ಸುದ್ದಿಬಿಂದು ಬ್ಯೂರೋ
ಮುರುಡೇಶ್ವರ : ಕಳೆದ ಅನೇಕ ವರ್ಷಗಳಿಂದ ಉದ್ಯೋಕ್ಕಾಗಿ ಗೋವಾದಲ್ಲಿ‌ ನೆಲೆಸಿರುವ ಕನ್ನಡಿಗರಿಗೆ ಕನ್ನಡದ ಇತಿಹಾಸವನ್ನ ಪರಿಚಯಿಸುವ ಉದ್ದೇಶದಿಂದ‌ ಗೋವಾದ ಕರ್ಮಭೂಮಿ ಕನ್ನಡ ಸಂಘಟನೆಯವರು ವಿನೂತನ ಕಾರ್ಯಕ್ರಮಕ್ಕೆ‌ ಹಮ್ಮಿಕೊಂಡಿದ್ದಾರೆ. ಗೋವಾದಲ್ಲಿ ನೆಲೆಸಿರುವ ಸಾವಿರಾರು ಗೋವಾ ಕನ್ನಡಿಗರನ್ನ ಉತ್ತರಕನ್ನಡ ಜಿಲ್ಲೆಯ ಮುರುಡೇಶ್ವರ,ಇಡಗುಂಜಿ ಹಾಗೂ ಗೋಕರ್ಣ ದೇವಾಲಯಲ್ಲಿ ಕರೆತಂದು ಇಲ್ಲಿನ ದಾರ್ಮಿಕ ಕ್ಷೇತ್ರದ ‌ಬಗ್ಗೆ ಪರಿಚಯಿಸಲಾಯಿತು.

ಗೋವಾದ ಕರ್ಮಭೂಮಿ ಕನ್ನಡ ಸಂಘಟನೆ ಅಧ್ಯಕ್ಷ ಹನುಮಂತ ‌ರೆಡ್ಡಿ ಹಾಗೂ ಸಂಘದ ಸದಸ್ಯರೆಲ್ಲಾ ಒಟ್ಟಾಗಿ ಇಂದು ಸುಮಾರು ಹತ್ತಕ್ಕೂ ಹೆಚ್ಚು ಬಸ್ ನಲ್ಲಿ ಗೋವಾದಲ್ಲಿ ನೆಲೆಸಿರುವ ಕನ್ನಡಿಗರನ್ನ ಕರೆದುಕೊಂಡು ಬಂದು ಉತ್ತರಕನ್ನಡ ಜಿಲ್ಲೆಯ ಪ್ರಮುಖ ಸ್ಥಳಗಳ‌ ಬಗ್ಗೆ ಸವಿಸ್ತಾರವಾಗಿ ಪರಿಚಯಿಸಲಾಯಿತು. ಕರ್ನಾಟಕ ವಿವಿಧ ಜಿಲ್ಲೆಯ ಲಕ್ಷಾಂತರ ಮಂದಿ ಗೋವಾದಲ್ಲಿ ನೆಲೆಸಿ ತಮ್ಮ ಉದ್ಯೋಗವನ್ನ ಕಂಡುಕೊಳ್ಳುವುದಕ್ಕಾಗಿ ಕೊಂಕಣಿ ಭಾಷೆಯಲ್ಲಿಯೇ ಹೆಚ್ಚಾಗಿ ಮಾತ್ನಾಡತ್ತಿದ್ದಾರೆ,

ಹೀಗಾಗಿ ಅಲ್ಲಿರುವ ಕನ್ನಡಿಗರಿಗೆ ನಮ್ಮ ನೆಲದ ಭಾಷೆ ಕನ್ನಡ ದೂರವಾಗುವುದರೊಂದಿಗೆ ಸಂಸ್ಕೃತಿಯನ್ನ ಸಹ ಮರೆಯುವಂತಾ ಪರಿಸ್ಥಿತಿ ಗೋವಾ ಕನ್ನಡಿಗರಲ್ಲಿ ನಿರ್ಮಾಣವಾಗಿದೆ, ಈ ಕಾರಣಕ್ಕಾಗಿ ಕರ್ಮಭೂಮಿ ಕನ್ನಡ ಸಂಘಟನೆ ವಿನೂತನ ಕಾರ್ಯಕ್ರಮವೊಂದನ್ನ ಹಮ್ಮಿಕೊಂಡಿದ್ದು,ಗೋವಾದಲ್ಲಿರುವ ಕನ್ನಡಿಗರಿಗೆ ಆರಂಭಿಕವಾಗಿ ಧಾರ್ಮಿಕ ಹಾಗೂ ಇತಿಹಾಸವನ್ನ ಹೊಂದಿರುವ ಸ್ಥಳಗಳಿಗೆ ಪ್ರವಾಸವನ್ನ ಕೈಗೊಳ್ಳುವ ಮೂಲಕ ಜಿಲ್ಲೆಯ ಧಾರ್ಮಿಕ ಕ್ಷೇತ್ರಗಳ ಪರಿಚಯ ಮಾಡಿಸುವ ಮೂಲಕ ಗೋವಾ ಕನ್ನಡಿಗರಲ್ಲಿ ಕನ್ನಡ ಕಂಪು ಹಚ್ಚಿಸುವ ಕಾರ್ಯಕ್ಕೆ ಈ ಸಂಘಟನೆ ಮುಂದಾಗಿರುವುದು ವಿಶೇಷ,

ಇದೆ ಮೊದಲ ಬಾರಿಗೆ ಗೋವಾದಲ್ಲಿರುವ ಬೊಚೋಲಿಯ ಕರ್ಮಭೂಮಿ ಕನ್ನಡ ಸಂಘಟನೆಯಿಂದ ಈ ವಿನೂತನ ಕಾರ್ಯಕ್ರಮ ಆರಂಭವಾಗಿದ್ದು,ಮುಂದಿನ ದಿನಗಳಲ್ಲಿ ಪ್ರತಿವರ್ಷ ರಾಜ್ಯದ ಪ್ರತಿಯೊದು ಜಿಲ್ಲೆಗಳಿಗೂ ಗೋವಾ ಕನ್ನಡಿಗರನ್ನ ಕರೆದುಕೊಂಡು ಹೋಗಿ ಇಂದಿನ ಯುವ ಜನಾಂಗಕ್ಕೆ ನಮ್ಮ ಕರ್ನಾಟಕದ ಕನ್ನಡದ ಪರಿಚಯ ಮಾಡಿಸುವ ಮಹತ್ವದ ಕೆಲಸಕ್ಕೆ ಈ ಸಂಘಟನೆ ಮುಂದಾಗಿದೆ,‌‌ ಈಗಾಗಲೇ ಗೋವಾದಲ್ಲಿ ನಾಲ್ಕು ಲಕ್ಷಕ್ಕೂ ಅಧಿಕ ಕನ್ನಡಿಗರು ನೆಲಸಿದ್ದಾರೆ,ಆರಂಭದ ದಿನಗಳಲ್ಲಿ ಇವರೆಲ್ಲಾ ಉದ್ಯೋಗವನ್ನ ಹುಡುಕಿಕೊಂಡು ಗೋವಾಕ್ಕೆ ಹೋಗಿದರು. ಹೀಗೆ ಹೋದವರು ಮತ್ತೆ ಕರ್ನಾಟಕದ ಕಡೆ ವಾಪಸಾಗದೆ ಅಲ್ಲೆ ನೆಲೆಯೂರಿದ್ದಾರೆ.

ಇಂದಿನ ಯುವ ಜನತೆ ತಾವು ಮೂಲ ಕನ್ನಡಿಗರು ಎನ್ನುವುದನ್ನೆ ಮರೆತು.ಗೋವಾ ಸಂಸ್ಕೃತಿಗೆ ಹೊಂದಿಕೊಳ್ಳುವ ಮೂಲಕ ಕನ್ನಡ ಮರೆತಿರುವುದು ನಿಜಕ್ಕೂ ಬೇಸರ ತರಿಸುವಂತಾಗಿದೆ. ಗೋವಾದಲ್ಲಿ ನೆಲೆಸಿರುವ ಕರ್ನಾಟಕದ ಜನರಲ್ಲಿ ಕನ್ನಡ ಭಾಷೆ, ಸಂಸ್ಕೃತಿಯನ್ನ ಜೀವಂತವಾಗಿಡಬೇಕು ಎನ್ನುವುದು ಕರ್ಮಭೂಮಿ ಕನ್ನಡ ಸಂಘಟನೆಯ ಮೂಲ ಉದ್ದೇಶವಾಗಿದೆ.
ಈಗಾಗಲೆ ಈ ಸಂಘಟನೆಗಳು ಇದುವರೆಗೆ ಕನ್ನಡ ಉಳುವಿಗಾಗಿ ಗೋವಾದಲ್ಲಿ ಅನೇಕ ಕಾರ್ಯಕ್ರಮಗಳು ನಡೆಸಿಕೊಂಡು ಬಂದಿದ್ದು, ಮುಂದಿನ ದಿನಗಳಲ್ಲಿ ಗೋವಾ ರಾಜ್ಯದಲ್ಲಿ ಕನ್ನಡವನ್ನ ಇನ್ನಷ್ಟು ಗಟ್ಟಿ ಮಾಡಬೇಕು ಎನ್ನುವ ಉದ್ದೇಶದಿಂದ.ಗೋವಾ ಕರ್ಮಭೂಮಿ ಕನ್ನಡ ಸಂಘಟನೆ ಕನ್ನಡದ ಉಳುವಿಗಾಗಿ ಮುಂದಾಗಿರುವುದು ಹೆಮ್ಮೆಯ ವಿಚಾರ.

ಗೋವಾದಲ್ಲಿ ಕೊಂಕಣಿ ಪ್ರಭಾವದ ನಡುವೆಯೂ ಕನ್ನಡದ ಕಂಪು ಹರಿಸಲು ಅಲ್ಲಿನ ಕರ್ಮಭೂಮಿ ಕನ್ನಡ ಪರ ಸಂಘಟನೆ ಮುಂದಾಗಿರುವುದು ನಿಜಕ್ಕೂ ಕನ್ನಡಿಗರಾದ ಪ್ರತಿಯೊಬ್ಬರು ಹೆಮ್ಮೆ ಪಡಲೇಬೆಕು. ಮುಂದಿನ ದಿನಗಳಲ್ಲಿ ಕರ್ಮಭೂಮಿ ಕನ್ನಡ ಪರ ಸಂಘಟನೆ ಮೂಲಕ ಗೋವಾದಲ್ಲಿ‌ ಕನ್ನಡ ಭಾಷೆ ಜೊತೆಗೆ ಕನ್ನಡಿಗರ ರಕ್ಷಣೆ ಸದಾ ಜೊತೆಯಾಗಿರಬೇಕಿದೆ.