ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ರಾಜ್ಯದಲ್ಲಿ ಮಾಹಿತಿ ಹಕ್ಕು ಕಾಯಿದೆ (RTI) ದುರ್ಬಳಕೆ ಮಾಡಿದ 26 ಜನರನ್ನು ಮಾಹಿತಿ ಆಯೋಗ ಕಪ್ಪುಪಟ್ಟಿಗೆ ಸೇರಿಸಿರುವುದಾಗಿ ಆಯೋಗದ ಆಯುಕ್ತ ಕೆ. ಬದ್ರುದ್ದೀನ್ ತಿಳಿಸಿದ್ದಾರೆ. (RTI misuse, legal alert)
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಮಾಹಿತಿ ಹಕ್ಕು ಕಾಯಿದೆ ಬಲವಾಗಿ ಉಳಿಯಬೇಕಾದರೆ ಸಾರ್ವಜನಿಕರು ಗುಣಮಟ್ಟದ ಹಾಗೂ ಸದುದ್ದೇಶದ ಅರ್ಜಿಗಳನ್ನು ಸಲ್ಲಿಸಬೇಕು ಎಂದು ತಿಳಿಸಿದರು. (RTI rules, public rights) ಮಾಹಿತಿ ಹಕ್ಕಿನಡಿ ಕೆಲವರು ಬ್ಲಾಕ್ಮೇಲ್ ಮಾಡುವ ಪ್ರವೃತ್ತಿ ಹೆಚ್ಚುತ್ತಿದೆ.
ಇಂತಹವರ ವಿರುದ್ಧ ಆಯೋಗ ಶಿಸ್ತು ಕ್ರಮ ಕೈಗೊಳ್ಳಲಿದೆ ಎಂದು ಅವರು ಎಚ್ಚರಿಕೆ ನೀಡಿದರು. (RTI fraud, blackmail case) ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಅರ್ಜಿಗಳನ್ನು ವಿಲೇವಾರಿ ಮಾಡಿದರೆ, ಬ್ಲಾಕ್ಮೇಲರ್ಗಳನ್ನು ನಿಯಂತ್ರಿಸಲು ಸಾಧ್ಯ ಎಂದು ಹೇಳಿದರು. (govt process, transparency)
ಕೆಲವರು 10ಸಾವಿರಕ್ಕೂ ಹೆಚ್ಚು ಮಾಹಿತಿ ಹಕ್ಕು ಅರ್ಜಿಗಳನ್ನು ಸಲ್ಲಿಸಿರುವುದು ಗಮನಕ್ಕೆ ಬಂದಿದೆ.
ಆದರೆ ಇವುಗಳಲ್ಲಿ ಬಹುತೇಕ ಅರ್ಜಿಗಳು ಸದುದ್ದೇಶದಿಂದ ಸಲ್ಲಿಸಲಾಗಿಲ್ಲ ಎಂದು ಆಯೋಗ ಕಂಡುಹಿಡಿದಿದೆ. (fake RTI, misuse alert) ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿ 26 ಜನರನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ ಎಂದು ವಿವರಿಸಿದರು. (legal action, blacklist) ಗುಜರಾತ್ ಹೈಕೋರ್ಟ್ ಆದೇಶವನ್ನು ಉಲ್ಲೇಖಿಸಿ ಈ ಕ್ರಮ ಕೈಗೊಳ್ಳಲಾಗಿದೆ. ಈ 26 ಜನರಲ್ಲಿ 7 ಮಂದಿ ಹೈಕೋರ್ಟ್ನಿಂದ ತಡೆಯಾಜ್ಞೆ ಪಡೆದಿದ್ದು, ಉಳಿದ 19 ಜನರ ಮೇಲೆ ಕಪ್ಪುಪಟ್ಟಿ ಆದೇಶ ಮುಂದುವರೆದಿದೆ. (court order, legal update)
ಇನ್ನೂ ಮಾಹಿತಿ ಆಯೋಗದ ಕಾರ್ಯಕ್ಷಮತೆ ಕುರಿತು ಮಾತನಾಡಿದ ಅವರು, 2025ರ ಫೆಬ್ರವರಿಯಲ್ಲಿ 55,400 ಮೇಲ್ಮನವಿಗಳು ಬಾಕಿ ಇತ್ತು. ನೂತನ ಆಯುಕ್ತರ ನೇಮಕಾತಿಯ ಬಳಿಕ ಸಾಕಷ್ಟು ಅರ್ಜಿಗಳು ವಿಲೇವಾರಿಯಾಗಿದ್ದು, ಈಗ 28,731 ಮೇಲ್ಮನವಿಗಳು ಮಾತ್ರ ಬಾಕಿ ಉಳಿದಿವೆ ಎಂದು ಹೇಳಿದರು. (RTI status, pending cases)
ಕಾರ್ಯಾಗಾರದಲ್ಲಿ ಆಯೋಗದ ಆಯುಕ್ತರಾದ ಡಾ. ಹರೀಶ್ ಕುಮಾರ್, ನಾರಾಯಣ ಜಿ. ಚನ್ನಾಳ ಹಾಗೂ ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯಾ ಉಪಸ್ಥಿತರಿದ್ದರು. (official meet, govt
ಇದನ್ನೂ ಓದಿ/ಸ್ವಿಫ್ಟ್ ಕಾರಿನಲ್ಲಿ ಗೋವು ಕಳ್ಳತನಕ್ಕೆ ಯತ್ನ! ಗ್ರಾಮಸ್ಥರ ಕಂಡು ಕಾರು ಬಿಟ್ಟು ಪರಾರಿ

