
suddibindu.in
ಶಿರಸಿ: ದಶಕಗಳ ಕಾಲ ಶಿರಸಿ ಸಿದ್ದಾಪುರ ಕ್ಷೇತ್ರ ವಿಐಪಿ ಸಂಸ್ಕೃತಿಯ ಶಾಸಕರಿಂದ ಬೇಸತ್ತಿದ್ದೂ, ಈ ಬಾರಿ ಜನಗಳೇ ತಮ್ಮ ಸುಪ್ರವೈಸರ್ ಅನ್ನು ಆಯ್ಕೆ ಮಾಡಿಕೊಂಡಿದ್ದಾರೆಂದು ಹೇಳಿಕೆ ನೀಡಿರುವ ಬಿಜೆಪಿಗರಿಗೆ ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗದ ಅಧ್ಯಕ್ಷ ಪ್ರಸನ್ನ ಶೆಟ್ಟಿ ಬಿಜೆಪಿಗರಿಗೆ ಧನ್ಯವಾದ ತಿಳಿಸಿದ್ದಾರೆ.
ಜಾತಿ ಧರ್ಮಗಳ ಬೇಧವಿಲ್ಲದೆ, ಪಕ್ಷ ಪಾತ ಮಾಡದೇ ತಾವು ಶಾಸಕರು ಎಂಬ ಅಹಂಕಾರವಿಲ್ಲದೆ ಜನಗಳ ಕಷ್ಟಕ್ಕೆ ಸ್ಪಂದಿಸುತ್ತ, ಭ್ರಷ್ಟಾಚಾರ, ಕಳಪೆ ಕಾಮಗಾರಿಗಳು ನಡೆಯಬಾರದು ಎಂದು ತಾವೇ ಕ್ಷೇತ್ರದ ಸುಪ್ರವೈಸರ್ ಆಗಿ ಎಲ್ಲಾ ಕಾರ್ಯಗಳನ್ನು ನೋಡಿಕೊಳ್ಳುತ್ತಿದ್ದಾರೆ, ಇಂತಹ ಶಾಸಕರನ್ನು ಪಡೆದ ಕ್ಷೇತ್ರಕ್ಕೆ ಹೆಮ್ಮೆ ಇದೆ. ಬಿಜೆಪಿಯವರಿಗೆ ಟೀಕಿಸಲು ಕಾರಣಗಳೇ ಇಲ್ಲದಿರುವಾಗ ಇಂತಹ ಕ್ಷುಲ್ಲಕ ಹೇಳಿಕೆಗಳನ್ನು ಹತಾಶೆಯಿಂದ ನೀಡುತ್ತಿದ್ದಾರೆ.
ಇದನ್ನೂ ಓದಿ
- ಖಾಸಗಿ ಬಸ್-ಲಾರಿ ಅಪಘಾತ : ಅಪಾಯದಿಂದ ಪಾರಾದ ಪ್ರಯಾಣಿಕರು
- ಜೂನ್ 25ಕ್ಕೆ ಅಂಗನವಾಡಿ, ಶಾಲೆಗಳಿಗೆ ರಜೆ ಘೋಷಣೆ
- ಅನಂತಕುಮಾರ ಹೆಗಡೆ ಗನ್ ಮ್ಯಾನ್ ಅಮಾನತ್
ನಮ್ಮ ಶಾಸಕರ ಕಾರ್ಯ ವೈಖರಿ ಮತ್ತು ಇಂತಹ ಅನುದಾನಗಳ ಮಾಹಿತಿಯನ್ನು ಸ್ವತಃ ಅವರೇ ಲೋಕಸಭಾ ಚುನಾವಣ ಪೂರ್ವದಲ್ಲಿ ಪತ್ರಿಕಾ ಘೋಷ್ಟಿ ನಡೆಸಿ ಮಾಹಿತಿ ನೀಡಿದ್ದರು,ನೀತಿ ಸಂಹಿತೆಯ ಕಾರಣದಿಂದ ಕನಿಷ್ಠ 200 ಕೋಟಿಯಷ್ಟು ಅನುದಾನ ಅನುಮೋದನೆಗೆ ಬಾಕಿ ಇದೆ, ಇನ್ನು ಕೆಲವೇ ದಿನಗಳಲ್ಲಿ ಮಂಜೂರಾತಿ ದೊರೆಯುತ್ತದೆ, ಬಿಜೆಪಿಗರು ಬೊಬ್ಬೆ ಹೊಡೆಯುವುದನ್ನು ನಿಲ್ಲಿಸಿ ದಶಕಗಳ ಕಾಲ ಶಿರಸಿ ಸಿದ್ದಾಪುರ ಕ್ಷೇತ್ರವನ್ನು ಆಳಿದ ನೂತನ ಸಂಸದರಿಗೆ ಕನಿಷ್ಠ ಜಿಲ್ಲೆಗೆ ಒಂದು ಸುಸಜ್ಜಿತ ಆಸ್ಪತ್ರೆ ಮಂಜೂರು ಮಾಡಿಸಲು ಹೇಳಿ ಅಂದಿದ್ದಾರೆ.