suddibindu.in
ಕಾರವಾರ: ದಯವಿಟ್ಟು 650 ಕೋಟಿ ವೆಚ್ಚದ ಯೋಜನೆಯನ್ನ ಕೈ ಬಿಡಿ ಎಂದು ಕುಮಟಾ ಕ್ಷೇತ್ರದ ಬಿಜೆಪಿ ಶಾಸಕ ದಿನಕರ ಶೆಟ್ಟಿ ಕಾರವಾರ ಡಿ.ಸಿ.ಎಫ್ ರವಿಶಂಕರ್ ಅವರಿಗೆ ಮನವಿ ಮಾಡಿಕೊಂಡರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಡಳಿತ ಸುಧಾರಣಾ ಆಯೋಗ ಅಧ್ಯಕ್ಷ ಆರ್ ವಿ ದೇಶಪಾಂಡೆ ನೇತೃತ್ವದಲ್ಲಿ ಸಭೆ ನಡೆಯಲಾಯಿತು.ಈ ಸಂಧರ್ಭದಲ್ಲಿ ಸಮುದ್ರಕ್ಕೆ ಪ್ಲಾಸ್ಟಿಕ್ ಸೇರಂತೆ ತಡೆಯುವ ಸುಮಾರು 650 ಕೋಟಿ ವೆಚ್ಚದ ಯೋಜನೆ ಬಗ್ಗೆ ಚರ್ಚೆ ಆಯಿತು. ಈ ಸಂಧರ್ಭದಲ್ಲಿ ಮಾತನಾಡಿದ ದಿನಕರ ಶೆಟ್ಟಿ ದಯವಿಟ್ಟು ಈ ಯೋಜನೆ ಜಾರಿಗೆ ತರಬೇಡಿ. ನಾನು ಬೇರೆ ಏನು ಹೇಳುವುದಿಲ್ಲ. ಯೋಜನೆ ಕೈ ಬಿಡುವುದು ಒಳ್ಳೆಯದು ಎಂದು ಡಿ.ಸಿ.ಎಫ್ ಗೆ ಮನವಿ ಮಾಡಿಕೊಂಡರು.
ಇದನ್ನೂ ಓದಿ
- ದಿಕ್ಕು ತಪ್ಪಿದ ರಾಜ್ಯ ಬಿಜೆಪಿಗೆ (BJP) ಸಂಘ ಪರಿವಾರದ ಹೊಸ ಪ್ಲ್ಯಾನ್?
- ಸುಚಿತ್ರ ಸೌಂದರ್ಯಕ್ಕೆ ಸೋತ ಜ್ಯೋತಿಷಿ..? ಮೊದಲ ಭೇಟಿಯಲ್ಲೇ 35 ಸಾವಿರ ಸುರಿದ ಕಮಲಾಕರ ಭಟ್..!
- ಸುಚಿತ್ರಾ ಯಾರು? ಸುರೇಖಾ ಯಾರು? ವಸಂತ್ ನಾಯ್ಕ್ ಕೊಲೆ ಪ್ರಕರಣದಲ್ಲಿ ಸ್ಫೋಟಕ ಸತ್ಯಗಳು ಒಂದೊಂದಾಗಿ ಬಹಿರಂಗ!
ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಮೀನುಗಾರಿಕೆ ಮತ್ತು ಬಂದರು ಸಚಿವ ಮಂಕಾಳ ವೈದ್ಯ ತಮ್ಮ ಇಲಾಖೆಯಲ್ಲಿ ಪ್ಲಾಸ್ಟಿಕ್ ತಡೆಯಲು ಕೈ ಗೊಂಡ ಯೋಜನೆ ಬಗ್ಗೆ ದಿನಕರ ಶೆಟ್ಟಿ ವಿರೋಧಕ್ಕೆ ಇಳಿದಿರುವುದು ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.





