ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ: ಹುಬ್ಬಳ್ಳಿಯ ರಾಯಲ್ ರೀಟಿಜ್ ಹೋಟೆಲ್ನಲ್ಲಿ ಇದೇ ಏ. 26ರಂದು ಅಹಿಂದ ಕರ್ನಾಟಕದ ರಾಜ್ಯ ಮಟ್ಟದ ವಿಚಾರ ಸಂಕಿರಣ ನಡೆಯಲಿದ್ದು, ಜಿಲ್ಲೆಯ ಅಹಿಂದ ಸಮುದಾಯಗಳ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಸಾಮಾಜಿಕ ಹೋರಾಟಗಾರ ಆರ್ ಜಿ ನಾಯ್ಕ ಮತ್ತು ಕಾಂಗ್ರೆಸ್ ಮುಖಂಡ ಮಂಜುನಾಥ ಎಲ್ ನಾಯ್ಕ ಕರೆ ನೀಡಿದ್ದಾರೆ.
ಕುಮಟಾದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಾಮಾಜಿಕ ಹೋರಾಟಗಾರ ಹಾಗೂ ನ್ಯಾಯವಾದಿ ಆರ್ ಜಿ ನಾಯ್ಕ ಅವರು, ಕಳೆದ ಮೂರುನಾಲ್ಕು ದಶಕಗಳಿಂದ ಶೋಷಿತ, ಹಿಂದುಳಿದ ವರ್ಗಗಳ ಧ್ವನಿಯಾಗಿ ಅಹಿಂದ ಸಂಘಟನೆ ರಾಜ್ಯವಾಪಿ ಕಾರ್ಯಾಚರಿಸುತ್ತ ಬಂದಿದೆ. ಕಳೆದ 25ವರ್ಷಗಳಿಂದ ಅಹಿಂದ ಸಂಘಟನೆಯ ಹೋರಾಟ, ಚಿಂತನೆ ಮತ್ತು ಹೊಸ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಸುದುದ್ದೇಶದೊಂದಿಗೆ ರಾಜ್ಯ ಮಟ್ಟದ ವಿಚಾರ ಸಂಕಿರಣ ಹುಬ್ಬಳ್ಳಿಯ ವಿಮಾನ ನಿಲ್ದಾಣದ ರಸ್ತೆಯಲ್ಲಿರುವ ರಾಯಲ್ ರೀಟಿಜ್ ಹೋಟೆಲ್ನಲ್ಲಿ ಏ. 26ರ ಬೆಳಗ್ಗೆ 10 ಗಂಟೆಗೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಅಹಿಂದ ಸಮುದಾಯಗಳ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಅವರು ಮನವಿ ಮಾಡಿದರು.
ಕಾಂಗ್ರೆಸ್ ಮುಖಂಡ ಮಂಜುನಾಥ ಎಲ್ ನಾಯ್ಕ ಮಾತನಾಡಿ, ಹುಬ್ಬಳ್ಳಿ ಕಾರ್ಯಕ್ರಮದಲ್ಲಿ ಪಿಡಬ್ಲುಡಿ ಸಚಿವ ಸತೀಶ್ ಜಾರಕಿಹೊಳಿ, ಕಾರ್ಮಿಕ ಸಚಿವ ಸಂತೋಷ ಲಾಡ್, ಇತರೆ ಪ್ರಭಾವಿ ಮುಖಂಡರು ಪಾಲ್ಗೊಂಡು ಸೂಕ್ತ ಮಾರ್ಗದರ್ಶನ ನೀಡಲಿದ್ದಾರೆ. ಹುಬ್ಬಳ್ಳಿಯಲ್ಲಿ ರಾಜ್ಯ ಮಟ್ಟದ ವಿಚಾರ ಸಂಕಿರಣ ನಡೆದ ಬಳಿಕ ಮೈಸೂರು, ಸೇರಿದಂತೆ ಬೇರೆ ಬೇರೆ ಭಾಗಗಳಲ್ಲಿ ನಡೆಯುವ ಜೊತೆಗೆ ನಮ್ಮ ಉತ್ತರಕನ್ನಡದಲ್ಲೂ ಜಿಲ್ಲಾ ಮಟ್ಟದ ಕಾರ್ಯಗಾರ ನಡೆಸುವ ಚಿಂತನೆ ಕೂಡ ನಡೆದಿದೆ ಎಂದು ತಿಳಿಸಿದ ಮಂಜುನಾಥ ಎಲ್ ನಾಯ್ಕರು ಹುಬ್ಬಳ್ಳಿಯ ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲ ಅಹಿಂದ ಮುಖಂಡರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ವಿನಂತಿಸಿದರು.
ಸುದ್ದಿಗೋಷ್ಠಿಯಲ್ಲಿ ವಕೀಲ ಜಯಂತ ನಾಯ್ಕ, ಉದ್ಯಮಿ ಹರೀಶ್ ಶೇಟ್, ಮೀನುಗಾರ ಮುಖಂಡ ಶಿವರಾಮ ಹರಿಕಂತ್ರ, ಗಜು ನಾಯ್ಕ, ಮುಜಾಫರ್ ಶೇಖ್, ಸುಕ್ರು ಸಾಬ್, ಗೌರೀಶ ದುರ್ಗೇಕರ್, ಗಜು ಹಳ್ಳೇರ್ ಮೊರ್ಬಾ, ನವೀನ ನಾಯ್ಕ ಕೋಡ್ಕಣಿ, ಕಲೀಲ್ ಮಿರ್ಜಾನ್, ಶ್ರೀಧರ ಹರಿಕಂತ್ರ ಕಿಮಾನಿ ಇತರರು ಇದ್ದರು ಹಾಜರಿದ್ದರು.
ಇದನ್ನೂ ಓದಿ/ಶಿರಸಿಯಲ್ಲಿ ಮದುವೆ ದಿನವೇ ವರನ ಬಿಟ್ಟು ವೈದ್ಯನೊಂದಿಗೆ ಯುವತಿ ಪರಾರಿ…!



