ಸುದ್ದಿಬಿಂದು ಬ್ಯೂರೋ ವರದಿ

ಅಂಕೋಲಾ : ತಾಲೂಕಿನ ಮಾರುಗದ್ದೆ ಗ್ರಾಮದಲ್ಲಿ ಗಣಪ ರಾಮಗೌಡ ಅವರ ಮನೆಯ ಸಮೀಪ ಸುಮಾರು 12ಅಡಿ ಉದ್ದದ ಕಾಳಿಂಗ ಸರ್ಪ (King Cobra) ಕಾಣಿಸಿಕೊಂಡು ಮನೆಯವರಲ್ಲಿ ಆತಂಕ ಸೃಷ್ಟಿಸಿತು.

ತಕ್ಷಣ ಮನೆಯವರು ಉರಗ ರಕ್ಷಕ ಮಹೇಶ್ ನಾಯಕ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದರು.ಮಾಹಿತಿ ಪಡೆದ ಮಹೇಶ್ ನಾಯ್ಕ ಹಾಗೂ ಅವರ ಪುತ್ರ ಗಗನ್ ನಾಯ್ಕ ಸ್ಥಳಕ್ಕೆ ಆಗಮಿಸಿ,ಕಟ್ಟಿಗೆ ರಾಶಿಯೊಳಗೆ ಆಶ್ರಯ ಪಡೆದಿದ್ದ ಕಾಳಿಂಗ ಸರ್ಪವನ್ನು ಅತ್ಯಂತ ಜಾಗರೂಕತೆಯಿಂದ ಸುರಕ್ಷಿತವಾಗಿ ಸೆರೆಹಿಡಿದರು.

ಬಳಿಕ ಅರಣ್ಯ ಇಲಾಖೆಯ ಸಹಕಾರದೊಂದಿಗೆ ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ರಕ್ಷಿಸಿ ಅರಣ್ಯಕ್ಕೆ ಬಿಡಲಾಗಿದೆ. ಈ ರಕ್ಷಣಾ ಕಾರ್ಯಾಚರಣೆಯಲ್ಲಿ ಹರಿಶ್ಚಂದ್ರ ನಾಯ್ಕ, ಅಭಿಷೇಕ್ ಶೆಟ್ಟಿ, ತುಳಸಿದಾಸ್ ನಾಯಕ್ ಹಾಗೂ ಮನೆಯವರು ಸಹಕರಿಸಿದರು.

ಇದನ್ನೂ ಓದಿ/ kims-karwar /ಕಾರವಾರ ಕ್ರಿಮ್ಸ್‌ನಲ್ಲಿ 200 ಎಂಬಿಬಿಎಸ್ ಸೀಟುಗಳಿಗೆ ಅನುಮತಿ