ಸುದ್ದಿಬಿಂದು ಬ್ಯೂರೋ ವರದಿ

ಕಾರವಾರ:ಅರ್ಹರು ಮತದಾರರ ಪಟ್ಟಿಯಿಂದ ಹೊರಗಿರದಂತೆ ಜಾಗರೂಕತೆ ವಹಿಸಬೇಕು ಹಾಗೂ ಅರ್ಹರಿಗೆ ಮತದಾನದ ಹಕ್ಕನ್ನು ಒದಗಿಸುವಲ್ಲಿ ನಾವು ವಿಫಲರಾಗಬಾರದು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ, ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ರೂಪಾಲಿ ನಾಯ್ಕ ತಿಳಿಸಿದ್ದಾರೆ.

ಕಾರವಾರ ಹಾಗೂ ಅಂಕೋಲಾದಲ್ಲಿ ನಡೆದ ಎಸ್ ಐ ಆರ್ ಭಾಗ-2 ಕುರಿತು ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಎಸ್ ಐ ಆರ್ ಫಾರ್ಮ ಭರ್ತಿ ಮಾಡಿಕೊಟ್ಟ ಮೇಲೆ ನಮ್ಮ ಕರ್ತವ್ಯ ಮುಗಿದಿಲ್ಲ.ಈಗ ಎರಡನೇ ಹಂತ ಇದೆ. ಮತದಾರರ ಯಾದಿಯಲ್ಲಿ ತಪ್ಪಿ ಹೋಗಿರುವ ಅರ್ಹ ಮತದಾರರನ್ನು ಗುರುತಿಸಿ ಅವರನ್ನು ಪಟ್ಟಿಗೆ ಸೇರ್ಪಡೆ ಮಾಡುವಂತೆ ಮಾಡಲು ಅ 8ರ ತನಕ ಕಾಲಾವಕಾಶ ಇದೆ. ಹೀಗಾಗಿ ಪ್ರತಿಯೊಬ್ಬರೂ ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು ಎಂದು ಅವರು ಹೇಳಿದರು.

ಕೆಲವು ಅರ್ಹರು ಹಿಂದೆ ನಮ್ಮ ಸಂಪರ್ಕಕ್ಕೆ ಸಿಕ್ಕಿಲ್ಲ.ಈಗ ಹಬ್ಬಗಳು ಇರುವುದರಿಂದ ಅವರು ಊರಿಗೆ ಬರಬಹುದು. ಹಾಗೆ ಬಂದಾಗ ಅವರನ್ನು ಸಂಪರ್ಕಿಸಿ ಮತದಾನದ ಹಕ್ಕನ್ನು ಅವರಿಗೆ ಒದಗಿಸಿಕೊಡಬೇಕು ಎಂದು ರೂಪಾಲಿ  ನಾಯ್ಕ ವಿನಂತಿಸಿದರು.

ನಿಕಟಪೂರ್ವ ಜಿಲ್ಲಾ ಅಧ್ಯಕ್ಷ ವೆಂಕಟೇಶ ನಾಯಕ,

ಬಿಎಲ್ ಎ 1ರಾಘು ಭಟ್  ಮಾತನಾಡಿದ್ದರು. ಮಹಾಶಕ್ತಿ ಕೇಂದ್ರ,ಶಕ್ತಿ ಕೇಂದ್ರ,ಬೂತ್ ಅಧ್ಯಕ್ಷರು, ಬಿಎಲ್ ಎ 2 ಗಳು ಉಪಸ್ಥಿತರಿದ್ದರು.

ಕಾರವಾರ ನಗರ ಹಾಗೂ ಗ್ರಾಮೀಣ ಮಂಡಲದ ಸಭೆ ಕಾರವಾರದ ಬಿಜೆಪಿಯಲ್ಲಿ ಕಚೇರಿಯಲ್ಲಿ ಹಾಗೂ ಅಂಕೋಲಾ ಮಂಡಲದ ಸಭೆ ಅಂಕೋಲಾ ಬಿಜೆಪಿ ಕಚೇರಿಯಲ್ಲಿ ನಡೆಯಿತು.

ವೇದಿಕೆಯಲ್ಲಿ ಗ್ರಾಮೀಣ ಅಧ್ಯಕ್ಷ ಸುಭಾಷ್ ಗುನಗಿ, ನಗರ ಅಧ್ಯಕ್ಷ ನಾಗೇಶ್ ಕುರಡೇಕರ್, ರಾಜ್ಯ ಪ್ರಕೋಷ್ಠ ಸದಸ್ಯ ಸುನಿಲ್ ಸೋನಿ,. ನಗರ ಪ್ರಭಾರಿ ರಾಜು ಭಂಡಾರಿ, ಜಿಲ್ಲಾ ಮಾಧ್ಯಮ ಸಹ ಸಂಚಾಲ ಕಿಶನ ಕಾಂಬಳೆ,ಮನೋಜ್ ಭಟ್,ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಅಶೋಕ ಗೌಡ ಸ್ವಾಗತಿಸಿದರು ಗ್ರಾಮೀಣ ಮಂಡಲ ಪ್ರಧಾನ ಕಾರ್ಯದರ್ಶಿ ಉದಯ ನಾಯ್ಕ್ ವಂದಿಸಿದರು.

ಅಂಕೋಲಾ ಮಂಡಲ ಸಂಜಯ ನಾಯ್ಕ,ಚಂದ್ರಕಾಂತ ನಾಯ್ಕ, ಸೂರಜ್ ನಾಯ್ಕ, ಜಿಲ್ಲಾ ಪದಾಧಿಕಾರಿಗಳು, ವಿವಿಧ ಜವಾಬ್ದಾರಿ ಇದ್ದ ಕಾರ್ಯಕರ್ತರು ಉಪಸ್ಥಿತರಿದ್ದರು.

ಇದನ್ನೂ ಓದಿ/“ಜಡ್ಡಿಕೆರೆಗೆ ಜಿಗಿದ ಪಿಎಸ್ಐ!” ವಿದ್ಯಾರ್ಥಿಯ ಮೃತದೇಹ ಮೇಲಕ್ಕೆತ್ತಿದ ಖಾದರ್ ಭಾಷಾ