ಸುದ್ದಿಬಿಂದು ಬ್ಯೂರೋ
ಕಾರವಾರ : ಸಾರ್ವಜನಿಕ ಸಮಸ್ಯೆಗೆ ಜಿಲ್ಲಾಮಟ್ಟದಲ್ಲೆ ಪರಿಹಾರ ನೀಡಬೇಕು ಎನ್ನುವ ಮಹತ್ವದ ಉದ್ದೇಶದಿಂದ ರಾಜ್ಯ ಸರಕಾರ ರೂಪಿಸಿರುವ ಜನತಾ ದರ್ಶನ ಡಿಸೆಂಬರ್ 1ರಂದು ಕಾರವಾರದಲ್ಲಿ ಜಿಲ್ಲಾ ಉಸ್ತುವರಿ ಸಚಿವ ಮಂಕಾಳು ವೈದ್ಯ ಅವರ ನೇತೃತ್ವದಲ್ಲಿ ನಡೆಯಲಿದೆ.
![](https://suddibindu.in/wp-content/uploads/2023/11/IMG-20231124-WA0015-7-1024x653.jpg)
ಇದು ಈ ಸರಕಾರದಲ್ಲಿ ನಡೆಯುತ್ತಿರುವ ಎರಡನೆ ಜನತಾ ದರ್ಶನವಾಗಿದೆ. ಈ ಜನತಾ ದರ್ಶನದಲ್ಲಿ ಶಾಸಕರು, ಜಿಲ್ಲಾಧಿಕಾರಿಗಳು, ತಾಲೂಕಾ ಮಟ್ಟದ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.ಈ ಜನತಾ ದರ್ಶನದಲ್ಲಿ ಜಿಲ್ಲೆ ಜನರು ಪಾಲ್ಗೊಂಡು ತಮ್ಮ ಸಮಸ್ಯೆಗಳನ್ನ ಅಧಿಕಾರಿಗಳ ಎದುರು ಹೇಳಿಕೊಳ್ಳುವ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ.