ಸುದ್ದಿಬಿಂದು ಬ್ಯೂರೋ ವರದಿ
ಹಳಿಯಾಳ: ತಾಲ್ಲೂಕಿನ ಬದ್ರೊಳ್ಳಿ ಗ್ರಾಮದಲ್ಲಿ ನಡೆದ ಆಸ್ತಿ ಪಾಲು ವಿವಾದ (Property Dispute Case) ಹಿನ್ನೆಲೆಯ **ಕೊಲೆ ಪ್ರಕರಣ (Murder Case)**ದಲ್ಲಿ ಮೂವರು ಆರೋಪಿಗಳಿಗೆ ಶಿರಸಿಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ (Life Imprisonment Verdict) ವಿಧಿಸಿದೆ. ಜೊತೆಗೆ ತಲಾ 25,000 ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ.

ಘಟನೆಯ ವಿವರ | Crime News Karnataka
2019ರ ಸೆಪ್ಟೆಂಬರ್ 3ರಂದು ಹಳಿಯಾಳ ಪೊಲೀಸ್ ಠಾಣಾ ವ್ಯಾಪ್ತಿಯ ಬದ್ರೊಳ್ಳಿ ಗ್ರಾಮದಲ್ಲಿ ಈ ಹತ್ಯೆ ಪ್ರಕರಣ (Homicide Case) ನಡೆದಿತ್ತು.ಮೃತ ಕೇಶವ ಅವರು ತಮ್ಮ ಆಸ್ತಿಯಲ್ಲಿ ಪಾಲು ಕೇಳಿದ ಹಿನ್ನೆಲೆಯಲ್ಲಿ ಆರೋಪಿಗಳು ಕೋಪಗೊಂಡು ಈ ಕೃತ್ಯ ಎಸಗಿದ್ದಾರೆ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಆರೋಪಿಗಳಾದ ಅಕ್ಷಯ್ ಅಲಿಯಾಸ್ ಆಕಾಶ್ ಕಿತ್ತೂರಕರ್, ಪಾಂಡುರಂಗ ಕಿತ್ತೂರಕರ್ ಮತ್ತು ಲತಾ ಅಲಿಯಾಸ್ ತುಳಸಬಾಯಿ ಕಿತ್ತೂರಕರ್ ಅವರು ಮೊದಲು ಪ್ಲಾಸ್ಟಿಕ್ ಹಗ್ಗದಿಂದ ಹಲ್ಲೆ ನಡೆಸಿ, ಬಳಿಕ ಕುತ್ತಿಗೆ ಬಿಗಿದು ಕ್ರೂರವಾಗಿ ಕೊಲೆ (Brutal Murder) ಮಾಡಿದ್ದಾರೆ ಎಂದು ತಿಳಿದುಬಂದಿದೆ. ನಂತರ ಪ್ರಕರಣವನ್ನು ಮರೆಮಾಚಲು ಮೃತನ ರಕ್ತದ ಚಿಹ್ನೆಗಳನ್ನು ಅಳಿಸಲು ಬಟ್ಟೆಗಳನ್ನು ಬದಲಾಯಿಸಿರುವುದು Crime Investigation ವೇಳೆ ಪತ್ತೆಯಾಗಿದೆ.

ತನಿಖೆ ಮತ್ತು ವಿಚಾರಣೆ | Court News
ಈ ಪ್ರಕರಣವನ್ನು ಅಂದಿನ ಹಳಿಯಾಳ ಪೊಲೀಸ್ ಠಾಣೆಯ ತನಿಖಾಧಿಕಾರಿ ಬಿ.ಎಸ್. ಲೋಕಾಪುರ ಪರಿಶೀಲಿಸಿ, ನ್ಯಾಯಾಲಯಕ್ಕೆ Charge Sheet Filed ಮಾಡಿದ್ದರು. ಶಿರಸಿಯ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕಿರಣ ಕಿಣಿ ಅವರು ವಿಚಾರಣೆ ನಡೆಸಿ ಆರೋಪಿಗಳ ವಿರುದ್ಧದ ಆರೋಪಗಳು ಸಾಬೀತಾಗಿವೆ ಎಂದು ತೀರ್ಮಾನಿಸಿದರು.

ತೀರ್ಪು | Court Verdict Karnataka
ಮೂರು ಮಂದಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ (Life Sentence) ಮತ್ತು ತಲಾ 25,000 ದಂಡ ವಿಧಿಸಲಾಗಿದೆ. ಸಾಕ್ಷ್ಯಾಭಾವದಿಂದ 4 ಮತ್ತು 5ನೇ ಆರೋಪಿಗಳನ್ನು ನ್ಯಾಯಾಲಯ ಬಿಡುಗಡೆ ಮಾಡಿದೆ.ಸರ್ಕಾರದ ಪರವಾಗಿ ಸಾರ್ವಜನಿಕ ಅಭಿಯೋಜಕ ರಾಜೇಶ್ ಎಂ. ಮಳಗಿಕರ್ ವಾದ ಮಂಡಿಸಿದ್ದು, ಸಾಕ್ಷಿದಾರರನ್ನು ಹಾಜರುಪಡಿಸಲು ಪೊಲೀಸ್ ಸಿಬ್ಬಂದಿ ಸಹಕರಿಸಿದರು.

ಇದನ್ನೂ ಓದಿ/ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಶವವಾಗಿ ಪತ್ತೆ