Karwar:ಕಾರವಾರ : ವಿದ್ಯಾರ್ಥಿಗಳ ಶಿಕ್ಷಣದ ಸರ್ವತೋಮುಖ ಪ್ರಗತಿಗೆ ಉತ್ತೇಜನ ನೀಡಲು ನಾವು ಸದಾ ಸಿದ್ದರಾಗಿದ್ದೇವೆ. ಶಿಕ್ಷಣದ ವಿಚಾರದಲ್ಲಿ ಯಾವುದೇ ತಾರತಮ್ಯವಿಲ್ಲ. ಪ್ರತಿಯೊಬ್ಬ ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ತಮ್ಮ ಭವಿಷ್ಯ ರೂಪಿಸಿಕೊಳ್ಳುವಂತಾಗಬೇಕು ಎಂದು ಕಾರವಾರ-ಅಂಕೋಲಾ ಕ್ಷೇತ್ರದ ಶಾಸಕ ಸತೀಶ್ ಸೈಲ್ ವಿದ್ಯಾರ್ಥಿಗಳಿಗೆ ಕರೆನೀಡಿದರು.
ನಗರದ ಸರಕಾರಿ ಕಾಲೇಜಿನಲ್ಲಿ ವಿದ್ಯಾರ್ಥಿ ಒಕ್ಕೂಟದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಶಾಸಕ ಸತೀಶ್ ಸೈಲ್ ಅವರು ನಮ್ಮ ವಿದ್ಯಾರ್ಥಿಗಳು ಈ ಕಾಲೇಜಿನಲ್ಲಿ ಉತ್ತಮ ಸಾಧನೆ ಮಾಡಿದ್ದು ಹೆಮ್ಮೆಯ ಸಂಗತಿಯಾಗಿದೆ. 2023-24ನೇ ಸಾಲಿನಲ್ಲಿ ರಾಜ್ಯಕ್ಕೆ ಮಾದರಿ ಆಗುವ ರೀತಿಯಲ್ಲಿ ಕಾಲೇಜು ಫಲಿತಾಂಶ ನೀಡಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಈ ವೇಳೆ ಕಾಲೇಜಿನ ಸಾಧನೆಗಳಲ್ಲಿ ಕುರಿತು ಶಾಸಕರ ಎದುರು ತೆರೆದಿಡಲಾಯಿರು. 2023-24ನೇ ಸಾಲಿನಲ್ಲಿ ವಿಜ್ಞಾನ ಹಾಗೂ ಕಲಾ ವಿಭಾಗದಲ್ಲಿ %96ಫಲಿತಾಂಶ್ ಬಂದಿದೆ. ಇದರಲ್ಲಿ 25 ವಿದ್ಯಾರ್ಥಿಗಳು ಆರು ವಿಷಯದಲ್ಲಿ ನಾಲ್ಕು ಮೂರು ಎರಡು ಹಾಗೂ ಒಂದು ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕ ಪಡೆದು ಕಾಲೇಜಿಗೆ ಕೀರ್ತಿ ತಂದಿರುತ್ತಾರೆ. ಎಂದರು.
ಈ ಕಾಲೇಜು ಇನ್ನು ಅಭಿವೃದ್ಧಿ ಹೊಂದಲು ಕಾಲೇಜಿಗೆ ರಾಜ್ಯದ ಮುಖ್ಯಮಂತ್ರಿ ಗಳು, ಉಪಮುಖ್ಯಮಂತ್ರಿಗಳು, ಹಾಗೂ ಶಿಕ್ಷಣ ಸಚಿವರನ್ನ ತಮ್ಮ ಕಾಲೇಜಿಗೆ ಕರೆತಂದು ಇನ್ನೂ ವಿಶೇಷ ಅನುದಾನ ನೀಡುವಂತಾಗಬೇಕೆಂದು ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಒಕ್ಕೊರಲಿನಿಂದ ಶಾಸಕ ಸತೀಶ್ ಸೈಲ್ ಅವರ ಬಳಿ ವಿನಂತಿಸಿಕೊಂಡರು.
ಖಾಸಗಿ ಕಾಲೇಜುಗಳಿಗಿಂತ ಉತ್ತಮ ಶಿಕ್ಷಣ ಇಲ್ಲಿಯ ವಿದ್ಯಾರ್ಥಿಗಳಿಗೆ ದೊರೆಯುವಂತೆ ಮಾಡಲು ಉಪನ್ಯಾಸಕರನ್ನು ನೇಮಿಸುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ ಮತ್ತು ಶಿಕ್ಷಣ ಸಚಿವ ಮದು ಬಂಗಾರಪ್ಪರವರೊಂದಿಗೆ ಚರ್ಚಿಸಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿರುವ ಕಾಲೇಜಿಗೆ ಇನ್ನೂ ಹೆಚ್ಚಿನ ಸೌಲಭ್ಯ ನೀಡುವಂತಾಗಬೇಕು. ಇನ್ನೂ ಹೊಸದಾಗಿ 14ಮಂದಿ ಅತಿಥಿ ಉಪನ್ಯಾಸಕರನ್ನ ನೇಮಕ ಮಾಡಿರುವ ಶಾಸಕ ಸತೀಶ್ ಸೈಲ್ ಅವರ ಕಾರ್ಯಕ್ಕೆ ಕಾಲೇಜು ಪ್ರಾಂಶುಪಾಲರು ಉಪನ್ಯಾಸಕರು ವಿದ್ಯಾರ್ಥಿಗಳು ಮೆಚ್ಚುಗೆ ವ್ಯಕ್ತಪಡಿಸಲಾಯಿತು.
ಈ ಸಂದರ್ಭದಲ್ಲಿ ಪ್ರಮುಖರಾದ ನಿವೃತ್ತ ಪ್ರಾಚಾರ್ಯ ಜಿ ಪಿ ನಾಯಕ ಮತ್ತು ಕಾಲೇಜು ಪ್ರಾಂಶುಪಾಲರು ಉಪನ್ಯಾಸಕರು ವಿದ್ಯಾರ್ಥಿಗಳು ಉಪಸ್ತಿತರಿದ್ದರು
ಇದನ್ನೂ ಓದಿ