ಸುದ್ದಿಬಿಂದು ಬ್ಯೂರೋ
ಕುಮಟ : ಭಾರತದಲ್ಲೇ ಅತೀ ದೊಡ್ಡದಾಗಿರುವ ಬಿಳಿ ಹೆಬ್ಬಾವೊಂದು ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹೆಗಡೆ ಗ್ರಾಮದ ಗಾಂಧಿ ನಗರದಲ್ಲಿ ಪ್ರತ್ಯಕ್ಷವಾಗಿದ್ದು, ಉರಗ ತಜ್ಞ ಪವನ್ ನಾಯ್ಕ ಅಪರೂಪದ ಭಾರೀ ಗಾತ್ರದ ಹೆಬ್ಬಾವನ್ನ ರಕ್ಷಣೆ ಮಾಡಿದ್ದಾರೆ.

ಹೆಗಡೆ ಗ್ರಾಮದ ದೇವಿ ನಾರಾಯಣ ಮುಕ್ರಿ ಎನ್ನುವವರ ಮನೆಯ ಅಂಗಳದಲ್ಲಿ ಬಿಳಿ ಹೆಬ್ಬಾವು ಪ್ರತ್ಯಕ್ಷವಾಗಿದೆ ತಕ್ಷಣ, ಆರ್ ಟಿ ಓ ಒಫಿಸ್ ಹೋಮ್ ಗಾರ್ಡ್ ಗಣೇಶ್ ಮುಕ್ರಿ ಎಂಬುವವರು ಪವನ್ ನಾಯ್ಕ ಅವರಿಗೆ ಕರೆ ಮಾಡಿದ್ದು, ತಕ್ಷಣ ಸ್ಥಳಕ್ಕೆ ಬಂದ ಪವನ್ ನಾಯ್ಕ ಭಾರೀ ಗಾತ್ರದ ಬಿಳಿ ಹೆಬ್ಬಾವನ್ನWhite Python) ರಕ್ಷಣೆ ಮಾಡಿದ್ದಾರೆ. ಕಳೆದ ವರ್ಷವಷ್ಟೇ ಮಿರ್ಜಾನ್ ನಲ್ಲಿ ಸಣ್ಣ ಗಾತ್ರದ ಬಿಳಿ ಹೆಬ್ಬಾವು ಕಾಣಿಸಿಕೊಂಡಿತ್ತು, ಅಂದು ಸಹ ಪವನ್ ನಾಯ್ಕ ಹೋಗಿ ರಕ್ಷಣೆ ಮಾಡಿದ್ದು ರಾಷ್ಟ್ರಾದ್ಯಂತ ವೈರಲ್ ಆಗಿತ್ತು. ಈಗ ಬಹುತೇಕ 3 ಪಟ್ಟು ದೊಡ್ಡ ಗಾತ್ರದ ಹೆಬ್ಬಾವು ಪ್ರತ್ಯಕ್ಷವಾಗಿದೆ.
ಇಂತಹ ಹಾವು ಕರ್ನಾಟಕದಲ್ಲೇ ಮೂರನೇ ಬಾರಿ ರಕ್ಷಣೆಯಾಗಿದ್ದು, ಅದರಲ್ಲೂ 2 ಭಾರಿ ಉತ್ತರಕನ್ನಡ ಜಿಲ್ಲೆಯ ಕುಮಟಾದಲ್ಲೇ ಪ್ರತ್ಯಕ್ಷವಾಗಿರುವುದು ವಿಶೇಷ. ಇನ್ನೂ ದೇಶದಲ್ಲೇ ಅತೀ ದೊಡ್ಡ ಬಿಳಿ ಹೆಬ್ಬಾವಿನ ರಕ್ಷಣೆಯ ಕೀರ್ತಿ ಪವನ್ ನಾಯ್ಕ ಅವರಿಗೆ ಸಿಕ್ಕಂತಾಗಿದೆ.
ರಕ್ಷಣೆ ಮಾಡಿರುವ ಬಿಳಿ ಹೆಬ್ಬಾವನ್ನ ಕುಮಟಾ ಅರಣ್ಯ ಇಲಾಖೆಯ ಒಪ್ಪಿಸಲಾಗಿದೆ. ಈ ಹಾವಿನ ಮೈಮೇಲೆ ಸಣ್ಣ ಪುಟ್ಡ ಗಾಯಗಳಿರುವುದರಿಂದ ಮೈಸೂರ್ ಜೂ ಕಳಿಸಲಾಗಿದೆ. ಡಿ ಎಫ್ ಓ ರವಿಶಂಕರ್, ಏಸಿಎಫ್ ಜಿ ಲೋಹಿತ್, ಆರ್ ಎಪ್ ಓ ಎಸ್ ಟಿ ಪಟಗಾರ್, ಡಿ ಆರ್ ಎಫ್ ಓ ಹೂವಣ್ಣ ಗೌಡ ಸ್ಥಳದಲ್ಲಿದ್ದರು.
ಹಾವಿನ ಛಾಯಾಗ್ರಹಣವನ್ನು ಪ್ರಸಿದ್ದ ಛಾಯಾಗ್ರಾಹಕರಾದ ಗೋಪಿ ಜೊಲಿಯವರು ತಮ್ಮ ಕೆಮರಾದಲ್ಲಿ ಸೆರೆಹಿಡಿದಿದ್ದು, ಇದೀಗ ಈ ಪೋಟೋ ಸಾಮಾಜಿಕ ಜಾಲತಾಣದಲ್ಲಿ ಪುಲ್ ವೈರಲ್ ಆಗಿದೆ.