ಸುದ್ದಿಬಿಂದು ಬ್ಯೂರೋ ವರದಿ
ಯಲ್ಲಾಪುರ: ತಾಲೂಕಿನ ಅರಬೈಲ್ ಘಟ್ಟದ ಗಣಪತಿ ಕಟ್ಟೆ, ಗುಳ್ಳಾಪುರ ಹಾಗೂ ಕೊಡ್ಲಗದ್ದೆ ಕೇರಳ ಢಾಬಾ ಸುತ್ತಮುತ್ತ ಸೇರಿದಂತೆ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ವಾಹನಗಳನ್ನು ಸಾಲು ಸಾಲಾಗಿ ನಿಲ್ಲಿಸಲಾಗುತ್ತಿದ್ದು, ಪರಿಣಾಮ ಅಪಘಾತಕ್ಕೆ ಕಾರಣವಾಗುತ್ತಿದ್ದು, ಇದನ್ನು ತಡೆಗಟ್ಟುವ ಕಾರ್ಯವಾಗಬೇಕು ಎಂದು ಯಲ್ಲಾಪುರ ಯುವ ಕಾಂಗ್ರೆಸ್ ಮುಖಂಡ ಮಹೇಶ್ ನಾಯ್ಕ್ ಆಗ್ರಹಿಸಿದ್ದಾರೆ.

Highway Safety Tips | Road Accident Prevention | Traffic Rules India | Safe Driving Awareness | Highway Parking Rules

ಹೆದ್ದಾರಿ ಪಕ್ಕದಲ್ಲಿ ಕಿಲೋಮೀಟರ್ ದೂರದವರೆಗೆ ವಾಹನಗಳನ್ನು ನಿಲ್ಲಿಸುತ್ತಿರುವುದರಿಂದ ಉಳಿದ ವಾಹನಗಳ ಸಂಚಾರಕ್ಕೆ ತೀವ್ರ ಸಮಸ್ಯೆ ಉಂಟಾಗುತ್ತಿದೆ. ಜೊತೆಗೆ ಅಪಘಾತಗಳಿಗೂ ಕಾರಣವಾಗುತ್ತಿದೆ. ಇದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ವೇಗವಾಗಿ ಸಂಚರಿಸುವ ವಾಹನಗಳು ಅಕಸ್ಮಾತ್ ನಿಂತಿರುವ ವಾಹನಗಳನ್ನು ತಪ್ಪಿಸಲು ಪ್ರಯತ್ನಿಸುವಾಗ ಅಪಘಾತ ಉಂಟಾದ ಉದಾಹರಣೆಗಳು ಸಾಕಷ್ಟಿವೆ. ಹಲವೆಡೆ ಟ್ರಾಫಿಕ್ ಜಾಮ್ ಉಂಟಾಗಿ ಬಸ್, ಲಾರಿ ಹಾಗೂ ಖಾಸಗಿ ವಾಹನಗಳು ಸಾಲಾಗಿ ನಿಂತುಕೊಳ್ಳುತ್ತಿರುವುದು ಸಾಮಾನ್ಯವಾಗಿದೆ. ತುರ್ತು ಸೇವೆಗಳಾದ ಆಂಬುಲೆನ್ಸ್ ಸಂಚಾರಕ್ಕೂ ತೊಂದರೆ ಉಂಟಾಗಿ ಜೀವ ರಕ್ಷಣೆಯಲ್ಲೂ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ.

Traffic Jam Issues | Emergency Vehicle Delay | Road Safety India | Accident Risk Factors | Highway Congestion

ಇದನ್ನೂ ಓದಿ: “ಗ್ಯಾಸ್ ಸಿಲಿಂಡರ್‌ಗೆ ಗುಡ್‌ಬೈ.? ಗ್ಯಾಸ್ ಇಲ್ಲ, ಎಣ್ಣೆ ಇಲ್ಲ! ಕೇವಲ ನೀರಿನಿಂದ ಅಡುಗೆ.”

Alternative Energy India | Hydrogen Cooking Stove | Future Kitchen Technology | Clean Energy Solutions | Cooking Innovation
ಹೆದ್ದಾರಿಯಲ್ಲಿ ನಡೆದು ಹೋಗುವ ಪಾದಚಾರಿಗಳು ಹಾಗೂ ರಸ್ತೆ ದಾಟುವವರ ಜೀವಕ್ಕೂ ಅಪಾಯ ಎದುರಾಗುತ್ತಿದೆ. ಸ್ವಲ್ಪ ನಿರ್ಲಕ್ಷ್ಯವೇ ಸರಣಿ ಅಪಘಾತಗಳಿಗೆ ಕಾರಣವಾಗುತ್ತಿದೆ. ಹೆದ್ದಾರಿ ಸಂಚಾರ ನಿಯಂತ್ರಣದ ಹೊಣೆ ಹೊತ್ತಿರುವ ಹೈವೇ ಪೆಟ್ರೋಲ್ ಗಸ್ತು ವಾಹನಗಳು ಹೆದ್ದಾರಿ ಪಕ್ಕದಲ್ಲಿ ಸಾಲುಗಟ್ಟಿ ನಿಲ್ಲುವ ವಾಹನಗಳ ತೆರವು ಮಾಡುವ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎನ್ನಲಾಗಿದೆ.

Pedestrian Safety | Highway Patrol India | Traffic Enforcement | Road Safety Awareness | Accident Prevention Measures

ಪ್ರತಿದಿನ ಉಂಟಾಗುತ್ತಿರುವ ಟ್ರಾಫಿಕ್ ಸಮಸ್ಯೆಗಳನ್ನು ನಿಯಂತ್ರಿಸಲು ಗಸ್ತು ವಾಹನಗಳು ತಕ್ಷಣ ಕ್ರಮಕ್ಕೆ ಮುಂದಾಗಬೇಕು. ಹೆದ್ದಾರಿ ಪಕ್ಕದಲ್ಲಿ ನಿಲ್ಲಿಸುವ ವಾಹನಗಳನ್ನು ತೆರವುಗೊಳಿಸಿ, ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ.

Traffic Law Enforcement | Road Discipline India | Highway Rules Violation | Traffic Control Measures | Public Safety India

ಇದೇ ವೇಳೆ, ಅರಬೈಲ್ ಘಟ್ಟದ ಗುಡ್ಡಕುಸಿತ ವಲಯವಾಗಿ ಗುರುತಿಸಲ್ಪಟ್ಟ ಯು-ಟರ್ನ್ ಪ್ರದೇಶ ಈಗ ಸೆಲ್ಫಿ ತಾಣವಾಗಿ ಮಾರ್ಪಟ್ಟಿದ್ದು, ವಾಹನಗಳನ್ನು ರಸ್ತೆಯ ಮಧ್ಯದಲ್ಲೇ ನಿಲ್ಲಿಸಿ ಫೋಟೋ ತೆಗೆಯುವ ಪ್ರವೃತ್ತಿ ಹೆಚ್ಚುತ್ತಿದೆ. ಇದು ಯಾವುದೇ ಕ್ಷಣದಲ್ಲಿ ದೊಡ್ಡ ದುರಂತಕ್ಕೆ ಕಾರಣವಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಸಂಬಂಧಿಸಿದ ಇಲಾಖೆಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ.

Dangerous Selfie Spots | Roadside Selfie Risk | Landslide Zone Safety | Travel Safety Tips | Risky Behavior Awareness

ಇನ್ನೂ ಹೆದ್ದಾರಿ ಪಕ್ಕದಲ್ಲಿ ಅಪಾಯದ ಸೂಚನೆ, ವಾಹನ ನಿಲುಗಡೆ ನಿಷೇಧ, ಅಪಾಯ ಸ್ಥಳದಲ್ಲಿ ಸೆಲ್ಫಿ ಫೋಟೋ ನಿಷೇಧ ಎನ್ನುವ ಬಗ್ಗೆ ಸ್ಪಷ್ಟವಾಗಿ ಕಾಣುವಂತೆ ನಾಮಫಲಕಗಳನ್ನು ಅಳವಡಿಸುವುದರ ಜೊತೆಗೆ ಗಸ್ತು ವಾಹನಗಳ ಸಂಖ್ಯೆ ಹೆಚ್ಚಿಸುವುದು ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಿದೆ.

Safety Sign Boards | No Parking Zone | Public Awareness Campaign | Highway Safety Measures | Traffic Sign Importance

ಇನ್ನೂ, ಹೆದ್ದಾರಿ ಬದಿಯ ಧಾಬಾ ಮತ್ತು ಅಂಗಡಿ ಮಾಲೀಕರಿಗೂ ವಾಹನ ನಿಲುಗಡೆ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಬೇಕಾಗಿದೆ. ಹೆದ್ದಾರಿ ಸುರಕ್ಷತೆ ಸಾರ್ವಜನಿಕರ ಹಕ್ಕು ಹಾಗೂ ಆಡಳಿತದ ಜವಾಬ್ದಾರಿ ಎಂಬುದನ್ನು ಮನಗಂಡು ಹೈವೇ ಪೊಲೀಸ್, ಆರ್‌ಟಿಒ, ಸಾರ್ವಜನಿಕ ಕಾಮಗಾರಿಗಳ ಇಲಾಖೆ ಮತ್ತು ಜಿಲ್ಲಾಡಳಿತ ತಕ್ಷಣ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕೆಂದು ಮಹೇಶ್ ನಾಯ್ಕ್ ಒತ್ತಾಯಿಸಿದ್ದಾರೆ.

Public Safety Responsibility | Government Action India | RTO Rules | Highway Police India | Road Safety Enforcement