ಸುದ್ದಿಬಿಂದು ಬ್ಯೂರೋ ವರದಿ

ಕುಮಟಾ : ತಾಲೂಕಿನ ಹಿರೇಗುತ್ತಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಹಾಗೂ ಯುವಕ ಸಂಘದ ಸಭೆ ಪ್ರೇಮಾನಂದ ಗಾಂವಕರ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ 2025–26ನೇ ಸಾಲಿನ ಆದಾಯ-ವೆಚ್ಚದ ಲೆಕ್ಕಪತ್ರಗಳನ್ನು ಮಂಡಿಸಿ ಚರ್ಚಿಸಿ ಅನುಮೋದಿಸಲಾಯಿತು. ನಂತರ 2026–27ನೇ ಸಾಲಿನ ಸಾರ್ವಜನಿಕ ಗಣೇಶೋತ್ಸವವನ್ನು ಅರ್ಥಪೂರ್ಣ ಹಾಗೂ ವಿಜೃಂಭಣೆಯಿಂದ ಆಚರಿಸುವ ಉದ್ದೇಶದಿಂದ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ನೂತನ ಸಮಿತಿಯ ಅಧ್ಯಕ್ಷರಾಗಿ ಸುರೇಂದ್ರ ಸಣ್ಣಪ್ಪ ನಾಯಕ, ಉಪಾಧ್ಯಕ್ಷರಾಗಿ ರಂಜನ ಗೌರೀಶ್ ನಾಯಕ, ಕಾರ್ಯದರ್ಶಿಯಾಗಿ ಸಂತೋಷ ನಾಗರಾಜ ಗಾಂವಕರ, ಗೌರವಾಧ್ಯಕ್ಷರಾಗಿ ಹರೀಶ್ ಬಾಲಚಂದ್ರ ನಾಯಕ, ಖಜಾಂಚಿಯಾಗಿ ನಾಗರಾಜ ಎಸ್. ನಾಯಕ,ಲೆಕ್ಕ ಪರಿಶೋಧಕರಾಗಿ ದೇವಾನಂದ ಬಿ. ನಾಯಕ, ಸಲಹೆಗಾರರಾಗಿ ಚಂದ್ರಹಾಸ ನಾಯಕ ಹಾಗೂ ರಾಮು ಕೆಂಚನ್ ನಿರ್ದೇಶಕರಾಗಿ ರಾಮದಾಸ ಸಣ್ಣಪ್ಪ. ನಾಯಕ ಮತ್ತು ರಾಜು ಕೃಷ್ಣ ಗಾಂವಕರ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯರು, ಸಾರ್ವಜನಿಕ ಗಣೇಶೋತ್ಸವವು ಧಾರ್ಮಿಕ ಆಚರಣೆಯೊಂದಿಗೆ ಸಾಮಾಜಿಕ ಸಾಮರಸ್ಯ, ಸಾಂಸ್ಕೃತಿಕ ಪರಂಪರೆ ಹಾಗೂ ಯುವಜನರ ಸೇವಾ ಮನೋಭಾವವನ್ನು ಬೆಳೆಸುವ ವೇದಿಕೆಯಾಗಿದ್ದು, ಎಲ್ಲರ ಸಹಕಾರದಿಂದ ಈ ಬಾರಿಯ ಉತ್ಸವವನ್ನು ಇನ್ನಷ್ಟು ಯಶಸ್ವಿಯಾಗಿ ನಡೆಸುವ ಸಂಕಲ್ಪ ವ್ಯಕ್ತಪಡಿಸಿದರು.

ಸಭೆಯಲ್ಲಿ ವಿನಾಯಕ ಎಂ. ನಾಯಕ, ಪ್ರಶಾಂತ ನಾಯಕ, ಎನ್. ರಾಮು ಹಿರೇಗುತ್ತಿ, ನಾಗರಾಜ ಎಸ್. ನಾಯಕ, ರಾಜೇಶ್ ಆರ್. ನಾಯಕ, ಭಾರ್ಗವ ಗಾಂವಕರ, ದಿಲೀಪ್ ನಾಯಕ, ಕೃಷ್ಣ ಎಂ. ನಾಯಕ, ಆಕಾಶ ಬಿ ನಾಯಕ, ವಿದ್ಯಾಧರ ನಾಯಕ, ಸುಭಾಷ್ ನಾಯಕ, ದೇವಾನಂದ ಕೆರೆಮನೆ, ಜಗದೀಶ ವಿ. ನಾಯಕ ಸೇರಿದಂತೆ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.