ಸುದ್ದಿಬಿಂದು ಬ್ಯೂರೋ ವರದಿ : Digital News
ಚಿತ್ರದುರ್ಗ: ಜವನಗೊಂಡನಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಭ್ರಷ್ಟಾಚಾರದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಆಸ್ಪತ್ರೆಯ ವೈದ್ಯ ಡಾ. ಕೃಷ್ಣ ಎಂಬುವವರು ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವ ನರ್ಸ್ ಲತಾ ಅವರಿಗೆ ಕಾಂಟ್ರಾಕ್ಟ್ ನವೀಕರಣಕ್ಕಾಗಿ ಹಣ ನೀಡುವಂತೆ ಕೇಳಿರುವ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಆಡಿಯೋದಲ್ಲಿ ಹೇಳಿದ್ದೇನು..:
ವೈದ್ಯ : “ಕಾಂಟ್ರಾಕ್ಟ್ ರಿನಿವಲ್ ಮಾಡಿಕೊಳ್ಳಲು ₹5000 ಕೊಡಬೇಕು. ಕಾಸು ಕೊಟ್ಟರೆ ರಿನಿವಲ್ ಮಾಡ್ತೀನಿ. ಲೇಟ್ ಮಾಡಿದ್ರೆ 10,000, ಸಾವಿರ ಇನ್ನೂ ಲೇಟ್ ಮಾಡಿದ್ರೆ 15,000 ಸಾವಿರ ಕೊಡ್ಬೇಕಾಗುತ್ತೆ” ಎಂದು ಡಾ. ಕೃಷ್ಣ ದಪ್ಪವಾಗಿ ಹೇಳಿರುವುದು ಆಡಿಯೋದಲ್ಲಿ
ವೈದ್ಯ: “ನೀವು ಯಾರಿಗೆ ಫೋನ್ ಮಾಡ್ತಿರಾ, ಯಾರ ಜೊತೆ ನಾಟಕ ಮಾಡ್ತಿರಾ ಎಲ್ಲ ಗೊತ್ತಿದೆ. ರಾಜಕೀಯ ಮಾಡ್ಬೇಡಿ, ಏನು ನಡೆಯಲ್ಲ” ಎಂಬುದು ಡಾ. ಕೃಷ್ಣ ಮಾತುಗಳಲ್ಲಿ ಸ್ಪಷ್ಟವಾಗುತ್ತಿದೆ.
ವೈದ್ “ಕಾಸು ಕೊಟ್ಟರೆ ಸಹಿ ಮಾಡ್ತೀನಿ, ಇಲ್ಲದಿದ್ದರೆ ‘ಅವರಲ್ಲಿ ಅರ್ಹತೆ ಇಲ್ಲ’ ಅಂತಾ ರಿಪೋರ್ಟ್ ಮಾಡ್ತೀನಿ” ಎಂಬ ತರಾಟೆಗೆ ನರ್ಸ್ ಒಳಗಾಗಿದ್ದಾರೆ.
ವೈದ್ “3 ತಿಂಗಳಿಗೆ ಟರ್ಮಿನೇಟ್ ಮಾಡಿಸುವೆ, ಮನೆಗೆ ಹೋಗಿ, ಯಾರ ಹತ್ತಿರ ಹೇಳಿಕೊಳ್ಳಬೇಡಿ” ಎಂಬ ನಿಖರ ಬೆದರಿಕೆ ಸಹ ಆಡಿಯೋದಲ್ಲಿ ಕೇಳಿಬರುತ್ತಿದೆ.
ವೈದ್ಯ : “THO, DHO ಕಾಲು ಹಿಡಿದು ಮತ್ತೆ ಆರ್ಡರ್ ಹಾಕಿಸಿಕೊಳ್ಳಬೇಕು” ಎಂಬಷ್ಟು ಅಂಹಕಾರಿಂದ ಈ ವೈದ್ಯ ಆಡಿಯೋದಲ್ಲಿ ಹೇಳಿದ್ದಾನೆ.
ಈ ಘಟನೆಯ ಆಡಿಯೋ ಈಗ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ಭ್ರಷ್ಟ ವ್ಯವಸ್ಥೆಯ ಭಯಾನಕ ಮುಖವನ್ನು ಬಹಿರಂಗಪಡಿಸಿದೆ. ಈ ವೈದ್ಯನ ಈ ಬೃಹ್ಮಾಂಡ ಭೃಷ್ಟಾಚಾರ ಬಹಿರಂಗವಾಗತ್ತಾ ಇರುವಂತೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಡಾ. ಕೃಷ್ಣ ವಿರುದ್ಧ ತಕ್ಷಣ ಕ್ರಮ ಜರುಗಿಸಬೇಕು ಎನ್ನುವ ಒತ್ತಾಯ ಕೇಳಿ ಬರುತ್ತಿದೆ.
ಇದನ್ನೂ ಓದಿ :ಮಹಿಳೆ ಸ್ನಾನದ ವೇಳೆ ಇಣುಕು ನೋಟ: ಯುವಕನಿಗೆ ಕಾನೂನು ಪಾಠ”