ಸುದ್ದಿಬಿಂದು ಬ್ಯೂರೋ ವರದಿ
ಶಿರಸಿ: ಮದುವೆ ನಿಶ್ಚಯವಾಗಿದ್ದ ದಿನವೇ ಯುವತಿ ಪ್ರಿಯತಮನೊಂದಿಗೆ ಪರಾರಿಯಾಗಿರುವ ಘಟನೆ ಶಿರಸಿ ನಗರದಲ್ಲಿ ಭಾರಿ ಸಂಚಲನ ಮೂಡಿಸಿದೆ.

ಶಿರಸಿ ನಗರದ ಮುಸ್ಲಿಂ ಗಲ್ಲಿಯಲ್ಲಿ ವಾಸವಾಗಿದ್ದ ಯುವತಿ, ಬೆಂಗಳೂರಿನ ಪ್ರತಿಷ್ಠಿತ ಕಂಪನಿಯಲ್ಲಿ ಉದ್ಯೋಗದಲ್ಲಿದ್ದಾಳೆ ಎಂದು ತಿಳಿದು ಬಂದಿದೆ. ಇದೇ ಯುವತಿಯ ವಿವಾಹ ಇಂದು ನಡೆಯಬೇಕಾಗಿದ್ದು, ವರನ ಕಡೆಯವರು ಶಿರಸಿ ಹುಸರಿ ರಸ್ತೆಯಲ್ಲಿರುವ ಎವರಗ್ರೀನ್ ಗಾರ್ಡನ್‌ನಲ್ಲಿ ಮದುವೆ ಕಾರ್ಯಕ್ಕಾಗಿ ಸಿದ್ಧತೆ ಮಾಡಿಕೊಂಡು ಮದುಮಗಳಿಗಾಗಿ ಕಾಯುತ್ತಿದ್ದರು.

ಮದುವೆಯಾಗಬೇಕಾಗಿದ್ದ ವರ ವಿದೇಶದಲ್ಲಿ ಉದ್ಯೋಗದಲ್ಲಿದ್ದಾನೆ ಎಂದು ಹೇಳಲಾಗಿದೆ. ಯುವತಿಯ ಮದುವೆ ಅರೆಕೊಪ್ಪದ ಅಬ್ರಾರ್ ಎನ್ನುವವನ ಜತೆ ವಿವಾಹ ನಿಶ್ಚಯವಾಗಿತ್ತು. ಆದರೆ ಮದುವೆ ಸಮಯಕ್ಕೆ ಯುವತಿ ಕಾಣೆಯಾಗಿದ್ದು, ನಂತರ ಆಕೆ ತನ್ನ ಪ್ರಿಯತಮನಾದ ಶಿರಸಿ ಕೆಎಚ್‌ಬಿ ನಿವಾಸಿ ಖಲೀಲ್ ಎಂಬಾತನ ಪುತ್ರನೊಂದಿಗೆ ಪರಾರಿಯಾಗಿರುವುದು ಬೆಳಕಿಗೆ ಬಂದಿದೆ.

ಈ ಘಟನೆ ತಿಳಿದು ಮದುಮಗಳ ಕಡೆಯವರು ಆತಂಕಕ್ಕೀಡಾಗಿದ್ದು, ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ. ಇನ್ನೊಂದೆಡೆ ವರನಕಡೆಯವರು ಮದುವೆಗಾಗಿ ಮಾಡಿದ ಖರ್ಚನ್ನು ವಸೂಲಿ ಮಾಡುವ ಬಗ್ಗೆ ಗಡಿಬಿಡಿ ನಡೆಸುತ್ತಿರುವುದಾಗಿ ತಿಳಿದು ಬಂದಿದೆ.

ಈ ಸಂಬಂಧ ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ/ತುಂಬಿದ ಸಭೆಯಲ್ಲಿ ‌ಗದರಿಸುವುದು ಹೋರಾಟಗಾರನ ಧ್ವನಿ ಅಡಗಿಸುವ ತಂತ್ರವೇ?