suddibindu.in
Karwar:ಕಾರವಾರ : ಭಕ್ತರ ಆರಾಧ್ಯದೈವ ಸದಾಶಿವಗಡದಲ್ಲಿ ನೆಲೆಸಿರುವ ಶ್ರೀದುರ್ಗಾದೇವಿ ದೇವಸ್ಥಾನದಲ್ಲಿಂದು ಶಾಸಕ ಸತೀಶ್ ಸೈಲ್,ಪತ್ನಿ ಕಲ್ಪನಾಸೈಲ್ ಹಾಗೂ ಕುಟುಂಬ ಸಮೇತರಾಗಿ ದೇಗುಲಕ್ಕೆ ತೆರಳಿ ವಿಶೇಷವಾದ ಪೂಜೆ ಸಲ್ಲಿಸಿದರು.
ಶಾಸಕ ಸತೀಶ್ ಸೈಲ್ ಅವರು ಈ ಹಿಂದಿನಿಂದಲ್ಲೂ ಸಹ ದುರ್ಗಾದೇವಿಯ ಭಕ್ತರಾಗಿದ್ದಾರೆ.ಅವರು ಪ್ರತಿ ವರ್ಷವೂ ಕೂಡ ಶ್ರಾವಣ ಮಾಸದಲ್ಲಿ ಕುಟುಂಬ ಸಮೇತರಾಗಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸುತ್ತಾ ಬಂದಿರುವುದು ವಾಡಿಕೆ. ಅದರಂತೆ ಶ್ರಾವಣ ಮಾಸದ ಶುಭ ಶುಕ್ರವಾರವಾದ ಇಂದು ಸಹ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಶ್ರೀದೇವಿಯ ತೀರ್ಥ, ಪ್ರಸಾದ ಸ್ವೀಕರಿಸಿದರು.
ಇದನ್ನೂ ಓದಿ
- ಹೈಟೆಕ್ ತಂತ್ರಕ್ಕೆ ಸಿಕ್ಕಿಬಿದ್ದ ಜೂಜುಕೋರರು; ಡ್ರೋಣ್ ಮೂಲಕ ಪತ್ತೆಯಾದ ಇಸ್ಪೀಟ್ ಅಡ್ಡೆ
- “ಸ್ವಾತಂತ್ರ್ಯ ಹೋರಾಟಗಾರ ನಾರಾಯಣ ನಾಯ್ಕ ಸ್ಮರಣಾರ್ಥ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ, ಗಿಡ ವಿತರಿಸಿದ ಪ್ರಶಾಂತ ನಾಯ್ಕ”
- ಗೃಹಲಕ್ಷ್ಮಿ ಫಲಾನುಭವಿಗಳಿಗೆ ಮರು ಅರ್ಜಿ ಕಡ್ಡಾಯ : ರಾಜ್ಯ ಸರ್ಕಾರದಿಂದ ಮರುಪರಿಶೀಲನೆಗೆ ಸಿದ್ಧತೆ
ಶ್ರಾವಣ ಮಾಸವಾಗಿರುವ ಕಾರಣ ದೇವಾಲಯಕ್ಕೆ ನೂರಾರು ಸಂಖ್ಯೆಯಲ್ಲಿ ಭಕ್ತರೂ ಆಗಮಿಸಿದ್ದರು, ದೇಗುಲಕ್ಕೆ ಬಂದ ಭಕ್ತರ ಎಲ್ಲರಿಗೂ ಶಾಸಕ ಸತೀಶ್ ಸೈಲ್ ಹಾಗೂ ಪತ್ನಿ ಕಲ್ಪನಾಸೈಲ್ ಪ್ರಸಾದ ವಿವರಿಸಿದರು. ಬಳಿಕ ದೇವರಲ್ಲಿ ಪ್ರಾರ್ಥಿಸಿಕೊಂಡ ಶಾಸಕರು, ಕಾಳಿ ನದಿಯ ಸೇತುವೆ ದುರಂತದಲ್ಲಿ ಯಾವುದೇ ಪ್ರಾಣ ಹಾನಿ ಆಗದೆ ಕಾಪಾಡಿರುವುದಕ್ಕೆ ಈ ವೇಳೆ ಭಕ್ತರ ಎದರು ದೇವಿಯನ್ನ ನೆನೆದರು, ಅದೇ ರೀತಿ ಎಲ್ಲರನ್ನೂ ಸದಾ ಸುಖ,ಸಮೃದ್ದಿಯಿಂದ ನೆಮ್ಮದಿಯಿಂದ ಕಾಪಾಡುವಂತೆ ದುರ್ಗಾ ದೇವಿಯಲ್ಲಿ ಕೈಮುಗಿದು ಪ್ರಾರ್ಥಿಸಿಕೊಂಡರು.




