ಸುದ್ದಿಬಿಂದು ಬ್ಯೂರೋ
ಕಾರವಾರ : ಭ್ರಷ್ಟಾಚಾರವನ್ನ ಹುಟ್ಟುಹಾಕಿದವರೆ ಮಾಧವ ನಾಯ್ಕ ಅವರನ್ನ ಹಿಡಿದರೆ ಎಲ್ಲಾ ಭ್ರಷ್ಟಾಚಾರಗಳು ಒಂದೊಂದಾಗಿ ಹೊರಬರುತ್ತವೆ ಎಂದು ಕಾರವಾರ ಕ್ಷೇತ್ರದ ಬಿಜೆಪಿಯ ಮಾಜಿ ಶಾಸಕಿಯಾಗಿರುವ ರೂಪಾಲಿ ನಾಯ್ಕ ಮಾಧವ ನಾಯ್ಕ ಅವರ ವಿರುದ್ದ ಗಂಭೀರ ಆರೋಪ ಮಾಡಿದ್ದಾರೆ.
ಕಾರವಾರದ ಪತ್ರಿಕಾ ಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರೂಪಾಲಿ ನಾಯ್ಕ, ಬಿಜೆಪಿಯಲ್ಲಿ ಭೃಷ್ಟಾಚಾರ ನಡೆದಿದೆ ಎಂದು ಆಗ ಮಾತನಾಡುತ್ತಿದ್ದ ಮಾಧವ ನಾಯ್ಕ ಈಗ ಕಾಂಗ್ರೆಸ್ ಸರಕಾರದಲ್ಲಿ ಭೃಷ್ಟಾಚಾರ ತುಂಬಿಕೊಂಡಿದ್ದರು ಯಾಕೆ ಮಾತನಾಡುತ್ತಿಲ್ಲ.ಕಾಂಗ್ರೆಸ್ ಗೆಲ್ಲಿಸಬೇಕು ಎನ್ನುವ ಉದ್ದೇಶಕ್ಕೆ ಮಾತ್ರ ಅಂದು ನಮ್ಮ ವಿರುದ್ಧ ಮಾತನಾಡಿದ್ದು ಅಷ್ಟೆ.
ಇವತ್ತಿಗೂ ನನ್ನಗೆ ಕಿರುಕುಳ ನೀಡುತ್ತಾ ಬಂದಿದ್ದಾರೆ.ಒಂದು ನಾಯಿ ಬಿದ್ದರೂ ಎತ್ತಿಕೊಂಡು ಹೋಗಿ ಸಮಾಜ ಸೇವೆ ಮಾಡುವ ಮಾಧವ ನಾಯ್ಕ ಈಗಿನ ಶಾಸಕರು ಅಧಿಕಾರಿಗಳಿಗೆ ಹೆರಾಸ್ಮೆಂಟ್ ಮಾಡಬೇಕಾದರೇ ಎಲ್ಲಿ ಹೋಗಿದ್ದರು? ಈಗ ಇಲಿ ಬಿಲ ಸೇರಿಕೊಂಡಿತೇ ? ಮಾಧವ ನಾಯ್ಕರದ್ದು ಮರಳು ಮಾಫಿಯಾ ನಡಸುತ್ತಿದ್ದಾರೆ. ಅಧಿಕಾರಿಗಳಿಗೆ ಹೇಳಿದರೇ ರೈಡ್ ಮಾಡಿದ ಹಾಗೆ ಮಾಡಿ, ಕಾಂಗ್ರೆಸ್ ಏಜಂಟರಿಗೆ ಮರಳನ್ನು ಕೊಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ 80 % ಭ್ರಷ್ಟಾಚಾರ ಮಾಡುತ್ತಿದೆ ಎಂದು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ್ ನಾಯ್ಕ ,ವಕೀಲರು ,ಬಿಜೆಪಿ ಮಾಧ್ಯಮ ವಕ್ತಾರ ನಾಗರಾಜ್ ನಾಯ್ಕ ಮುಂತಾದವರು ಉಪಸ್ತಿತರಿದ್ದರು.