ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ : ತಾಲೂಕಿನ ಬರ್ಗಿ ಗ್ರಾಮದಲ್ಲಿ‌ ಮಾತ್ರ ಕಳೆದ ಎರಡು ದಿನಗಳಿಂದ ವಿದ್ಯುತ್ ಇಲ್ಲದೆ ಜನರು ಸಮಸ್ಯೆ ಎದುರಿಸ್ತಾ ಇದ್ದರು ಈ ಬಗ್ಗೆ ಸುದ್ದಿ ಬಿಂದು ನ್ಯೂಸ್ ನಲ್ಲಿ KEB ಅಧಿಕಾರಿಗಳ ನಿರ್ಲಕ್ಷ : ಎರಡು ದಿನಗಳಿಂದ ಕೈ ಕೊಟ್ಟ ವಿದ್ಯುತ್ ಎಂಬ ಶೀರ್ಷಿಕೆ ಅಡಿಯಲ್ಲಿ ಸುದ್ದಿ ಪ್ರಕಟಿಸಲಾಗಿತ್ತು. ಸುದ್ದಿ ಪ್ರಸಾರವಾದ ಅರ್ಧ ಗಂಟೆಯಲ್ಲೆ ಬರ್ಗಿ ಗ್ರಾಮಕ್ಕೆ ವಿದ್ಯುತ್ ಪೊರೈಕೆ ಆಗಿದೆ.

ನಿನ್ನೆ ರವಿವಾರದಿಂದ‌ ಇಂದು ರಾತ್ರಿಯ ತನಕ‌ ವಿದ್ಯುತ್ ಇಲ್ಲದೆ‌ ಜನ ಸಮಸ್ಯೆಗೆ ಒಳಗಾಗಿದ್ದು, ಸಂಬಂಧಿಸಿದ ಅಧಿಕಾರಿಗಳಿಗೆ ಪೋನ್ ಮಾಡಿದ್ದರೆ‌ ಆ ಅಧಿಕಾರಿಗಳು ಸರಕಾರ ತಮ್ಮಗೆ ನೀಡಿದ್ದ ಸೀವ್ ನಂಬರ್‌ನ್ನೆ ಸ್ವೀಚ್ ಆಪ್ ಮಾಡಿ ಜಾರಿ‌ಕೊಳ್ಳತ್ತಾ ಇದ್ದರು. ಅಷ್ಟೆ ಅಲ್ಲದೆ‌ ಕೇಳಿದಾಗಲ್ಲೇಲ್ಲಾ ಆ ರಸ್ತೆಯಲ್ಲಿ ಮರ ಬಿದ್ದಿದೆ. ಅವರ‌ ಮನೆ ಎದುರಿನ ಲೈನ್ ಮೇಲೆ ಮರ ಬಿದ್ದಿದೆ. ಅಂತಾ ಹೀಗೆ ತಮ್ಮ ಮನಸ್ಸಿಗೆ ಬಂದ ಹಾಗೆ ಹಾರಿಕೆ ಉತ್ತರ ನೀಡಿ ಜಾರಿಕೊಳ್ಳತ್ತಾ ಇದ್ದರು.‌ಸ್ಥಳೀಯ ಯುವಕರು ಅವರು ಮರ ಬಿದಿದ್ದೆ ಎಂದ ಎಲ್ಲಾ ಸ್ಥಳ‌ ಪರಿಶೀಲನೆ ನಡೆಸಿದಾಗ ಅವರು ಹೇಳಿದ ಯಾವ ಜಾಗದಲ್ಲೂ ಮರ ಇರಲಿ ಮರದ ಟೊಂಗೆ ಸಹ ಬಿದ್ದಿರಲ್ಲಿ.

ಇದೆಲ್ಲದರ ಬಗ್ಗೆ ಸುದ್ದಿ ಬಿಂದು ಸಮಗ್ರ ಮಾಹಿತಿಯನ್ನ ಸಂಗ್ರಹಿಸಿ ವಿದ್ಯುತ್ ಇಲ್ಲದೆ ಇರಲು ಸಂಬಂಧಿಸಿದ ಅಧಿಕಾರಿಗಳ‌ ನಿರ್ಲಕ್ಷ ಎದ್ದು ಕಾಣುತ್ತಿದೆ ಎನ್ನುವ ಬಗ್ಗೆ ಸುದ್ದಿ ಪ್ರಕಟಿಸಿತ್ತು.‌ಇದಾದ ಅರ್ಧ ಗಂಟೆಯಲ್ಲೆ‌ ಬರ್ಗಿ ಗ್ರಾಮದಲ್ಲಿ ವಿದ್ಯುತ್ ಉರಿಯಲಾರಂಭಿಸಿದೆ. ಎಲ್ಲವನ್ನ ಗಮನಿಸಿದ್ದರೆ ಯಾವುದರ ಬಗ್ಗೆಯೂ ಸರಿಯಾದ ಮಾಹಿತಿಯೇ ಇಲ್ಲದ ಅಧಿಕಾರಿ ಜನರ ಧಿಕ್ಕು ತಪ್ಪಿಸುವ ಕೆಲ‌ಸ ಮಾಡುತ್ತಿದ್ದಾರೆ. ಹಾಗೆ ಸರಕಾರ ನೀಡಿದ ಸೀಮ್ ಸ್ವೀಚ್ ಆಪ್ ಮಾಡಿ ಹಾಯ್ ಆಗಿ ಇರತ್ತಾರೆ ಎನ್ನುವುದು ಈ ಒಂದು ಘಟನೆಯಿಂದ ಜನತೆಗೆ ಅರ್ಥವಾದಂತಾಗಿದೆ. ಹೀಗಾಗಿ ಜನರ ಸಮಸ್ಯೆ ಜೊತೆ ಸದಾ ಚಲ್ಲಾಟ ಆಡುವ ಇಂತಹ ಹೆಸ್ಕಾಂ‌ ಅಧಿಕಾರಿಗಳ ನಿರ್ಲಕ್ಷದ ವಿರುದ್ಧ ಸೂಕ್ರ ಕ್ರಮಕ್ಕೆ ಸಂಬಂಧಿಸಿದ ಅಧಿಕಾರಿಗಳು ಹಾಗೆ ಜನಪ್ರತಿನಿಧಿಗಳು ಮುಂದಾಗಬೇಕಿದೆ.

ಇದನ್ನೂ ಓದಿ