ಸುದ್ದಿಬಿಂದು ಬ್ಯೂರೋ
ಕುಮಟ : ಕಳೆದ ಅನೇಕ ವರ್ಷಗಳಿಂದ ರಾಜಕಾರಣದಲ್ಲಿ ಗುರುತಿಸಿಕೊಂಡು ನಿರಂತರವಾಗಿ ತಾಲೂಕ ಪಂಚಾಯತ ಸದಸ್ಯರಾಗಿ ಆಯ್ಕೆಯಾಗುತ್ತಾ ಬಂದಿರುವ ಜೆಡಿಎಸ್ ಮುಖಂಡರಾಗಿದ್ದ ಈಶ್ವರ ನಾಯ್ಕ ಇಂದು ತಮ್ಮ ಬೆಂಬಲಿಗರೊಂದಿಗೆ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆ‌ಗೊಂಡಿದ್ದಾರೆ.

ಕಾಂಗ್ರೆಸ್ ಮುಖಂಡ ನಿವೇದಿತ ಆಳ್ವ ಅವರ ನಿವಾಸದಲ್ಲಿ ಇಂದು ಕಾಂಗ್ರೆಸ ಜಿಲ್ಲಾಧ್ಯಕ್ಷ ಸಾಯಿ ಗಾಂವ್ಕರ್, ಕುಮಟ ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಹೊನ್ನಪ್ಪ ನಾಯಕ, ಭುವನ ಭಾಗ್ವತ ನಾಗರಾಜ ಹಿತ್ತಲಮಕ್ಕಿ ಇವರ ಸಮ್ಮುಖದಲ್ಲಿ ನಿವೇದಿತ ಆಳ್ವ ಕಾಂಗ್ರೆಸ್ ಬಾವುಟ ನೀಡುವ ಮೂಲಕ ಎಲ್ಲರನ್ನು ಪಕ್ಕಕ್ಕೆ ಬರಮಾಡಿಕೊಂಡರು.

ಕೋಡ್ಕಣಿ ಗ್ರಾಮ ಪಂಚಾಯತದ ಹಾಲಿ ಉಪಾಧ್ಯಕ್ಷರಾಗಿರುವ ಮುರ್ಕುಂಡಿ ನಾಯ್ಕ, ಖಾಸಿಂ ದಾವೂದ್ ಬೆಳಿಯ, ಮಿರ್ಜಾನ ಗ್ರಾ.ಪಂ ಮಾಜಿ ಉಪಾಧ್ಯಕ್ಷ ನಾರಾಯಣ ನಾಯ್ಕ ಗೌರಸಗಿ,ಸದಾನಂದ ಜಾಲಿಸ್ತಗಿ, ಮುಸ್ಸಾ ಎ ಮೊಘಲ್, ಬರ್ಗಿ ಗ್ರಾ.ಪಂ ಹಾಗೂ ಸೇವಾ ಸರಕಾರಿ ಸಂಘದ‌ ಹಾಲಿ ಸದಸ್ಯ ರವಿಕುಮಾರ ಪಿ ನಾಯ್ಕ ಬರ್ಗಿ, ಅದಮ್ ಅಹಮದ್ ಬೇಡಿಯ, ಸುಧಾಕರ ಎನ್ ನಾಯ್ಕ, ನಾಗಪ್ಪ ಟಿ. ನಾಯ್ಕ, ನವೀನ ನಾಯ್ಕ,

ಆನಂದು ನಾಯ್ಕ ಮಾಜಿ ಗ್ರಾಮ ಪಂಚಾಯತ್ ಸದಸ್ಯರು ತಿಮ್ಮಯ್ಯ ಪಟಗಾರ, ತಿಮ್ಮಯ್ಯ ಪಟಗಾರ, ರೋಹಿದಾಸ್ ದೇಶಭಂಡಾರಿ, ವಿನಾಯಕ ಎಚ್ ನಾಯ್ಕ, ಬರ್ಗಿ ಗ್ರಾ.ಪಂ ಮಾಜಿ ಸದಸ್ಯ ಅಬ್ದುಲ್ ರೆಹಮಾನ್, ವಿನಾಯಕ ಮಡಿವಾಳ, ಚಂದ್ರಕಾಂತ ಭಂಡಾರಿ, ವಿಘ್ನೇಶ ಗುನಗ, ನಾಗರಾಜ ಹಳ್ಳೆರ್, ರಾಜು ಆಯ್ ಪಟಗಾರ, ಬರ್ಗಿ ಸೇವಾ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಹಾಗೂ ಗುತ್ತಿಗೆದಾರ ತುಕರಾಮ‌ ನಾಯ್ಕ ಬೆಟ್ಕುಳಿ, ಅನೇಕರು ಈಶ್ವರ ನಾಯ್ಕ ಅವರ ನೇತೃತ್ವದಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಗೊಂಡರು.

.