ಸುದ್ದಿಬಿಂದು ಬ್ಯೂರೋ ವರದಿ
ದಾಂಡೇಲಿ : ವಿದ್ಯುತ್ ಶಾಕ್ ತಗುಲಿ 15ವರ್ಷದ ಹೆಣ್ಣಾನೆ ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಕುಳಗಿ ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಕುಳಗಿ ಅರಣ್ಯ ಪ್ರದೇಶದಲ್ಲಿ ಅಂಬಿಕಾ ನಗರದಿಂದ ಗೋವಾ ಕಡೆ ಹೈ ಟೆನ್ಶನ್ ವಿದ್ಯುತ್ ತಂತಿ ಹಾದು ಹೋಗಿದೆ.ತಂತಿ ಪಕ್ಕದಲ್ಲಿದ್ದ ಮರದ ಸೊಪ್ಪು ಮುರಿಯುತ್ತಿದ್ದ ವೇಳೆ ಮರ ವಿದ್ಯುತ್ ತಂತಿಗೆ ತಗುಲಿದೆ. ಇದರಿಂದಾಗಿ ವಿದ್ಯುತ್ ಸ್ಪರ್ಷದಿಂದಾಗಿ ಕಾಡನೆ ಸ್ಥಳದಲ್ಲೇ ಆನೆ ಸಾವನ್ನಪ್ಪಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ, ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದ್ದು , ಈಗಾಗಲೆ ಮೃತ ಆನೆಯ ಮರಣೋತ್ತರ ಪರೀಕ್ಷೆ ನಡೆ ಸಹ ನಡೆಸಲಾಗಿದೆ.
ಅರಣ್ಯ ಇಲಾಖೆ ಸಿಬ್ಬಂದಿಗಳು ಮೃತ ಆನೆಯ ಪಾರ್ಥಿವ ಶರೀರಕ್ಕೆ ಪೂಜೆ ಸಲ್ಲಿಸಿದ್ದಾರೆ. ಕೋರ್ಟ್ ಪರವಾನಗಿ ಪಡೆದು ಅಂತ್ಯಕ್ರಿಯೆ ನಡೆಸಲು ಅರಣ್ಯ ಅಧಿಕಾರಿಗಳು ಮುಂದಾಗಿದ್ದಾರೆ.
ಇದನ್ನೂ ಓದಿ
- Ramalinga-reddy-resigns/ಡಿಕೆ ಶಿವಕುಮಾರ ಸಚಿವ ಸಂಪುಟದಲ್ಲಿ ಮೊದಲ ವಿಕೆಟ್ ಪತನ: ಸಚಿವ ಸ್ಥಾನಕ್ಕೆ ರಾಮಲಿಂಗಾ ರೆಡ್ಡಿ ರಾಜೀನಾಮೆ
- ಓಮ್ಮಿ ಚಾಲಕನ ಎಡವಟ್ಟು: ಒಂದೇ ಕುಟುಂಬದ ಮೂವರ ಸಾವು
- ಕೇರಳಕ್ಕೆ ಮುಂಗಾರು ಎಂಟ್ರಿ : ಕರ್ನಾಟಕದತ್ತ ಮುಂಗಾರಿನ ಹೆಜ್ಜೆ; ಕಾರವಾರದಲ್ಲಿಯೂ ಅಬ್ಬರಿಸುತ್ತಿರುವ ವರುಣ
- ಜಿಲ್ಲಾ ಆಸ್ಪತ್ರೆ ಶಿರಸಿಗೆ ಸ್ಥಳಾಂತರಕ್ಕೆ ವಿರೋಧ: ಕಾರವಾರದಲ್ಲೇ ಉಳಿಸಬೇಕು, ಇಲ್ಲದಿದ್ದರೆ ಉಗ್ರ ಹೋರಾಟ :ಮಾಧವ ನಾಯ್ಕ

