ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ : ರಾಜ್ಯದಲ್ಲಿ ಬಿಸಿಲ ತಾಪ ಏರಿಕೆ ಆಗುತ್ತಿರುವ. ಹಿನ್ನಲೆಯಲ್ಲಿ ರಾಜ್ಯದ 8ಜಿಲ್ಲೆಗಳಲ್ಲಿ ಕೆಲಸದ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಆದರೆ ಉತ್ತರಕನ್ನಡ ಜಿಲ್ಲೆಯಲ್ಲಿ 40ಸೆಲ್ಸಿಯಸ್ ಉಷ್ಟಾಂಶ ದಾಖಲಾಗಿದ್ದರು.‌ ಇಲ್ಲಿನ ಸರಕಾರಿ ನೌಕರರ ಕೆಲಸದ ಸಯದಲ್ಲಿ ಬದಲಾವಣೆ ಆಗಿಲ್ಲ. ಇದಕ್ಕೆ ಜಿಲ್ಲೆಯ ನೌಕರರ ಸಂಘದ ಹೊಣೆಗಾರಿಕೆ ನಿರ್ವಹಿಸುತ್ತಿರುವವರ ನಿರ್ಲಕ್ಷ ಕಾರಣ ಎನ್ನುವ ಆರೋಪ ಸರಕಾರಿ ನೌಕಕರರಿಂದಲ್ಲೇ ಕೇಳಿ ಬರುತ್ತಿದೆ..

ಉತ್ತರಕನ್ನಡ ಜಿಲ್ಲೆಯ ನೌಕರ ಸಂಘದಲ್ಲಿರುವರು ಆಯಕಟ್ಟಿನ ಸ್ಥಳಕ್ಕೆ ವರ್ಗಾವಣೆ ಮಾಡಿಕೊಂಡು ಡೆಪ್ಯುಟೇಷನ್ ಮಾಡಿಸಿಕೊಂಡು ಎಸಿ ರೂಮ್ ನಲ್ಲಿ ತಂಪಾಗಿರುತ್ತಾರೆ. ಹೀಗಾಗಿ ಇವರಿಗೆ ಬಿಸಿಲತಾಪದಲ್ಲಿ ನೊಂದು ಬೆಂದಿರುವ ಇತರ ನೌಕರರ ಸಮಸ್ಯೆ ಹೇಗೆ ಅರ್ಥವಾಗಬೇಕು.ಒಮ್ಮೆ ಎಸಿ ರೂಮ್‌ನಲ್ಲಿ ಕುಳಿತ ನೌಕರರ ಸಂಘದಲ್ಲಿರುವವರು ಒಮ್ಮೆ ಬಿಸಿಲ ತಾಪವನ್ನ ತೆಗೆದುಕೊಂಡರೆ ಉಳಿದ ನೌಕರರು ಈ ಬಿಸಿಲ ತಾಪದಲ್ಲಿ ಹೇಗೆ ಕೆಸಲ ನಿರ್ವಹಿಸುತ್ತಿದ್ದಾರೆ ಎನ್ನುವುದು ಅರ್ಥವಾಗಲು ಸಾಧ್ಯವಿದೆ..

ಈಗಾಗಲೇ ರಾಜ್ಯದ ಬೆಳಗಾವಿ, ವಿಜಯಪುರ, ಬಾಗಲಕೋಟೆ ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ ತಾಪ‌ಮಾನ‌ ಏರಿಕೆ ಆಗುತ್ತಿರುವ ಕಾರಣ ಅಲ್ಲಿನ ನೌಕರರ ಸಂಘದ ಜಿಲ್ಲಾಧ್ಯಕ್ಷರುಗಳು ತಮ್ಮ‌ ಜಿಲ್ಲೆಯಲ್ಲಿ ತಾಪ‌ಮಾನ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಕೆಲಸದ ಸಮಯಲ್ಲಿ ಬದಲಾವಣೆ‌ ಮಾಡುವಂತೆ ಸರಕಾರಿ ನೌಕರರ ರಾಜ್ಯಾಧ್ಯಕ್ಷರ ಮೂಲಕ ಸಲ್ಲಿಸಿದ ಮನವಿಗೆ ಮನ್ನಣೆ ನೀಡಿದೆ. ಆದರೆ ಈ ವರ್ಷದಲ್ಲಿ ಉತ್ತರಕನ್ನಡ ಜಿಲ್ಲೆಯಲ್ಲಿಯೂ ಸಹ ವ್ಯಾಪಕವಾದ ಬಿಸಿಲ ತಾಪ‌ ಉಂಟಾಗುತ್ತಿದ್ದು, ಮನೆಯಿಂದ‌ ಹೊರ ಹೋಗದಂತಹ ಪರಿಸ್ಥಿತಿ ಇದೆ.

ಜಿಲ್ಲೆಯಲ್ಲಿ ತಾಪಮಾನ ಹೆಚ್ಚಾಗುತ್ತಿದ್ದು, ಕೆಲಸ‌ಕ್ಕೆ ಹೋಗದಂತೆ ಆಗಿದೆ.ಹೀಗಾಗಿ ಬೆಳಗಾವಿ, ವಿಜಯಪುರ,ಬಾಗಲಕೋಟೆ,ಕಲಬುರಗಿ ಜಿಲ್ಲೆಯಲ್ಲಿ ಬೆಳಿಗ್ಗೆ 8ರಿಂದ‌ 1-30ರ ಸಮಯ ಏನು ನಿಗದಿ ಮಾಡಲಾಗಿದೆ ಅದೆ ರೀತಿ ನಮ್ಮ ಜಿಲ್ಲೆಯ ಸರಕಾರಿ ನೌಕರರ ಸಂಘದಲ್ಲಿ ಅನೇಕ‌ ವರ್ಷಗಳಿಂದ ಬೇರು ಬಿಟ್ಟಿರುವವರು ರಾಜ್ಯಾಧ್ಯಕ್ಷರ‌ ಗಮನ ಸೆಳೆಯುವ ಮೂಲಕ ಉತ್ತರ ಕನ್ನಡ ಜಿಲ್ಲೆಯಲ್ಲಿ‌ನ ಸರಕಾರಿ ನೌಕರರಿಗೂ ಉಳಿದ 8 ಜಿಲ್ಲೆಯಲ್ಲಿ ನಿಗದಿ ಪಡಿಸಿದಂತೆ ಕೆಲಸ ಮಾಡಲು ಅವಕಾಶ ಕಲ್ಪಿಸುವಂತಾಗಬೇಕೆಂಬ ಒತ್ತಾಯಗಳು ಸರಕಾರಿ ನೌಕರರಿಂದಲ್ಲೇ ಕೇಳಿ ಬರುತ್ತಿದೆ.

ಇದನ್ನೂ ಓದಿ