಡೇಶ್ವರ ಕಡಲ ತೀರದಿಂದ ಸುಮಾರು 22ಕಿಲೋ ಮೀಟರ್ ದೂರ ಇರುವ ನೇತ್ರಾಣಿ ದ್ವೀಪ ವೀಕ್ಷಣೆಗಾಗಿ ಬೋಟ್ ಮೂಲಕ ಪತ್ನಿ ಉಷಾ,ಪತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ, ಶಿರಸಿ ಶಾಸಕ ಭೀಮಣ್ಣ ನಾಯ್ಕ, ಜೊತೆ ಬೋಟ್ ಮೂಲಕ ತೆರಳಿ ಕೆಲ. ಸಮಯ ನೇತ್ರಾ ದ್ವೀಪದ ಸುತ್ತ ಬೋಟ್ ಮೂಲಕ. ಸುತ್ತಾಡಿದ್ದರು.
ಬಳಿಕ ಮಾಧ್ಯಮದರೊಂದಿಗೆ ಮಾತ್ನಾಡಿದ ಡಿಕೆ ಶಿವಕುಮಾರ ನೇತ್ರಾಣಿಯಲ್ಲಿ ಸ್ಕೂಬ್ ಡೈವಿಂಗ್ ಮಾಡೋದನ್ನ ಟಿವಿಯಲ್ಲಿ ನೋಡಿದ್ದೆ. ಮನೆಯವರು ಸಹ ಬಹಳದಿನಗಳಿಂದ ನೇತ್ರಾಣಿ ವೀಕ್ಷಣೆ ಮಾಡಬೇಕು ಅಂತಾ ಇದ್ದರು. ನನಗೂ ಆಸೆ ಇತ್ತು. ಅದಕ್ಕೆ ಇಂದು ಕಾಲ ಕೂಡಿ ಬಂತು..ಇಲ್ಲಿನ ಕಡಲ ತೀರ ಯಾವ ಗೋವಾಗಿಂತ ಏನು ಕಮ್ಮಿಯಿಲ್ಲ.ಇಲ್ಲಿನ ಕಡಲ ತೀರ ನೋಡಿ ಮನಸ್ಸಿಗೆ ನೆಮ್ಮದಿಸಿಕ್ಕಂತಾಗಿದೆ.ಇಲ್ಲಿನ ಪ್ರವಾಸೋದ್ಯಮದ ಬಗ್ಗೆ ಇನ್ನೂ ಹೆಚ್ಚಿನ ಪ್ರಚಾರ ಸಿಗಬೇಕು ಎಂದರು.




