suddibindu.in
ಕುಮಟಾ : ಮೀನುಗಾರಿಕೆಗೆ ಹೋಗಿದ್ದ ವೇಳೆ ದೋಣಿ ಮುಳುಗಡೆಯಾಗಿ ಓರ್ವ ನಾಪತ್ತೆಯಾಗಿದ್ದು, ಇಬ್ಬರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ತದಡಿಯ ಬೆಲೆಕಾನ್‌‌ನ ಅರಬ್ಬೀ ಸಮುದ್ರದಲ್ಲಿ ನಡೆದಿದೆ
.

ಅಘನಾಶಿನಿಯ ವಿನೋದ ಶಂಕರ ಅಂಬಿಗ (37) ಎಂಬಾತನೆ ಸಮುದ್ರದಲ್ಲಿ ಮುಳುಗಡೆಯಾಗಿದ್ದಾನೆ‌. ಇನ್ನೂ ಆತನ ಜೊತೆ ಇದ್ದ ಇಬ್ಬರೂ ಈಜಿ ದಂಡ ಸೇರಿದ್ದಾರೆ. ಮೂವರು ಸೇರಿ ಇಂದು ಬೆಳಿಗ್ಗೆ ದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದರು.ಈ ವೇಳೆ ಸಮುದ್ರದ ಅಲೆ ದೋಣಿಗೆ ಅಪ್ಪಳಿಸಿದ ಪರಿಣಾಮ ದೋಣಿ ಮುಳುಗಡೆಯಾಗಿದೆ. ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಇದನ್ನೂ ಓದಿ