ಸುದ್ದಿಬಿಂದು ಬ್ಯೂರೋ ವರದಿ
ಭಟ್ಕಳ: ತಾಲೂಕಿನ ತಲಗೇರಿ ಗ್ರಾಮದಲ್ಲಿ ಕಾರವೊಂದರಲ್ಲಿ ಜಾನುವಾರುಗಳನ್ನ ಹಿಂಸಾತ್ಮಕವಾಗಿ ಸಾಗಾಟ ಮಾಡುತ್ತಿದ್ದ ಗೋವು ಕಳ್ಳರ ವಾಹನವನ್ನ ಸಾರ್ವಜನಿಕರು ತಡೆಹಿಡಿದಿದ್ದು, ಕಳ್ಳರು ಕಾರು ಬಿಟ್ಟು ಪರಾರಿಯಾಗಿರುವ ಘಟನೆ ನಡೆದಿದೆ. (Breaking News | Crime Alert | Karnataka News)
ಸ್ವಿಫ್ಟ್ ಕಾರಿನಲ್ಲಿ ಜಾನುವಾರುಗಳನ್ನ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವೇಳೆ ಗ್ರಾಮಸ್ಥರ ಗಮನಕ್ಕೆ ಬಂದಿದ್ದು,(Live Update |Viral News) ಕಳ್ಳತನಕ್ಕೆ ಮುಂದಾದ ಆರೋಪಿಗಳು ಕಾರು ಬಿಟ್ಟು ಪರಾರಿಯಾಗಿದ್ದಾರೆ.ಬೆಳಿಗ್ಗೆ ಸುಮಾರು 3.45ರ ವೇಳೆಗೆ ಈ ಕೃತ್ಯ ನಡೆದಿದ್ದು, ಕಾರಿನಲ್ಲಿದ್ದ ಗೋವುಗಳ ಆಕ್ರಂದನ ಕೇಳಿ ಸ್ಥಳೀಯರು ತಕ್ಷಣ ಸ್ಥಳಕ್ಕೆ ಧಾವಿಸಿದರು. (Latest News | Local News)
ಈ ವೇಳೆ ಸ್ವಿಫ್ಟ್ ಕಾರಿನೊಳಗೆ ಆಕಳುಗಳನ್ನು ಕಂಡು ಗ್ರಾಮಸ್ಥರು ಕಂಗಾಲಾಗಿದ್ದಾರೆ.ಗ್ರಾಮಸ್ಥರು ಕಾರು ಬೆನ್ನಟ್ಟುತ್ತಿರುವುದನ್ನ ಗಮನಿಸಿದ ಗೋವು ಕಳ್ಳರು ತಕ್ಷಣ ಕಾರನ್ನು ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾರೆ.(Crime News | Exclusive) ಆಕ್ರೋಶಗೊಂಡ ಗ್ರಾಮಸ್ಥರು ಕಾರಿನ ಗಾಜುಗಳನ್ನು ಪುಡಿಮಾಡಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಪರಿಶೀಲನೆ ವೇಳೆ ಕಾರಿಗೆ ಎರಡು ನಕಲಿ ನಂಬರ್ ಪ್ಲೇಟ್ಗಳನ್ನು ಬಳಸಿರುವುದು ಬಹಿರಂಗವಾಗಿದೆ. (Investigation | Alert News) ಕಾರಿನೊಳಗಿದ್ದ ಎರಡು ಆಕಳನ್ನು ಗ್ರಾಮಸ್ಥರು ಸುರಕ್ಷಿತವಾಗಿ ರಕ್ಷಿಸಿದ್ದಾರೆ.
ಈ ಸಂಬಂಧ ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಪರಾರಿಯಾದ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ. (Police Case | Update News)
ಇದನ್ನೂ ಓದಿ/IAS officer transfer/ಪ್ರಾಮಾಣಿಕ ಅಧಿಕಾರಿ ಪ್ರಸನ್ನ ವರ್ಗಾವಣೆಗೆ ಭಾರೀ ವಿರೋಧ! ವಿದ್ಯಾರ್ಥಿಗಳ ಆಕ್ರೋಶ

