ಸುದ್ದಿಬಿಂದು ಬ್ಯೂರೋ ವರದಿ
ಶಿರಸಿ : ಉತ್ತರ ಕನ್ನಡ ಜಿಲ್ಲೆಯ ಬನವಾಸಿಯಲ್ಲಿ ಎರಡು ದಿನಗಳು ವಿಜೃಂಭಣೆಯಿಂದ ನಡೆಯಲಿರುವ ಕಂದಬೋತ್ಸವ -2025 ಕ್ಕೆ ಸಚಿವ ಶಿವರಾಜ ತಂಗಡಗಿ ಅವರು ಅದ್ಧೂರಿ ಚಾಲನೆ ನೀಡಿದರು. ಹಿರಿಯ ಸಾಹಿತಿ ಡಾ. ಬಿ ಎ ವಿವೇಕ ರೈ ಅವರಿಗೆ ಪ್ರಸಿದ್ದ ಪಂಪ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕದಂಬೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ ತಂಗಡಗಿ ಅವರು ಮಾತನಾಡಿ,ಸಚಿವ ತಂಗಡಗಿ ಮಾತನಾಡಿ, ನಮ್ಮ ಆರಡಳಿದಲ್ಲೂ ಕದಂಬರನ್ನು ನೆನಪಿಸಿಕೊಳ್ಳುತ್ತೇವೆ. ಕಲೆ, ಸಂಸ್ಕೃತಿ, ಪರಂಪರೆಯನ್ನು ಕದಂಬರು ಬೆಳೆಸಿದಂತೆ ನಮ್ನ ಸರ್ಕಾರವೂ ಕೂಡ ಪಾಲನೆ ಮಾಡುತ್ತಾ ಇದ್ದೇವೆ. ಪಂಪ ವನದ ನಿರ್ಮಾಣಕ್ಕೆ 25 ಲಕ್ಷ ರೂ. ನೀಡಲಾಗಿದೆ. ಮುಂದಿನ ವರ್ಷದ ಕದಂಬೋತ್ಸವ ದೊಳಗೆ ವನ ನಿರ್ಮಾಣ ಆಗತ್ತೆ. ಇನ್ನು ಪಂಪ ಭವನದ ಬಗ್ಗೆಯೂ ಸಿಎಂ ಗಮನ ಸೆಳೆಯಲಾಗುವುದು. ನೂರು ಹೆಣ್ಣುಮಕ್ಕಳ ಸಲುವಾಗಿ ಹಾಸ್ಟೆಲ್ ಗೆ ಕಟ್ಟಡ ನೀಡಲು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ನೀಡಲಾಗುವುದು.

ಆಡಳಿತ ಸುಧಾರಣೆ ಆಯೋಗದ ಅಧ್ಯಕ್ಷ ಮತ್ತು ಶಾಸಕ ಆರ್ ವಿ ದೇಶಪಾಂಡೆ ಮಾತನಾಡಿ, ಬನವಾಸಿಯ ಇತಿಹಾಸ, ಪರಂಪರೆಯನ್ನು ಸಾರುವ ಕದಂಬೋತ್ಸವ ಪ್ರತಿ ವರ್ಷ ನಡೆಯಬೇಕು. ಜಿಲ್ಲಾಡಳಿತ ಈ ವರ್ಷ ಬಹಳ ಅಚ್ಚುಕಟ್ಟಾಗಿ ಆಯೋಜಿಸಿರುವುದು ಖುಷಿಯ ವಿಚಾರ. ಕಲೆ, ಸಂಸ್ಕೃತಿಯನ್ನು ಉಳಿಸಿ, ಬೆಳೆಸುವ ಕಾರ್ಯಕ್ರಮಗಳ ಸದಾ ನಡೆಯಲಿ ಎಂದು ಹಾರೈಸಿದರು.

ಸಿಎಂ ಸಿದ್ದರಾಮಯ್ಯನವರು, ವಿಡಿಯೋ ಸಂದೇಶವನ್ನು ಕಳುಹಿಸುವ ಮೂಲಕ ಕಾರ್ಯಕ್ರಮಕ್ಕೆ ಶುಭಾಶಯ ಕೋರಿದರು.

ಈ ಸಂದರ್ಭದಲ್ಲಿ ವಿಶ್ರಾಂತ ಕುಲಪತಿ ಡಾ ಬಿ ಎ ವಿವೇಕ ರೈ ಅವರಿಗೆ 2025 ನೇ ಸಾಲಿನ ಶ್ರೇಷ್ಠ ಪಂಪ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಬಳಿಕ ಮಾತನಾಡಿದ ಅವರು, ಬನವಾಸಿ ಬಹು ಸಂಸ್ಕ್ರತಿ, ಧರ್ಮಗಳ ನೆಲೆಯಾಗಿದೆ. ಎಲ್ಲ ಧ್ರರ್ಮಿಯರನ್ನು ಸ್ನೇಹದಿಂದ ಕಾಣಬೇಕು. ನಾನು ಕನ್ನಡಪರ ಕೆಲಸ ಮಾಡಿದ್ದೇನೆ. ರಾಷ್ಟ್ರಕವಿ ಪಂಪನನ್ನು ಅಪ್ಪಿಕೊಂಡೆ, ಅವರ ಕನ್ನಡ ಮಾರ್ಗವನ್ನು ಅನುಸರಿಸಿದೆ. ಹಾಗಾಗಿ ಪಂಪ ಪ್ರಶಸ್ತಿ ಲಭಿಸುವಂತಾಗಿದೆ. ಮುಂದಿನ ದಿನದಲ್ಲಿ ಪಂಪ‌ ಭವನ ನಿರ್ಮಾಣವಾಗುವಂತೆ ಸರಕಾರ ಕ್ರಮ ವಹಿಸಬೇಕು ಇದನ್ನ ಸಚಿವರು ಸಿ ಎಂ ಗಮನಕ್ಕೆ ತರುವಂತೆ ಮನವಿ ಮಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಮಾತನಾಡಿ, ಕದಂಬರು ನಮ್ಮ ಕನ್ನಡವನ್ನು ಗಟ್ಟಿಗೊಳಿಸಿದ್ದಾರೆ. ಕಲೆ, ಸಂಸ್ಕೃತಿಯನ್ನು ಇನ್ನಷ್ಟು ಗಟ್ಟಿಗೊಳಿಸುವ ಸದುದ್ದೇಶದಿಂದ ಈ ಕದಂಬೋತ್ಸವ ವನ್ನು ನಡೆಸುತ್ತಿದ್ದೇವೆ. ಶಾಸಕರಾದ ಶಿವರಾಮ ಹೆಬ್ಬಾರ್ ನನ್ನ ಬಳಿ ಕೇಳಿದ್ದರು ಕದಂಬೋತ್ಸವ ಮಾಡಲ್ವಾ ಎಂದು. ನಾನು ಇಲ್ಲ ಮಾಡುತ್ತೇವೆ ಎಂದಿದ್ದೆ. ಅದರಂತೆ ಅದ್ಧೂರಿಯಾಗಿ ಸಂಘಟಿಸಿದ್ದೇವೆ. ಜನ ಕೂಡ ಸಾಗರೋಪಾದಿಯಾಗಿ ಜನ ಬಂದಿರುವುದು ಖುಷಿ ಯ ಸಂಗತಿ ಎಂದರು.

ಕಾರ್ಯಕ್ರಮದಲ್ಲಿ ಶಾಸಕರಾದ ಆರ್.ವಿ.ದೇಶಪಾಂಡೆ, ಸತೀಶ್ ಸೈಲ್, ಅರಬೈಲ್ ಶಿವರಾಮ್ ಹೆಬ್ಬಾರ್, ಭಿಮಣ್ಣ ನಾಯ್ಕ್, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸತೀಸ್ ನಾಯ್ಕ, ಎಂಎಲ್ ಸಿ ಶಾಂತರಾಮ ಸಿದ್ದಿ, ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ, ಎಸ್ಪಿ ನಾರಾಯಣ, ಜಿಪಂ ಸಿಇಒ ಈಶ್ವರ ಕಾಂದೂ, ಸೇರಿದಂತೆ ಜಿಲ್ಲೆ ಅಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ