ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ : ಚಿತ್ತಾಕುಲ ಗ್ರಾ.ಪಂ ಹಾಲಿ ಸದಸ್ಯ ಹಾಗೂ ಕಾರವಾರ ಅಂಕೋಲಾ ಕ್ಷೇತ್ರದ ಶಾಸಕ ಸತೀಶ ಸೈಲ್ ಅವರ ಆಪ್ತನಾಗಿದ್ದ ವಿಜಯ ದೇಸಾಯಿ ಹೃದಯಘಾತದಿಂದ ಸಾವನ್ನಪ್ಪಿದ್ದಾನೆ
ವಿಜಯ ದೇಸಾಯಿ ಮನೆಯಲ್ಲಿ ಇರುವಾಗಲೆ ಎದೆ ನೋವು ಕಾಣಿಸಿಕೊಂಡಿದ್ದು, ತಕ್ಷಣ ಅವರನ್ನ ಕಾರವಾರ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ವಿಜಯ ದೇಶಾಯಿ ಗೆ ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನುವ ಸುದ್ದಿ ತಿಳಿದ ಶಾಸಕ ಸತೀಶ ಸೈಲ್ ಹಾಗೂ ಕಾಂಗ್ರೆಸ್ ಮುಖಂಡರು ಸೇರಿದಂತೆ ಅನೇಕರು ಆಸ್ಪತ್ರೆಗೆ ಬರುವಷ್ಟರಲ್ಲಿ ವಿಜಯ ಕೊನೆಯುಸಿರು ಎಳೆದಿದ್ದಾನೆ ಎನ್ನಲಾಗಿದೆ.
ಸತೀಶ ಅವರ ಪ್ರತಿ ಚುನಾವಣೆಯಲ್ಲಿಯೂ ಸಹ ವಿಜಯ ದೇಸಾಯಿ ಹಗಲಿರು ದುಡಿದು ಸೈಲ್ ಶಾಸಕರಾಗುವಲ್ಲಿ ಶ್ರಮಿಸಿದ್ದಾರೆ. ವಿಜಯ ದೇಸಾಯಿ ಚಿತ್ತಾಕುಲ ಗ್ರಾಮ ಪಂಚಾಯತ ಸದಸ್ಯರಾಗುವ ಮೂಲಕ ಸಾಕಷ್ಟು ಅಭಿವೃದ್ಧಿ ಕಾರ್ಯವನ್ನ ಮಾಡಿದ್ದಾರೆ. ವಿಜಯ ದೇಸಾಯಿ ಅವರನ್ನ ಕಳೆದುಕೊಂಡಿರುವುದಕ್ಕೆ ಶಾಸಕ ಸತೀಶ ಸೈಲ್ ನೊಂದುಕೊಂಡಿದ್ದಾರೆ.
ಇದನ್ನೂ ಓದಿ