ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ: ಈಗಾಗಲೇ ಬೆಸಿಗೆ ಆರಂಭವಾಗಿದ್ದು, ಎಲ್ಲೇಡೆ ನೀರಿಲ್ಲದೆ ಜನ ಪರದಾಡುವಂತಾಗಿದೆ. ಆದರೆ ಬಹುತೇಕ ಕಡೆಯಲ್ಲಿ ಗ್ರಾ.ಪಂನಿಂದ ಸರಬರಾಜು ಮಾಡಲಾಗುತ್ತಿರುವ ನೀರು ಪೋಲಾಗುತ್ತಿದ್ದರು ಸಂಬಂಧಿಸಿದ ಗ್ರಾಮ ಪಂಚಾಯತ ಅಧಿಕಾರಿಗಳು ಕ್ರಮ ಜರುಗಿಸದೆ ಇರುವುದು ನೀರು ಪೋಲಾಗಲು ಕಾರಣವಾಗಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ತಾಲೂಕಿನ ದಿವಗಿ, ಮಿರ್ಜಾನ್, ಮೊರಬಾ, ಬರ್ಗಿ ಸೇರಿದಂತೆ ಇನ್ನೂ ಅನೇಕ ಗ್ರಾಮ ಪಂಚಾಯತ್ ವ್ಹಾಪ್ತಿಯಲ್ಲಿ ನೀರು ಪೋಲಾಗುತ್ತಿರುವ ಬಗ್ಗೆ ಸ್ಣಳೀಯರಿಂದ ದೂರುಗಳು ಕೇಳಿಬಂದಿದೆ.ಅನೇಕ ಕಡೆಗಳಲ್ಲಿ ಹನಿ ನೀರಿಗಾಗಿ ಪರದಾಡುವ ದೃಶ್ಯ ಒಂದು ಕಡೆ ಆದರೆ. ಇನ್ನೊಂದು ಕಡೆ ಈ ರೀತಿ ನೀರು ಪೋಲು ಮಾಡಲಾಗುತ್ತಿದೆ. ಈಗಾಗಲೇ ನೀರಿನ ಸಮಸ್ಯೆ ಉಂಟಾಗಿರುವ ಪ್ರದೇಶಗಳ ಬಗ್ಗೆ ನಿರ್ಲಕ್ಷ್ಯ ವಹಿಸ ಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ್ ವೈದ್ಯ ಅವರು ಜಿಲ್ಲೆಯ ಹಿರಿಯ ಅಧಿಕಾರಿಗಳಿಗೆ ಖಡಕ್ ಸೂಚನೆಯನ್ನ ಕೂಡ ನೀಡಿದ್ದಾರೆ. ಆದರೆ ಜಿಲ್ಲೆಯ ಬಹುತೇಕ ಗ್ರಾಮೀಣ ಭಾಗದಲ್ಲಿ ಗ್ರಾಮ ಪಂಚಾಯತ್ಗಳಿಂದ ಹಿಂದಿನಿಂದಲ್ಲೂ ಪೈಪ್ ಲೈನ್ ಮೂಲಕ ಇಂದಿಗೂ ನೀರು ಸರಬರಾಜು ಮಾಡಲಾಗುತ್ತಿದೆ.
ಆದರೆ ತಾಲೂಕಿನ ಅನೇಕ ಕಡೆಯಲ್ಲಿ ಮನೆ ಮನೆಯಲ್ಲಿ ಬಾವಿ,ಪೋರವೇಲ್ ಗಳಿದ್ದರು ಸಹ ಹೆಚ್ಚಿನ ಸಂಖ್ಯೆಯ ಜನ ತಮ್ಮ ತಮ್ಮ ಮನೆಗಳ ಬಾವಿಯ ನೀರುಗಳನ್ನ ತೋಟಗಳಿಗೆ ಉಪಯೋಗಿಸದೆ ಯಾವುದೇ ಶುಲ್ಕವಿಲ್ಲದೆ ಸಿಗುವ ಗ್ರಾಮ ಪಂಚಾಯತ್ಗಳಿಂದ ಸರಬರಾಜು ಆಗುವ ನೀರುಗಳನ್ನೆ ತೋಟ ಹಾಗೂ ಗೊಬ್ಬರ ಹೊಂಡಗಳಿಗೆ ಬಳಸುತ್ತಿದ್ದಾರೆ. ಈ ಬಗ್ಗೆ ಸ್ಥಳೀಯರು ಆಯಾ ಗ್ರಾಮ ಪಂಚಾಯತ ಅಧಿಕಾರಿಗಳ ಗಮನಕ್ಕೆ ದಾಖಲೆ ಸಹಿತ ದೂರು ನೀಡಿದರೂ ಗ್ರಾಮ ಪಂಚಾಯತ್ ಅಧಿಕಾರಿಗಳು ನೀರು ಪೋಲಾಗುತ್ತಿರುವ ಸ್ಥಳವನ್ನ ಪರಿಶೀಲನೆ ಮಾಡದೆ ನೀರು ಪೋಲು ಮಾಡುವವರಿಗೆ ಬೆಂಬಲವಾಗಿ ನಿಂತಿರುವಂತಿದೆ
ಗ್ರಾಮೀಣ ಭಾಗದಲ್ಲಿ ಗ್ರಾಮ ಪಂಚಾಯತ್ ನೀರು ಪೋಲು ಮಾಡುವವರ ವಿರುದ್ದ ಕ್ರಮ ಜರುಗಿಸುವ ಮೊದಲು ನೀರು ಪೋಲಾಗುತ್ತಿರುವ ಬಗ್ಗೆ ಗ್ರಾಮ ಪಂಚಾಯತ್ ಅಧಿಕಾರಿಗಳ ಗಮನಕ್ಕೆ ತಂದರು ನೀರು ಪೋಲಾಗುವುದನ್ನ ತಡೆಗಟ್ಟದೆ ಇರುವ ಅಧಿಕಾರಿಗಳ ವಿರುದ್ಧವೆ ಕ್ರಮ ಜರುಗಿಸಿದಲ್ಲಿ ಮಾತ್ರ ನೀರು ಪೋಲಾಗುವುದನ್ನ ತಡೆಗಟ್ಟಲು ಸಾಧ್ಯ.ಹೀಗಾಗಿ ಈ ನಿಟ್ಟಿನಲ್ಲಿ ಸಚಿವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಬೇಕಿದೆ.
ಇದನ್ನೂ ಓದಿ