ಸುದ್ದಿಬಿಂದು ಬ್ಯೂರೋ ವರದಿ
ಯಲ್ಲಾಪುರ: ಲಾರಿ ಹಾಗೂ ಖಾಸಗಿ ಬಸ್ ನಡುವೆ ಡಿಕ್ಕಿಯಾಗಿ ಬಸ್ ಹೆದ್ದಾರಿಯಲ್ಲಿ ಪಲ್ಟಿಯಾಗಿ ಬಸ್ನಲ್ಲಿದ್ದ ,25ಕ್ಕೂ ಅಧಿಕ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಅರಬೈಲ್ ಘಟ್ಟದಲ್ಲಿ ನಡೆದಿದೆ.
ಖಾಸಗಿ ಬಸ್ ಬೆಂಗಳೂರಿನಿಂದ ಗೋವಾಕ್ಕೆ ತೆರಳುತ್ತಿದ್ದು, ಈ ವೇಳೆ ಎರಡು ವಾಹನಗಳ ನಡುವೆ ಅಪಘತ ಉಂಟಾಗಿದೆ. ಅಪಘಾತದ ರಸಕ್ಕೆ ಬಸ್ ಹೆದ್ದಾರಿಯಲ್ಲಿ ಪಲ್ಟಿಯಾದರೆ ಲಾರಿ ಪ್ರಪಾತದ ಕಡೆ ಮುಖಮಾಡಿದೆ. ಲಾರಿಯ ಹಿಂಬದಿಯ ಭಾಗ ಮಾತ್ರ ಹೆದ್ದಾರಿಯ ಮೇಲೆ ನಿಂತಿದೆ. ಸ್ವಲ್ಪ ಏನಾದ್ರೂ ಮುಂದೆ ಜಾರಿದ್ದರ ಲಾರಿ ನೂರಾರು ಅಡಿ ಆಡಳತ ಪ್ರಪಾತಕ್ಕೆ ಬಿಳುವ ಸಾಧ್ಯತೆ ಇತ್ತು. ಅದೃಷ್ಠವಶಾತ್ ಪಾರಾಗಿದೆ.
ಅಪಘಾತದಿಂದಾಗಿ ಬಸ್ ಚಾಲಕನಿಗೆ ಸಣ್ಣಪುಟ್ಟ ಗಾಯವಾಗಿದೆ. ಅಪಘಾತವಾದ ಸ್ಥಳಕ್ಕೆ ಯಲ್ಲಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ : ಭಾರೀ ಮಳೆ ಹಿನ್ನಲೆ ನಾಲ್ಕು ತಾಲೂಕಿನ ಅಂಗನವಾಡಿ,ಶಾಲೆಗಳಿಗೆ ರಜೆ