ಸುದ್ದಿಬಿಂದು ಬ್ಯರೋ ವರದಿ
ಕಾರವಾರ:ಹಿಂದೂ ಮಹಾಸಾಗರದಲ್ಲಿ ಚಂಡಮಾರುತ ಉಂಟಾಗಿರುವ ಹಿನ್ನಲೆಯಲ್ಲಿ ಉತ್ತರಕನ್ನಡ ಜಿಲ್ಲೆ‌ ಸೇರಿದಂತೆ‌ ರಾಜ್ಯದ ಕರಾವಳಿ ಜಿಲ್ಲೆ ಹಾಗೂ ರಾಜ್ಯದ ಅನೇಕ‌ ಜಿಲ್ಲೆಯಲ್ಲಿ ಗುಡುಗು,ಗಾಳಿ ಸಹಿತ ಭಾರೀ‌‌ ಮಳೆಯಾಗಲಿದೆ ಎಂದು ಹವಮಾನ‌ ಇಲಾಖೆ ಮಾಹಿತಿ ನೀಡಿದೆ.

ಇಂದು ಬೆಳಿಗ್ಗೆಯಿಂದಲ್ಲೆ‌ ಕರಾವಳಿ ಜಿಲ್ಲೆಯ ಅನೇಕ‌ ಕಡೆಯಲ್ಲಿ ದಡ್ಡವಾಗಿರುವ ಮೋಡಕವಿದ ವಾತಾವರಣ ಉಂಟಾಗಿದ್ದು,ಇನ್ನೂ ಕೆಲವು ಕಡೆಯಲ್ಲಿ  ಇಂದು ಮಧ್ಯಾಹ್ನದ ನಂತರ 6ಜಿಲ್ಲೆಗಳಲ್ಲಿ ಗುಡುಗು ಮಳೆಯಾಗುವ ಎಚ್ಚರಿಕೆ ನೀಡಲಾಗಿದೆ.

ಬೆಳಗಾವಿ, ಗದಗ,ರಾಯಚೂರು ಹಾಗೂ ಬಳ್ಳಾರಿ ಜನರಿಗೆ ಗುಡುಗು, ಮಳೆ, ಗಾಳಿಯಿಂದ ಸುರಕ್ಷೀತ ವಾಗಿರುವಂತೆ ಎಚ್ಚರಿಕೆ ನೀಡಲಾಗಿದೆ.

ಗಮನಿಸಿ