ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ : ತಾಲೂಕಿನ ಬರ್ಗಿಯಲ್ಲಿ ಕಳೆದ ಎರಡು ದಿನಗಳಿಂದ ವಿದ್ಯುತ್ ಕೈಕೊಟ್ಟಿದ್ದು, ಸಂಬಂಧಿಸಿದ ಅಧಿಕಾರಿಳಿಗೆ ಕರೆ ಮಾಡಿದ್ದರೆ ಸಮರ್ಪಕವಾಗಿ ಉತ್ತರಿಸಲಾಗದೆ ಸರಕಾರಿ ಸೀಮ್ ಸ್ವೀಚ್ ಮಾಡುತ್ತಿದ್ದಾರೆಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ವಿದ್ಯುತ್ ಇಲ್ಲದೆ ಇರುವ ಬಗ್ಗೆ ನಿನ್ನೆಯಿಂದ ಕೂಡ ಗ್ರಾಮಸ್ಥರು ಸಂಬಂಧಿಸಿದ ಅಧಿಕಾರಿಗಳಿಗೆ ಕರೆ ಮಾಡುತ್ತಲೆ ಇದ್ದಾರೆನ್ನಲಾಗಿದೆ. ನಿನ್ನೆಯಿಂದ ಹಾರಿಕೆ ಉತ್ತರ ನೀಡುತ್ತಲೆ ನಿನ್ನೆ ಒಂದು ದಿನ ವಿದ್ಯುತ್ ಪೊರೈಕೆ ಮಾಡದೆ ಹಾಗೆ ಕಾಲ ಕಳೆದಿದ್ದಾರೆ. ಮಳೆ ಇರುವ ಕಾರಣ ಜನರು ಕೂಡ ಇವತ್ತಾದರೂ ವಿದ್ಯುತ್ ಕಾಣಬಹುದು ಎಂಬ ನಿರೀಕ್ಷೆಯಲ್ಲಿದ್ದರು.ಆದರೆ ಇಲ್ಲಿಯ ತನಕ ಜನರ ನಿರೀಕ್ಷೆ ಹಾಗೆ ಉಳಿದುಕೊಂಡಿದೆ. .
ಇವತ್ತು ಸಂಜೆ ತನಕವಾದ್ರೂ ವಿದ್ಯುತ್ ಬರಬಹುದು ಎಂದು ಸುಮ್ಮನಾಗಿದ್ದರು. ಆದರೆ ಇದುವರೆಗೆ ವಿದ್ಯುತ್ ಬಾರದೆ ಇರುವ ಕಾರಣ ಸಂಬಂಧಿಸಿದ ಅಧಿಕಾರಿಗಳಿಗೆ ಕರೆ ಮಾಡಿದ್ದರೆ ಕರೆ ಸರಿಯಾಗಿ ಉತ್ತರಿಸದೆ ಸರಕಾರ ನೀಡಿರುವ ಮೊಬೈಲ್ ನಂಬರ್ ಸ್ಬೀಚ್ ಆಪ್ ಮಾಡಿ ಸುಮ್ಮನಾಗುತ್ತಿದ್ದಾರಂತೆ
ವಿದ್ಯುತ್ ಇಲ್ಲದೆ ಅನೇಕ ಮನೆಗಳಿಲ್ಲಿ ಅಡುಗೆ ಮಾಡಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿದೆ. ಅನೇಕ ಮನೆಳಲ್ಲಿ ಈಗ ಮಿಕ್ಸರ್ ಅವಲಂಬಿಸಿಕೊಂಡ ಕಾರಣ ಎರಡು ದಿನದಿಂದ ಸರಿಯಾದ ಊಟಕ್ಕೂ ಪರದಾಟ ನಡೆಸುವಂತಾಗಿದೆ.ವಿದ್ಯಾರ್ಥಿಗಳಿಗೆ ಓದಲು ಬರೆಯಲು ಆಗದಂತಾಗಿದೆ.ನಿನ್ನೆಯಿಂದ ಕೆಟ್ಟು ಹೋದ ಲೈನ್ಗಳನ್ನ ಪತ್ತೆ ಹಚ್ಚಲು ಸಾಧ್ಯವಾಗದೆ ಎರಡು ದಿನಗಳಿಂದ ಕತ್ತಲೆಯಲ್ಲೆ ಕಾಲ ಕಳೆಯುವಂತಾಗಿದೆ.
ಇದನ್ನೂ ಓದಿ
- “ರೈತರನ್ನು ಮದುವೆಯಾಗುವ ಮಹಿಳೆಯರಿಗೆ ಪ್ರೋತ್ಸಾಹ ಧನ ನೀಡುವಂತೆ ಸಿಎಂಗೆ ಪತ್ರ ಬರೆದ ಶಾಸಕ
- Bjp/ಬಿಜೆಪಿ ಉತ್ತರಕನ್ನಡ ಜಿಲ್ಲಾ ರೈತಮೋರ್ಚಾ ಅಧ್ಯಕ್ಷರಾಗಿ ಅನಂತಮೂರ್ತಿ ಹೆಗಡೆ ನೇಮಕ
- Accident News/ಭೀಕರ ರಸ್ತೆ ಅಪಘಾತ, ಸ್ಥಳದಲ್ಲೆ ಓರ್ವ ಸಾವು
- Bhatkal Crime News/ ಭಟ್ಕಳದಲ್ಲಿ ಕಾಡುಪ್ರಾಣಿ ಹತ್ಯೆ ಶಂಕೆ: 21 ಕೆಜಿ ಮಾಂಸ, ಜಿಂಕೆ ಕೊಬ್ಬು, ಎರಡು ಏರ್ಗನ್ ವಶಕ್ಕೆ




