ಸುದ್ದಿಬಿಂದು ಬ್ಯೂರೋ ವರದಿ
ಸಿದ್ದಾಪುರ:ಯುವಕನೋರ್ವನ ಆತ್ಮಹತ್ಯೆ ಪ್ರಕರಣ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದು ಯುವತಿಯರನ್ನ ಪ್ರೀತಿಸುವ ನಾಟಕವಾಡಿ ಯುವಕರ ತಂಡವೊಂದು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿ ಆಡಿಯೋವೊಂದನ್ನ ಹರಿಬಿಟ್ಟು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಸಿದ್ದಾಪುರ ಪೊಲೀಸರು ಅಲ್ಲಿನ ಕಾಂಗ್ರೇಸ್ನ ಪ್ರಮುಖ ಮುಖಂಡನೋರ್ವನ್ನ ತೀವೃ ವಿಚಾರಣೆಗೆ ಒಳಪಡಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಬೆನ್ನೂರು ಚಿಕ್ಕತ್ಡತ್ತಿ ನಿವಾಸಿಯಾಗಿರುವ ಸಂತೋಷ್ ಗಣಪತಿ ನಾಯ್ಕ (26) ಆತ್ಮಹತ್ಯೆ ಮಾಡಿಕೊಂಡ ಯುವಕನಾಗಿದ್ದಾನೆ. ಯುವಕ ಸಾವಿಗೆ ಶರಣಾಗುವ ಮುನ್ನ ಯುವತಿಯರ ದುರ್ಬಳಕೆ ಮಾಡೋ ಜಾಲದ ಕುರಿತು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದ ಜಾಲದ ಬಗ್ಗೆ ಅಡಿಯೋ ಹಾಗೂ ಫೋಟೋ ಎಡಿಟ್ ಮಾಡಿದ
ವಿಡಿಯೋ ಹರಿಬಿಟ್ಟಿದ್ದ.ಅಲ್ಲದೇ ಸಿದ್ದಾಪುರ ಕಾಂಗ್ರೆಸ್ ನಾಯಕರ ವಿರುದ್ಧವೂ ಗಂಭೀರ ಆರೋಪ ಮಾಡಿದ್ದ.
ಯುವತಿಯರ ಮಿಸ್ ಮಾಡೋ ಚಾಲವನ್ನು ಪತ್ತೆ ಹಚ್ಚಿದ ಹಿನ್ನೆಲೆಯಲ್ಲಿ ಸಿದ್ದಾಪುರ ತಾಲೂಕಿನ ಚನಮಾಂವದ ಚರಣ್, ಲೋಕೇಶ್, ಮನೋಜ್ ಹಾಗೂ ಇತರೆ 4 ಜನರು ಮನೆಗೆ ಬಂದು ಬೆದರಿಕೆ ಹಾಕಿದ್ದಾರೆ. ಇದರಿಂದ ಹೆದರಿಕೊಂಡ ಸಂತೋಷ್, ಸಿದ್ದಾಪುರ ತಾಲೂಕಿನ ಕಾನಹಳ್ಳಿ ಬಳಿ ದೂಪವಕಾನು ಅರಣ್ಯದಲ್ಲಿ ಆಕೇಶಿಯಾ ಮರಕ್ಕೆ ಹಗ್ಗದಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಯುವಕನ ತಂದೆ ದೂರು ನೀಡಿದ್ದಾರೆ.
ಸಂತೋಷ ಫೇಸ್ಬುಕ್ನಲ್ಲಿ ಯುವತಿಯ ಹೆಸರಿನಲ್ಲಿ ಫೇಕ್ ಪ್ರೊಫೈಲ್ ಮಾಡಿ ಜಾಲವನ್ನ ತನ್ನ ಬಲೆಗೆ ಬೀಳಿಸಿದ್ದ. ಹುಡುಗಿಯಂತೆ ಮಾತನಾಡಿ, ಅವರಿಂದ ಮಾಹಿತಿ ಪಡೆದು ಒಂದಷ್ಟು ಹಣ ಕೂಡಾ ಪಡೆದಿದ್ದ, ಆದರೆ, ಫೇಕ್ ಪ್ರೊಫೈಲ್ ಹುಡುಗಿಯದ್ದಲ್ಲ ಸಂತೋಷನದ್ದು ಎಂದು ತಿಳಿದ ಬಳಿಕ ಆತನಿಗೆ ಬೆದರಿಕೆ ಹಾಕಿದ್ದಾರೆ. ಅಲ್ಲದೇ, ಮನೆಗೆ ತೆರಳಿ ಗಲಾಟೆ ಮಾಡಿ ಆತನ ಟ್ಯಾಬ್ಗಳನ್ನು ಕೂಡಾ ತೆಗೆದು-ಕೊಂಡು ಹೋಗಿದ್ದಾರೆ ಎಂದು ಆತ ಅಡಿಯೋದಲ್ಲಿ ಸಾವಿಗೂ ಮುನ್ನ ಹೇಳಿಕೊಂಡಿದ್ದಾನೆ.
ತಾನು ಪ್ರೀತಿಸಿದ ಯುವತಿ ಕೂಡಾ ಈ ಜಾಲಕ್ಕೆ ಬೆಂಬಲ ನೀಡುತ್ತಿರುವುದಾಗಿ ಆಡಿಯೋದಲ್ಲಿ ಹೇಳಿಕೊಂಡಿದ್ದಾನೆ. ಜಾಲದ ಬಗ್ಗೆ ಆಡಿಯೋ ಹಾಗೂ ಫೋಟೋ ಎಡಿಟ್ ಮಾಡಿ ಹಂಚಿಕೊಂಡಿದ್ದಾನೆ.ಅಲ್ಲದೇ, ಸಿದ್ದಾಪುರದ ಕಾಂಗ್ರೆಸ್ ನಾಯಕರ ಬಗ್ಗೆಯೂ ಆರೋಪ ಮಾಡಿದ್ದ. ಎಲ್ಲವನ್ನ ಪರಿಶೀಲನೆ ನಡೆಸಿದ ಸಿದ್ದಾಪುರ ಪೊಲೀಸರು ಇದೀಗ ಆ ಕಾಂಗ್ರೇಸ್ ಮುಖಂಡನಿಗೆ ಠಾಣೆಗೆ ಕರೆ ತಂದು ವಿಚಾರಣೆ ನಡೆಸುತ್ತಿದ್ದು,ಬಂಧನ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ರಾಜ್ಯದ್ಯಂತ ತಲುಪುತದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ರಾಜಕೀಯ ಅಪಘಾತ, ಕಳ್ಳತನ, ಮಳೆ ಹಾನಿ ಕ್ರೈಂ ಸೇರಿ ಸುದ್ದಿಯಾಗುವ ವಿಚಾರಗಳು ಯಾವುದೇ ಇದ್ದರೂ 9916127361 ಈ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸಲಾಗುವುದು.
ಇದನ್ನೂ ಓದಿ