ಸುದ್ದಿಬಿಂದು ಬ್ಯೂರೋ ವರದಿ
ತನ್ನ ಮಗನು ತನ್ನಂತಿಲ್ಲ ಎನ್ನುವ ಊರಿನವರ ಟೀಕೆಗೆ ಬೇಸತ್ತ ತಂದೆಯೇ ಆರು ವರ್ಷದ ಮಗನನ್ನು ನದಿಗೆ ತಳ್ಳಿ ಹತ್ಯೆ ಮಾಡಿರುವ ಘಟನೆ ವಿಜಯಪುರ ಜಿಲ್ಲೆಯ ನಾಗಠಾಣ ಗ್ರಾಮದಲ್ಲಿ ನಡೆದಿದೆ. (Crime News, Father Kills Son, Vijayapura Case)

ಸಿದ್ದಾರ್ಥ ಮಲ್ಲಿಕಾರ್ಜುನ ಅರಕೇರಿ (6) ಮೃತ ಬಾಲಕನಾಗಿದ್ದು, ತಂದೆ ಮಲ್ಲಿಕಾರ್ಜುನ ಅರಕೇರಿ ಆರೋಪಿಯಾಗಿದ್ದಾನೆ. (Family Tragedy, Social Pressure, Rural Crime) ಗ್ರಾಮದಲ್ಲಿ ಕೆಲವರು ಮಗನ ಹೋಲಿಕೆ ಕುರಿತು ಪದೇ ಪದೇ ಟೀಕಿಸುತ್ತಿದ್ದರಿಂದ ಮನಸ್ತಾಪಗೊಂಡಿದ್ದ ಮಲ್ಲಿಕಾರ್ಜುನ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ.

ಮಾರ್ಚ್ 16ರಂದು ಮಗನನ್ನು ಶಾಲೆಗೆ ಸೇರಿಸುವುದಾಗಿ ಹೇಳಿ ಕರೆದುಕೊಂಡು ಹೋದ ಆತ, (Premeditated Murder, River Crime, Child Death Case) ಮಹಾರಾಷ್ಟ್ರದ ಕರಾಡ್ ತಾಲೂಕಿನ ವಡೋಲಿ ಸಮೀಪದ ಕೃಷ್ಣಾ ನದಿ ತೀರಕ್ಕೆ ಕರೆದೊಯ್ದು ನದಿಗೆ ತಳ್ಳಿ ಕೊಲೆ ಮಾಡಿದ್ದಾನೆ. ಬಳಿಕ ಮಗನನ್ನು ಸಿಂದಗಿ ಬಳಿ ಹಾಸ್ಟೆಲ್‌ನಲ್ಲಿ ಇಟ್ಟಿದ್ದಾಗಿ ಕುಟುಂಬಕ್ಕೆ ತಪ್ಪು ಮಾಹಿತಿ ನೀಡಿದ್ದಾನೆ.

ಏಪ್ರಿಲ್ 1ರಂದು ಮಗನ ಹುಟ್ಟುಹಬ್ಬದಂದು ಮಗುವನ್ನು ಕರೆತರಲು ತಾಯಿ ಒತ್ತಾಯಿಸಿದಾಗ (Police Investigation, Missing Child, Accused Confession) ಆತ ಮನೆ ಬಿಟ್ಟು ಪರಾರಿಯಾಗಿದ್ದಾನೆ. ಅನುಮಾನಗೊಂಡ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದು, ವಿಚಾರಣೆ ವೇಳೆ ಆರೋಪಿಯು ಕೃತ್ಯವನ್ನು ಒಪ್ಪಿಕೊಂಡಿದ್ದಾನೆ.

ಇನ್ನೂ, ಮಾರ್ಚ್ 16ರಂದು ಮಹಾರಾಷ್ಟ್ರದ ಮಸೂರು ಠಾಣೆ ಪೊಲೀಸರು (Body Identification, Cross State Crime, Karnataka Maharashtra Case) ಅಪರಿಚಿತ ಬಾಲಕನ ಶವ ಪತ್ತೆಯ ಬಗ್ಗೆ ಪ್ರಕಟಣೆ ನೀಡಿದ್ದರು. ಈ ಮಾಹಿತಿ ಹಾಗೂ ಆರೋಪಿಯ ಹೇಳಿಕೆ ಆಧರಿಸಿ ಶವವನ್ನು ಗುರುತಿಸಲಾಗಿದೆ. ಪ್ರಕರಣ ಸಂಬಂಧ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಇದನ್ನೂ ಓದಿ/ಕಾಂಗ್ರೆಸ್‌ನಲ್ಲಿ ಆರ್‌ಎಸ್‌ಎಸ್ ವಿವಾದ.. ಪದಾಧಿಕಾರಿಗಳ ಪಟ್ಟಿಗೆ ಬ್ರೇಕ್