ಸುದ್ದಿಬಿಂದು ಬ್ಯೂರೋ ವರದಿ
ಶಿರಸಿ : ಮನೆಯಿಂದ ಹೊರಗಡೆ ಹೋಗಬೇಕೆಂದು ಪ್ಯಾಂಟ್ ಹಾಕಿಕೊಳ್ಳುವ ವೇಳೆ ಪ್ಯಾಂಟ್ನ ಒಳಗಡೆಯಲ್ಲಿ ನಾಗರ ಹಾವು ಬುಸುಗುಟ್ಟು ಪ್ಯಾಂಟ್ ಹಾಕಿಕೊಳ್ಳಲು ಹೋದ ವ್ಯಕ್ತಿ ಪ್ಯಾಂಟ್ ಎಸೆದು ಪಾರಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಗುರು ನಾರಾಯಣಗುರು ನಗರದಲ್ಲಿ ನಡೆದಿದೆ.
ಶಿರಸಿ ಗುರು ನಾರಾಯಣಗುರು ನಗರದಲ್ಲಿ ಮಾಂತೇಶ ಎಂಬುವವರು ಮನೆಯಲ್ಲಿ ಇಟ್ಟ ತನ್ನ ಪ್ಯಾಂಟ್ನನ್ನ ಹಾಕಿಕೊಂಡು ನಗರಕ್ಕೆ ಹೋಗಲು ರೆಡಿಯಾಗಲು ಪ್ಯಾಂಟ್ ತೆಗೆದು ಹಾಕಿಕೊಳ್ಳುವ ವೇಳೆ ಪ್ಯಾಂಟ್ನ ಒಳಗಡೆಯಲ್ಲಿ ಸೇರಿಕೊಂಡಿದ್ದ ನಾಗರ ಹಾವೊಂದು ಬುಸುಗೆಟ್ಟಿದೆ. ಇದರಿಂದ ಒಮ್ಮೆ ಭಯಭೀತರಾಗಿ ಕೈಯಲ್ಲಿ ಹಿಡಿದುಕೊಂಡ ಪ್ಯಾಂಟ್ನನ್ನ ಎಸೆದು ಪಾರಾಗಿದ್ದಾರೆ.
ಬಳಿಕ ಸ್ನೇಕ ಸ್ಟಾರ್ ಪ್ರಶಾಂತ ಹುಲೇಕಲ್ ಅವರನ್ನ ಮನೆಗೆ ಕರೆಸಿ ಹಾವನ್ನ ಹಿಡಿದು ಬಿಡಲಾಗಿದೆ. ಇವರಿಂದ ರಕ್ಷಣೆಗೊಳಗಾದ ನಾಗರಹಾವು ಮರಳಿ ಕಾಡಿಗೆಸೇರಿದೆ.
ಇದನ್ನೂ ಓದಿ
- ಲಾರಿ ಕಳ್ಳತನ ಪ್ರಕರಣದ ಬೆಳಗಾವಿ ಮೂಲದ ಆರೋಪಿ ಬಂಧನ; ಹಳಿಯಾಳ ಪೊಲೀಸರ ಕಾರ್ಯಾಚರಣೆ
- ಶಿರಸಿಯಲ್ಲಿ ಜೂನ್ 16ರಂದು ಅಕ್ರಮ ಸಾರಾಯಿ, ಡ್ರಗ್ಸ್ ವಿರುದ್ಧ ಪ್ರತಿಭಟನೆ
- ಹೈಟೆಕ್ ತಂತ್ರಕ್ಕೆ ಸಿಕ್ಕಿಬಿದ್ದ ಜೂಜುಕೋರರು; ಡ್ರೋಣ್ ಮೂಲಕ ಪತ್ತೆಯಾದ ಇಸ್ಪೀಟ್ ಅಡ್ಡೆ
- “ಸ್ವಾತಂತ್ರ್ಯ ಹೋರಾಟಗಾರ ನಾರಾಯಣ ನಾಯ್ಕ ಸ್ಮರಣಾರ್ಥ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ, ಗಿಡ ವಿತರಿಸಿದ ಪ್ರಶಾಂತ ನಾಯ್ಕ”

