Farmers protest Against mp ananth Kumar hegde
suddibindu. Im
ಬೆಳಗಾವಿ: ಉತ್ತರಕನ್ನಡ ಜಿಲ್ಲೆಯ ಬಿಜೆಪಿ ಸಂಸದರಾಗಿರುವ ಅನಂತ್ಕುಮಾರ್ ಹೆಗಡೆ (MP Anantkumar Hegde) ಕಾರ್ಗೆ ರೈತರು ಮುತ್ತಿಗೆ ಹಾಕಲು ಪ್ರಯತ್ನಿಸಿದ ಘಟನೆ ಖಾನಾಪುರದಲ್ಲಿ ನಡೆದಿದೆ.
ಸಂಸದರಾಗಿ ಗೆದ್ದ ಬಳಿಕ ಮತ ಹಾಕಿ ಗೆಲ್ಲಿಸಿದ ಕ್ಷೇತ್ರದ ಮತದಾರರ ಕಣ್ಣಿಗೆ ಕಾಣಿಸಿಕೊಳ್ಳದೆ ದೂರ ಉಳಿದಿದ್ದ ಅನಂತಕುಮಾರ ಹೆಗಡೆ ಚುನಾವಣೆ ಸಮೀಪಿಸುತ್ತಿದ್ದಂತೆ ಆಕ್ಟಿವ್ ಆಗಿದ್ದಾರೆ. ಅವರು ಇಂದು ಕೆನರಾ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಡುವ ಖಾನಾಪುರ (Khanapura) ವಿಧಾನಸಭಾ ಕ್ಷೇತ್ರದಲ್ಲಿ ಪ್ರವಾಸಕೈಗೊಂಡಿದ್ದರು.ಈ ವೇಳೆ ಕ್ಷೇತ್ರದ ಸಮಸ್ಯೆ ಪರಿಹರಿಸುವಂತೆ ಸಂಸದರಿಗೆ ಮನವಿ ನೀಡಬೇಕೆಂದಹ ರೈತರು ಕಾಯುತ್ತಿದ್ದರು. ರೈತರು ನಿಂತಿದ್ದ ಮಾರ್ಗದಲ್ಲೆ ಬಂದ ಸಂಸರು ರೈತರನ್ನ ಕಂಡು ಕಾರಿನಿಂದ ಕೆಳಗಿಳಿಯದೆ ರೈತರ ಮನವಿಯನ್ನು ಕೂಡ ಪಡೆಯದೇ ಹೊರಟು ಹೋಗಿದ್ದಾರೆ.
ಇದನ್ನೂ ಓದಿ:-
- ಖಾಸಗಿ ಬಸ್-ಲಾರಿ ಅಪಘಾತ : ಅಪಾಯದಿಂದ ಪಾರಾದ ಪ್ರಯಾಣಿಕರು
- ಜೂನ್ 25ಕ್ಕೆ ಅಂಗನವಾಡಿ, ಶಾಲೆಗಳಿಗೆ ರಜೆ ಘೋಷಣೆ
- ಅನಂತಕುಮಾರ ಹೆಗಡೆ ಗನ್ ಮ್ಯಾನ್ ಅಮಾನತ್
ಸಂಸದರ ವರ್ತನೆಯಿಂದ ಆಕ್ರೋಶಗೊಂಡ ರೈತರು, ಕಾರ್ಗೆ ಮುತ್ತಿಗೆ ಹಾಕೋದಕ್ಕು ಯತ್ನಿಸಿದರು. ರೈತ ಸಂಘಟನೆ ಮುಖಂಡರು, ಸಂಸದರ ವಿರುದ್ಧ ಧಿಕ್ಕಾರ ಕೂಗಿ ಇವರಂತಹ ಸಂಸದರು ನಮ್ಮಗೆ ಬೇಡ.ಈ ಬಾರಿ ಚುನಾವಣೆಯಲ್ಲಿ ನಾವು ನೋಟಾ ವೋಟ್ ಮಾಡುವುದುದಾಗಿ ಆಕ್ರೋಶ ಹೊರಹಾಕಿದರು.