ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ಪ್ರವಾಸೋದ್ಯಮ ಅಭಿವೃದ್ದಿಗೆ ನಮ್ಮ ಜಿಲ್ಲೆಯಲ್ಲಿ ಸಾಕಷ್ಟು ಅವಕಾಶಗಳಿದ್ದು, ಅದನ್ನ ಅಭಿವೃದ್ಧಿ ಮಾಡುವ ಕನಸು ನನ್ನದಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ‌‌ ಮಂಕಾಳು ವೈದ್ಯ ತಿಳಿಸಿದ್ದಾರೆ.

ಈ ಬಗ್ಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನ ಉದ್ದೇಶಿಸಿ ಮಾತನಾಡಿದ ಸಚಿವರು ಈ ಹಿಂದೆ ನಾನು ಶಾಸಕರಾಗಿದ್ದ ಅವಧಿಯಲ್ಲಿ ಮೂರುಡೇಶ್ವರದಲ್ಲಿ ಸಾಕಷ್ಟು ಜಲಸಾಹಸ ಕ್ರೀಡೆಯನ್ನ ಅಂದು ನಾವೆ ಆರಂಭಿಸಿದ್ದೇವೆ. ಆಗ ದೇಶಪಾಂಡೆಯವರು ಸಚಿವರಾಗಿದ್ದರು,ಈ ಮೂಲಕ ಎಲ್ಲರಿಗೂ ಉದ್ಯೋಗ ಸಿಗುವಂತಾಗಬೇಕು. ಪ್ರವಾಸೋದ್ಯಮ ಬೆಳೆದಲ್ಲಿ ಸಾಕಷ್ಟು ಜನರಿಗೆ ಅದರ ಅನುಕೂಲವಾಗಲಿದೆ.ಹೀಗಾಗಿ ಮುರುಡೇಶ್ವರ ಸೇರಿದಂತೆ ಜಿಲ್ಲೆಯಲ್ಲಿ‌ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಾಗುವುದು‌.

ಇಲ್ಲಿನ ಪ್ರವಾಸೋದ್ಯಮವನ್ನ ನೋಡಿಯೇ ರಾಜ್ಯ ಹಾಗೂ ದೇಶ ವಿದೇಶಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಪ್ರವಾಸಿಗರು ನಮ್ಮ‌ ಜಿಲ್ಲೆಗೆ ಬರುತ್ತಿದ್ದಾರೆ. ಇದು ಜಿಲ್ಲೆಗೆ ಹೆಮ್ಮೆ.ಈ ನಿಟ್ಟಿನಲ್ಲಿ ಮುರುಡೇಶ್ವರ ಸೇರಿದಂತೆ ಜಿಲ್ಲೆಯಲ್ಲಿ ಯಾವೇಲ್ಲಾ ಪ್ರವಾಸಿ ತಾಣಗಳಿವೆ ಅವೇಲ್ಲವನ್ನ ಇನ್ನೂ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿ ಮಾಡುವ ಗುರಿ ಹೊಂದಲಾಗಿದೆ ಎಂದರು. ಈ ವೇಳೆ ಕಾರವಾರ ಶಾಸಕ ಸತೀಶ ಸೈಲ್ ಸಹ ಹಾಜರಿದ್ದರು.

ಗಮನಿಸಿ