ಸುದ್ದಿಬಿಂದು ಬ್ಯೂರೋ ವರದಿ
ಬೆಂಗಳೂರು: ರಾಜ್ಯ ವಿಧಾನಸಭೆಯ ಉಪಸಭಾಧ್ಯಕ್ಷರ ಸ್ಥಾನಕ್ಕೆ ಭಟ್ಕಳ-ಹೊನ್ನಾವರ ಕ್ಷೇತ್ರದ ಶಾಸಕ ಮಂಕಾಳ ವೈದ್ಯ ಅವರ ಹೆಸರನ್ನು ಸೂಚಿಸಿ ಸಭಾನಾಯಕರೂ ಆಗಿರುವ ಸಿಎಂ ಡಿ.ಕೆ. ಶಿವಕುಮಾರ್ ಅವರು ಸೋಮವಾರ ವಿಧಾನಸಭೆ ಕಾರ್ಯದರ್ಶಿಗೆ ಪ್ರಸ್ತಾವನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಚಿವರಾದ ಲಕ್ಷ್ಮಣ ಸವದಿ, ಬಾಲಕೃಷ್ಣ ಹಾಗೂ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಉಪಸಭಾಧ್ಯಕ್ಷರ ಸ್ಥಾನಕ್ಕೆ ಮಂಕಾಳ ವೈದ್ಯ ಅವರ ಹೆಸರನ್ನು ಸೂಚಿಸಿ ಪ್ರಸ್ತಾವನೆ ಸಲ್ಲಿಸಿರುವುದು ರಾಜಕೀಯ ವಲಯದಲ್ಲಿ ಗಮನ ಸೆಳೆದಿದೆ. ಮಂಕಾಳ ವೈದ್ಯ ಅವರು ಸಿದ್ದರಾಮಯ್ಯ ಅವರ ಸಚಿವ ಸಂಪುಟದಲ್ಲಿ ಮೀನುಗಾರಿಕಾ ಸಚಿವರಾಗಿ ರಾಜ್ಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದರು.
ಎರಡನೇ ಭಾರೀ ಕೂಡ ಡಿಕೆ ಶಿವಕುಮಾರ ಸಚಿವ ಸಂಪುಟದಲ್ಲಿ ಕೂಡ ಮಂಕಾಳ್ ವೈದ್ಯ ಅವರ ಹೆಸರು ಸೇರ್ಪಡೆಯಾಗಿ ಕೊನೆ ಕ್ಷಣದಲ್ಲಿ ಅವರ ಹೆಸರನ್ನ ಕೈ ಬಿಡಲಾಗಿತ್ತು…ಇದರಿಂದಾಗಿ ಮೀನುಗಾರಿಕಾ ಸಮುದಾಯದಿಂದ ಏಕೈಕ ಶಾಸಕರಾಗಿದ್ದ ವೈದ್ಯ ಅವರನ್ನ ಸಚಿವ ಸ್ಥಾನದಿಂದ ಕೈ ಬಿಟ್ಟಿರುವುದು ಕರಾವಳಿ ಸೇರಿದಂತೆ ರಾಜ್ಯದ ಮೀನುಗಾರ ಸಮುದಾಯದ ಅಸಮಧಾನಕ್ಕೆ ಕಾರಣವಾಗಿತ್ತು..ಇದನ್ನ ಮನಗಂಡ ಸಿಎಂ ಡಿಕೆ ಶಿವಕುಮಾರ ಅವರು ಇದೀಗ ಮಂಕಾಳ್ ವೈದ್ಯ ಅವರನ್ನ ಉಪಾಸಭಾಪತಿ ಮಾಡುವ ಮೂಲಕ ಮೀನುಗಾರ ಸಮುದಾಯವನ್ನವನ್ನ ಸಮಾಧಾನ ಮಾಡಿದಂತಾಗಿದೆ.

