ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ : ಸಾಮಾಜಿಕ ಕಾರ್ಯಕರ್ತ ಹಾಗೂ ಹಿರಿಯ ಕಬ್ಬಡ್ಡಿ ಆಟಗಾರರೂ ಆಗಿದ್ದ ದೇವರಹಕ್ಕಲದ ಮಹಾದೇವ ಜಟ್ಟಿ ನಾಯ್ಕ ಇವರು ಇತ್ತೀಚೆಗೆ ನಿಧನರಾದರು.
ಕುಮಟಾದ ಡಾ.ಎ.ವಿ.ಬಾಳಿಗಾ ಕಾಲೇಜಿನ ಭೌತಶಾಸ್ತ್ರ ವಿಭಾಗದಲ್ಲಿ ಪ್ರಯೋಗಾಲಯದ ಸಹಾಯಕರಾಗಿ 3 ದಶಕಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿದ ಇವರು ಸೇವಾ ನಿವೃತ್ತರಾಗಿದ್ದರು. ಫ್ರೌಡಶಾಲಾ ವಿದ್ಯಾರ್ಥಿ ಜೀವನದಿಂದಲೇ ಮಹಾದೇವ ನಾಯ್ಕ, ರೋಹಿದಾಸ ನಾಯ್ಕ ಹಾಗೂ ಕುಮಟಾದ ಇನ್ನೂ ಅನೇಕರು ಕಬ್ಬಡ್ಡಿ ಆಟದಲ್ಲಿ ಪರಿಣಿತರಾಗಿದ್ದರು. ಶಾರೀರಿಕವಾಗಿ, ಮಾನಸಿಕವಾಗಿ ಬಲಿಷ್ಠ ಮತ್ತು ಸದೃಡರಾಗಿದ್ದ ಮಹಾದೇವ ನಾಯ್ಕ ಹಾಗೂ ರೋಹಿದಾಸ ನಾಯ್ಕ ಇಬ್ಬರೂ ಕೂಡ ಇಹಲೋಕ ತ್ಯಜಿಸಿದ್ದು, ಕಬ್ಬಡ್ಡಿ ಲೋಕವೇ ಬಡವಾದಂತಾಗಿದೆ ಎಂದು ಕುಮಟಾದ ಹಿರಿಯ ಕ್ರೀಡಾಪ್ರೇಮಿಗಳು ಶೋಕ ವ್ಯಕ್ತಪಡಿಸಿದ್ದಾರೆ.
ರಕ್ತದಾನದ ಬಗ್ಗೆ ಈಗಿನಷ್ಟು ಅರಿವಿಲ್ಲದ 80-90ರ ದಶಕದಲ್ಲಿಯೇ ಮಹಾದೇವ ಜಟ್ಟಿ ನಾಯ್ಕರು ಅನೇಕ ಬಾರಿ ರಕ್ತದಾನ ಮಾಡಿ ಸಾಮಾಜಿಕ ಅರಿವು ಮೂಡಿಸಿದ್ದರು. ಇವರದು O +ve ಬ್ಲಡ್ ಗ್ರೂಪ್ ಆಗಿತ್ತು.ಕಾಲೇಜಿನಲ್ಲಿ ಸಹಾಯಕರಾಗಿದ್ದ ಇವರು ತಮ್ಮ ಅವಧಿಯಲ್ಲಿ ಸಾಕಷ್ಟು ವಿದ್ಯಾರ್ಥಿಗಳಿಗೆ ನಾನಾ ರೀತಿಯಲ್ಲಿ ಸಹಾಯ ಮಾಡಿದ್ದನ್ನು ಅಂದಿನ ವಿದ್ಯಾರ್ಥಿಗಳು ಇಂದಿಗೂ ನೆನೆಯುತ್ತಾರೆ.
ಮಹಾದೇವ ನಾಯ್ಕರು (78) ಇದೇ ಮೇ 15, ಗುರುವಾರದಂದು ಹೃದಯಾಘಾತದಿಂದ ನಿಧನರಾಗಿದ್ದು, ಮೃತರು ಪತ್ನಿ ಮತ್ತು ಮಗನನ್ನು ಅಗಲಿದ್ದಾರೆ.
ಇದೇ ಮೇ 27, ಮಂಗಳವಾರ ಮೃತರ ಆತ್ಮ ಸದ್ಗತಿಗಾಗಿ ದೇವರಹಕ್ಕಲದ ಸ್ವಗೃಹದಲ್ಲಿ ಮಿತ್ರ ಭೋಜನ ಇಟ್ಟುಕೊಂಡಿದ್ದೇವೆ. ಮೃತರ ಗೆಳೆಯರು, ಒಡನಾಡಿಗಳು ಈ ಕಾರ್ಯಕ್ಕೆ ಬಂದು ಮೃತರ ಆತ್ಮಕ್ಕೆ ಸದ್ಗತಿ ಪ್ರಾರ್ಥಿಸಬೇಕೆಂದು ಮೃತರ ಮಗ, ಹಿರಿಯ ಪತ್ರಕರ್ತ ಸಂತೋಷ ನಾಯ್ಕ ಕೋರಿದ್ದಾರೆ.
ಇದನ್ನೂ ಓದಿ
- “ರೈತರನ್ನು ಮದುವೆಯಾಗುವ ಮಹಿಳೆಯರಿಗೆ ಪ್ರೋತ್ಸಾಹ ಧನ ನೀಡುವಂತೆ ಸಿಎಂಗೆ ಪತ್ರ ಬರೆದ ಶಾಸಕ
- Bjp/ಬಿಜೆಪಿ ಉತ್ತರಕನ್ನಡ ಜಿಲ್ಲಾ ರೈತಮೋರ್ಚಾ ಅಧ್ಯಕ್ಷರಾಗಿ ಅನಂತಮೂರ್ತಿ ಹೆಗಡೆ ನೇಮಕ
- Accident News/ಭೀಕರ ರಸ್ತೆ ಅಪಘಾತ, ಸ್ಥಳದಲ್ಲೆ ಓರ್ವ ಸಾವು
- Bhatkal Crime News/ ಭಟ್ಕಳದಲ್ಲಿ ಕಾಡುಪ್ರಾಣಿ ಹತ್ಯೆ ಶಂಕೆ: 21 ಕೆಜಿ ಮಾಂಸ, ಜಿಂಕೆ ಕೊಬ್ಬು, ಎರಡು ಏರ್ಗನ್ ವಶಕ್ಕೆ




