suddibindu.in
ಕುಮಟಾ: ತಾಲೂಕಿನ ಬರ್ಗಿಯ ಸರ್ಕಾರಿ ಪ್ರೌಢಶಾಲಾಭಿವೃದ್ಧಿ ಸಮಿತಿ ಹಾಗೂ ಊರ‌ ನಾಗರಿಕರ ಸಹಕಾರದಲ್ಲಿ ನಡೆದ ಮಿರ್ಜಾನ್ ವಲಯ ಮಟ್ಟದ ಪ್ರೌಢಶಾಲಾ ಇಲಾಖಾ ಮಟ್ಟದ ಕ್ರೀಡಾಕೂಟ ಯಶಸ್ವಿಯಾಗಿ ಸಂಪನ್ನಗೊಂಡಿತು.

ಕ್ರೀಡಾಕೂಟ ಉದ್ಘಾಟಿಸಿದ ಬರ್ಗಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಸಂತೋಷ ಹರಿಕಾಂತ ಅವರು ಮಾತನಾಡಿ ಶಿಕ್ಷಣದ ಜೊತೆ ಜೊತೆಗೆ ವಿದ್ಯಾರ್ಥಿಗಳು ಕ್ರೀಡೆಯಲ್ಲಿಯೂ ತೋಡಗಿಕೊಳ್ಳಬೇಕು.ನಮ್ಮ ಪಂಚಾಯತ ವ್ಯಾಪ್ತಿಯಲ್ಲಿ ಕ್ರೀಡಾ ಕೂಟವನ್ನ ಶಾಲಾ ಅಭಿವೃದ್ಧಿ ಸಮಿತಿ ‌ಹಾಗೂ ಊರ ನಾಗರಿಕರ ಹಾಗೂ ಪಂಚಾಯತ ಸಹಕಾರದಲ್ಲಿ ಅಚ್ಚುಕಟ್ಟಾಗಿ ನಿರ್ವಹಿಸಿರುವುದು ಖುಷಿ ತಂದಿದೆ. ಶಾಲೆಯ ಅಭಿವೃದ್ಧಿಗಾಗಿ ಪಂಚಾಯತದಿಂದ ಸದಾ ಸಹಕಾರ ನೀಡಲಾಗುವುದು ಎಂದರು.

ಸರಕಾರಿ ಪ್ರೌಢ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಸುರೇಶ ಪಟಗಾರ ಅವರು ಮಾತ್ನಾಡಿ ನಮ್ಮೂರ ಶಾಲೆಗೆ ಈ ಬಾರಿ ವಲಯ ಮಟ್ಟದ ಕ್ರೀಡಾ ಕೂಟ ನಡೆಸಲು ಅವಕಾಶ ಸಿಕ್ಕಿರುವುದು ಹೆಮ್ಮೆಯಾಗಿದೆ.ಕ್ರೀಡಾ ಕೂಟ ನಡೆಸಲು ಊರ ಗ್ರಾಮಸ್ಥರು, ಶಾಲೆಯ ಹಳೆ ವಿದ್ಯಾರ್ಥಿಗಳು ಸೇರಿದಂತೆ ಅನೇಕರು ಕ್ರೀಡಾಕೂಡಟಕ್ಕೆ ಸಹಾಯ ಸಹಕಾರವನ್ನ ನೀಡಿದ್ದಾರೆ ಈ ಸಂದರ್ಭದಲ್ಲಿ ಎಲ್ಲರನ್ನೂ ನಾವು ನೆನಪಿಸಿಕೊಳ್ಳಬೇಕಾಗಿದೆ ಎನ್ನುವ ಮೂಲಕ ಕ್ರೀಡಾಕೂಟಕ್ಕೆ ಸಹಾಯ ಸಹಕಾರ ನೀಡದ ದಾನಿಗಳನ್ನ ಈ ಸಂದರ್ಭದಲ್ಲಿ ನೆನಪಿಸಿಕೊಂಡರು.

ಬರ್ಗಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಉಪಾಧ್ಯಕ್ಷರಾದ ಗೋವಿಂದ ನಾಯಕ ಅವರು ಮಾತನಾಡಿ, ಸಾಮಾನ್ಯವಾಗಿ ಪ್ರತಿ 10 ವರ್ಷಗಳಿಗೊಮ್ಮೆ ಬರುವ ವಲಯ ಮಟ್ಟದ ಪಂದ್ಯಾಟವನ್ನು ಸಂಘಟಿಸುವ ಜವಬ್ದಾರಿಯು ಪ್ರಸಕ್ತ ವರ್ಷದಲ್ಲಿ ಬರ್ಗಿ ಪ್ರೌಢಶಾಲೆಗೆ ಒದಗಿ ಬಂದಿದ್ದು, ವಿದ್ಯಾರ್ಥಿ-ಪಾಲಕರು, ಪ್ರೌಢಶಾಲಾ ಶಿಕ್ಷಕ-ಸಿಬ್ಬಂದಿಗಳು,ಹಳೆಯ ವಿದ್ಯಾರ್ಥಿಗಳು,ಸಾರ್ವಜನಿಕರು, ಗ್ರಾಮ ಪಂಚಾಯತ್, ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್, ಸ್ಥಳೀಯ ಸಂಘ-ಸಂಸ್ಥೆಗಳು ಹಾಗೂ ದಾನಿಗಳು ಜೊತೆಯಾಗಿ ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿ ಕ್ರೀಡಾಕೂಟವನ್ನು ಪರಿಣಾಮಕಾರಿಯಾಗಿ ಸಂಘಟಿಸಿ ಬರ್ಗಿ ಊರಿನ ಘನತೆಯನ್ನು ಎತ್ತಿ ಹಿಡಿದಿದ್ದಾರೆ ಎಂದರು.

ಪ್ರಭಾರ ದೈಹಿಕ ಪರಿವೀಕ್ಷಕರಾದ ಮಿರ್ಜಾನ್ ಪ್ರೌಢಶಾಲೆಯ ದೈಹಿಕ ಶಿಕ್ಷಕರಾದ ಬಿ.ಜಿ. ನಾಯಕ ಅವರು ಮಾತನ್ನಾಡಿ,ದೈಹಿಕ ಶಿಕ್ಷಣವು ಸಾಮಾನ್ಯ ಶಿಕ್ಷಣದ ಅವಿಭಾಜ್ಯ ಅಂಗವಾಗಿದ್ದು,ಪಾಠಗಳಷ್ಟೇ ಆಟಗಳಿಗೂ ಮಹತ್ವವನ್ನು ನೀಡಬೇಕಾಗಿದೆ ಎಂದರು,

ಬರ್ಗಿ ಪ್ರೌಢಶಾಲಾ ಮುಖ್ಯಾಧ್ಯಾಪಕರಾದ ಮಧುಕೇಶ್ವರ ನಾಯ್ಕ ಸ್ವಾಗತಿಸಿ – ಪ್ರಾಸ್ತಾವಿಕ ನುಡಿಗಳಾಡಿದರು.

ಶಿಕ್ಷಕಿ ಗೀತಾ ನಾಗೇಕರ್ ನಿರೂಪಿಸಿದರು, ಶಿಕ್ಷಕರಾದ ಪಿ.ಎನ್. ನಾಯ್ಕವರು ವಂದಿಸಿದರು. ಶಿಕ್ಷಕಿ ಚಂಪಾವತಿ ನಾಯ್ಕ ಪ್ರತಿಜ್ಞಾ ವಿಧಿ ಬೋಧಿಸಿದರು. ಹೆಗಡೆಯ ಶ್ರೀಶಾಂತಿಕಾಂಬ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಎಂ.ಎಸ್. ದೊಡ್ಮನಿ ಹಾಗೂ ಮುರೂರಿನ ಪ್ರಗತಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಅರುಣ್ ನಾಯ್ಕ ಧ್ವಜ ವಂದನೆಗೆ ಸಹಕರಿಸಿದರು. ಶಾಲಾ ಮುಖ್ಯಮಂತ್ರಿ ಆಕಾಶ ಹರಿಕಂತ್ರ ಕ್ರೀಡಾ ಜ್ಯೋತಿಯನ್ನು ಹೊತ್ತು ತಂದರು.

ವೇದಿಕೆಯಲ್ಲಿ
ಬರ್ಗಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಮಹಾಲಕ್ಷ್ಮೀ ಶೆಟ್ಟಿ, ಸದಸ್ಯರಾದ ನವೀನ್ ಎಸ್ ಪಟಗಾರ, ಮಂಗಲಾ ನಾಯಕ, ಮಾಲತಿ ಆಗೇರ್, ಹಾಗೂ ಹಿರಿಯ ಶಿಕ್ಷಕಿ ಸರಸ್ವತಿ ನಾಯಕ ಹಾಗೂ ಸಹ ಶಿಕ್ಷಕರು, SDMC ಸದಸ್ಯರು ಉಪಸ್ಥಿತರಿದ್ದರು…

ಇದನ್ನೂ ಓದಿ