ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ : ಭಾರತ ಸೈನ್ಯ ಪಾಕ್ ಒಳಗೆ ನುಗ್ಗಿ ನಡೆಸಿದ ಅಪರೇಷನ್ ಸಿಂಧೂರ ಕಾರ್ಯಚರಣೆ ಯಶಸ್ವಿ ಹಿನ್ನಲೆಯಲ್ಲಿ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ದೇಗುಲದಲ್ಲಿ ಪೂಜೆ ಸಲ್ಲಿಸಿ ಸೈನಿಕರ ಪರ ಪ್ರಾರ್ಥಿಸಿಕೊಳ್ಳುತ್ತಿದ್ದು.ಇದೀಗ ಶುಕ್ರವಾರ ನಾಳೆ ಮೇ 9 ರಂದು ರಾಜ್ಯದ ಎಲ್ಲಾ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಲಾಗುವುದು ಎಂದು ಅಲ್ಪಸಂಖ್ಯಾತ ವ್ಯವಹಾರಗಳ ಇಲಾಖೆ ಸಚಿವ ಬಿ ಝಡ್ ಜಮೀರ್ ಅಹ್ಮದ್ ತಿಳಿಸಿದ್ದಾರೆ.
ರಾಜ್ಯದ ಎಲ್ಲಾ ಮಸೀದಿಗಳಲ್ಲಿ ನಾಳೆ ಶುಕ್ರವಾರ ಮುಸಲ್ಮಾನರೆಲ್ಲರೂ ಸೇರಿ ಭಾರತೀಯ ಸೈನಿಕರ ಪರ ಪ್ರಾರ್ಥನೆ ಸಲ್ಲಿಸಿ ದೇಶ ರಕ್ಷಣೆಯಲ್ಲಿರುವ ಸೈನಿಕ ಪಡೆಗೆ ಧೈರ್ಯ,ಶಕ್ರಿ ತುಂಬುವಂತೆ ಪ್ರಾರ್ಥಿಸುವಂತೆ ಸಚಿವ ಜಮೀತ್ ಅಹ್ಮದ್ ರಾಜ್ಯದ ಎಲ್ಲಾ ಮಸೀದಿಗಳಿಗೂ ಅಧಿಕೃತವಾಗಿ ನೋಟಿಸ್ ಜಾರಿ ಮಾಡಿದ್ದಾರೆ.
ಇದನ್ನೂ ಓದಿ