ಸುದ್ದಿಬಿಂದು ಬ್ಯೂರೋ ವರದಿ
ಶಿರಸಿ : ಜನರ ಸಂಚಾರಕ್ಕೆ ತೊಂದರೆಯಾಗಿದ್ದ ಶಿರಸಿ-ಕುಮಟಾ ರಾಷ್ಟ್ರೀಯ ಹೆದ್ದಾರಿಯ ನಿಲೇಕಣಿ ಹೆದ್ದಾರಿಯನ್ನ ಮೂರು ದಿನದಲ್ಲಿ ಸರಿಪಡಿಸದಿದ್ದರೆ, ಸ್ವಂತ ಹಣದಲ್ಲಿ ಜನತೆಯೊಂದಿಗೆ ಗುಂಡಿ ಮುಚ್ಚುವುದರ ಜೊತೆಗೆ RNSಕಂಪನಿ ವಿರುದ್ಧ ಹೈಕೋರ್ಟ್ನಲ್ಲಿ PIL ದಾಖಲಿಸುವುದಾಗಿ ಹೋರಾಟಗಾರ ಅನಂತಮೂರ್ತಿ ಹೆಗಡೆ ಎಚ್ಚರಿಕೆ ನೀಡಿದ್ದರು ಇದರ ಬೆನ್ನಲ್ಲೇ ಇದೀಗ RNS ಕಂಪನಿ ಹೆದ್ದಾರಿ ಗುಂಡಿ ಸರಿಪಡಿಸುವ ಕಾರ್ಯಕೈಗೊಂಡಿದೆ.
ಶಿರಸಿ ನಗರದ ನಿಲೇಕಣಿ ಪ್ರದೇಶದಲ್ಲಿ RNS ಕಂಪನಿಯ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಹೆದ್ದಾರಿ ಭಾರೀ ಪ್ರಮಾಣದಲ್ಲಿ ಗುಂಡಿಬಿದ್ದು ಪಾದಚಾರಿಗಳು ಸಹ ಓಡಾಡದಂತಹ ಪರಿಸ್ಥಿತಿ ಉಂಟಾಗಿತ್ತು. ಇದರಿಂದಾಗಿ ವಾಹನ ಸವಾರರು ಪರದಾಡುವಂತಾಗಿತ್ತು.ಈ ಬಗ್ಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿತ್ತು. ಸಂಬಂಧಿಸಿದ ಅಧಿಕಾರಿಗಳಿಗೂ ಕೂಡ ಹೆದ್ದಾರಿ ದುರಸ್ತಿಗಾಗಿ ಮನವಿ ಮಾಡಲಾಗಿತ್ತು. ಆದರೆ ಕಾಮಗಾರಿ ಕೈಗೆತ್ತುಕೊಂಡ ಕಂಪನಿ ಅದ್ಯಾವುದಕ್ಕೂ ತಲೆ ಕೆಡಿಸಿಕೊಂಡಿರಲಿಲ್ಲ.
ಹೆದ್ದಾರಿಯ ಅವ್ಯವಸ್ಥೆಯಿಂದಾಗಿ ಜನ ಪರದಾಡತ್ತಿರುವುದನ್ನ ಅರಿತ ಹೋರಾಟಗಾರ ಅನಂತಮೂರ್ತಿ ಹೆಗಡೆ ನಿನ್ನೆಯಷ್ಟೆ ಮಧ್ಯಗಳ ಮೂಲಕ ಗುತ್ತಿಗೆ ಕಂಪನಿಗೆ ಖಡಕ್ ಎಚ್ಚರಿಕೆಯನ್ನ ಕೊಟ್ಟಿದ್ದರು ಇದರ ಬೆನ್ನಲ್ಲಿಯೆ ಗುಂಡಿ ಮುಚ್ಚುತ್ತಿರುವುದು ಜನತೆಗೆ ಸಮಾಧಾನದ ತಂದಿದೆ. ಈ ಬಗ್ಗೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕೂಡ ಆರ್.ಎನ್.ಎಸ್. ಕಂಪನಿಯ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಹೆದ್ದಾರಿಯಲ್ಲಿ ಬಿದ್ದ ಗುಂಡಿ ಸರಿಪಡಿಸುವಂತೆ ಒತ್ತಾಯಿಸಿರುವುದನ್ನ ಇಲ್ಲಿ ಸ್ಮರಿಸಬಹುದಾಗಿದೆ.
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಆರ್.ಎನ್.ಎಸ್. ಕಂಪನಿಗೆ ಆಗ್ರಹಿಸಿ ತುರ್ತಾಗಿ ಜನತೆಯ ಸಮಸ್ಯೆಗೆ ಸ್ಪಂದಿಸಿದ್ದಾರೆ. ರಸ್ತೆ ನಿರ್ವಹಣೆ ಗುತ್ತಿಗೆದಾರ ಕಂಪನಿಯ ಕೆಲಸ. ನಾವು ಎಚ್ಚರಿಕೆ ನೀಡಿದ ಮೇಲೆ ಕೆಲಸ ಮಾಡುವುದಲ್ಲ. ಎಲ್ಲವನ್ನೂ ಆಗ್ರಹಿಸಿ ಮಾಡುವ ಪದ್ಧತಿ ಸರಿಯಲ್ಲ. ಈಗಲಾದರೂ ರಸ್ತೆ ಸರಿಪಡಿಸಿದ್ದು ಸಮಾಧಾನ ತಂದಿದೆ. ಇದು ಎಲ್ಲರ ಸಹಕಾರಕ್ಕೆ ಸಿಕ್ಕ ಜಯವಷ್ಟೇ. ಸಹಕಾರ ನೀಡಿದ ಎಲ್ಲ ಜನಪ್ರತಿನಿಧಿಗಳಿಗೆ ಜನತೆಯ ಪರವಾಗಿ ಧನ್ಯವಾದ ಸಲ್ಲಿಸುವುದಾಗಿ ಅನಂತ ಮೂರ್ತಿ ಹೆಗಡೆ ತಿಳಿಸಿದ್ದಾರೆ.
ಕಾಟಾಚಾರದ ಕೆಲಸವಾದರೆ ಹೋರಾಟ ನಿಲ್ಲದು:
ಭಾನುವಾರ ಬೆಳಿಗ್ಗಿನಿಂದ ಹೆದ್ದಾರಿ ಗುಂಡಿ ಮುಚ್ಚುವ ಕೆಲಸ ಆರಂಭವಾಗಿದ್ದು, ಕೇವಲ ಇದು ಜನತೆಯ ಕಣ್ಣೊರೆಸುವ ಕಾರಣಕ್ಕೆ ಗುಂಡಿ ಮುಚ್ಚಿದರೆ ಹೋರಾಟವನ್ನು ಕೈಬಿಡುವ ಪ್ರಶ್ನೆಯೇ ಇಲ್ಲ. ಈ ಹೆದ್ದಾರಿಯಲ್ಲಿ ಸರಿಯಾದ ರೀತಿಯಲ್ಲಿ ಮುಚ್ಚುವ ಮೂಲಕ ಜನತೆಯ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು.ಇಲ್ಲದೆ ಹೋದರೆ ನಮ್ಮ ಹೋರಾಟ ನಿಲ್ಲುವುದಿಲ್ಲವೆಂದು ಅನಂತಮೂರ್ತಿ ಹೆಗಡೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ..
ಇದನ್ನೂ ಓದಿ