ಸುದ್ದಿಬಿಂದು ಬ್ಯೂರೋ ವರದಿ
ಶಿರಸಿ : ಪೆಹಲ್ಗಾಮ್ ದಾಳಿಗೆ ಪ್ರತಿಕಾರವಾಗಿ ಭಾರತ ಸೇನೆ ಕೈಗೊಂಡಿರುವ ಆಪರೇಷನ್ ಸಿಂಧೂರ್ ಕಾರ್ಯಚರಣೆಯಲ್ಲಿ ತೊಡಗಿಕೊಂಡಿರುವ ಭಾರತದ ಸೈನಿಕರಿಗೆ ಶಕ್ತಿ ನೀಡಲೆಂದು ಶಿರಸಿ-ಸಿದ್ದಾಪುರ ಕ್ಷೇತ್ರದ‌ ಶಾಸಕ ಭೀಮಣ್ಣ ನಾಯ್ಕ ಅವರು ಇಂದು ಮಾರಿಕಾಂಬಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದರು.

ಮಾರಿಕಾಂಬಾ ದೇವಿಗೆ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಶಾಸಕರು ಪಾಕಿಸ್ಥಾನದ ಉಗ್ರರು ಪಹಲ್ಗಾಮ್‌ದಲ್ಲಿ ನಮ್ಮ ಭಾರತೀಯರ ನೆತ್ತರು ಹರಿಸಿರುವುದು ಸಹಿಸಲಾರದ ಅಕ್ಷಮ್ಯ ಅಪರಾದ.ಇದಕ್ಕೆ ಪ್ರತಿಕಾರವಾಗಿ ನಾವು ಪಾಕಿಸ್ಥಾನಕ್ಕೆ ಉಹಿಸಲಾಗದ ಮುಟ್ಟಿ ನೋಡಿಕೊಳ್ಳುವಂತಹ ತಕ್ಕ ಪಾಠ ಕಲಿಸುತ್ತಿದ್ದೇವೆ.ಉಗ್ರರ ಸ್ಥಾನವಾಗಿರುವ ಪಾಕಿಸ್ಥಾನ ಇನ್ನೆಂದೂ ಇಂತಹ ಪಾಪಿ ಕೆಲಸಕ್ಕೆ ಮುಂದಾಗಬಾರದು.ಒಮ್ಮೆ ಮಾಡಿದರೇ ಭಾರತದಿಂದ ಎಂತಹ ಪಾಠ ಕಲಿಯಬಹುದೆಂದು ಇಡೀ ಜಗತ್ತೆ ನೋಡುತ್ತಿದೆ ಎಂದರು.

ಈ ಸಂದರ್ಭದಲ್ಲಿ ನಗರ ಯೋಜನಾ ಪ್ರಾಧಿಕಾರದ ಅದ್ಯಕ್ಷ ಜಗದೀಶ ಗೌಡ್ರು,ಪ್ರಮುಖರಾದ,ಸತೀಶ ನಾಯ್ಕ,ನಾಗರಾಜ ಮುರುಡೇಶ್ವರ, ಪ್ರದೀಪ ಶೆಟ್ಟಿ,ಗಣೇಶ ದಾವಣಗೆರೆ, ಶೈಲೇಶ ಜೋಗಳೆಕರ್, ವಿವೇಕ ಪೂಜಾರಿ,ಜೋಫಿ ಪೀಟರ್, ಬಾಳಾ ರೇವಣಕರ್ ಇತರರಿದ್ದರು.

ಇದನ್ನೂ ಓದಿ